Tuesday, September 27, 2016

ಅಭಿನಂದನೆಗಳು..

ನನ್ನ ಊರು ನನ್ನ ಜನರ ಬಗ್ಗೆ ಯಾರೂ ನಮ್ಮವರು ಸರಿಯಾಗಿ ಬರೆಯುತ್ತಲೇ ಇಲ್ಲವಲ್ಲಾ ಎಂಬ ನನ್ನ ಕೊರಗನ್ನು ನಿವಾರಿಸಿದ್ದು ಗೆಳತಿ ನಾಗವೇಣಿ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಾಗಿ ಅಭಿನಂದನೆಗಳು. ಇದು ವಡ್ಡರ್ಸೆಯವರ ಶಿಷ್ಯಕೋಟಿಯಲ್ಲಿ ಒಬ್ಬರಿಗೆ ಸಂದ ಪ್ರಶಸ್ತಿಯೂ ಹೌದು. ಪ್ರಶಸ್ತಿಯ ಬಹುಪಾಲು ಸಲ್ಲಬೇಕಾಗಿರುವುದು ನಾಗವೇಣಿಯ ಎದೆಯೊಳಗೆ ಕೂತು ಕತೆ ಬರೆಯುತ್ತಿದ್ದ ನಾಗವೇಣಿಯ ಅಮ್ಮನಿಗೆ. ಅರೆಗ್ ಲಾ ಸೊಲ್ಮೆಲು.
ಜಗದೀಶ್ ಕೊಪ್ಪ, ಹನುಮಂತಯ್ಯ, ಮೋಹನ್ ಸೇರಿದಂತೆ ಎಲ್ಲರಿಗೂ ಅಭಿನಂದನೆಗಳು. 
ಇದರ ಜತೆ ಪ್ರಶಸ್ತಿ ವಾಪಸು ನೀಡುವ ದುರ್ದಿನಗಳು ಬಾರದಿರಲಿ ಎಂದೂ ಆಶಿಸುತ್ತೇನೆ

No comments:

Post a Comment