Showing posts with label ನವೀನ್ ಸೂರಿಂಜೆ. Show all posts
Showing posts with label ನವೀನ್ ಸೂರಿಂಜೆ. Show all posts
Sunday, January 25, 2015
ಗೆಳೆಯ ನವೀನ್ ಸೂರಿಂಜೆ, ಕಾವ್ಯ ಅಚ್ಯುತ್ ಸರಳ ಮದುವೆ.
Tuesday, December 16, 2014
ಮರೆತು ಹೋದದ್ದು....
ಮರೆತು ಹೋದದ್ದು....
‘ ನಿಮ್ಮ ಭಾಷಣದ 50 ನಿಮಿಷದ ರೆಕಾರ್ಡಿಂಗ್ ನನ್ನಲ್ಲಿದೆ’ ಎಂದು ಸ್ನೇಹಿತರಾದ ಐವನ್ ಡಿಸಿಲ್ವ ಅವರು ಹೇಳಿದಾಗಲೇ ಮಂಗಳೂರಿನಲ್ಲಿ ನಡೆದ ಜನನುಡಿಯ ಗೋಷ್ಠಿಯಲ್ಲಿ ನಾನು ಜಾಸ್ತಿ ಮಾತನಾಡಿದ್ದೇನೆ ಎಂದು ಗೊತ್ತಾಗಿದ್ದು. ನೀಲಾ ಅವರ ಪ್ರಾಸ್ತವಿಕ ಭಾಷಣ ಮತ್ತು ಕವಿಗೋಷ್ಠಿಯೊಂದನ್ನು ಹೊರತುಪಡಿ ಎರಡು ದಿನಗಳಲ್ಲಿ ಬಹುತೇಕ ಎಲ್ಲರ ಭಾಷಣಗಳನ್ನು ಕೇಳಿದ್ದ ನಾನು, ಸೇಡು ತೀರಿಸಿಕೊಳ್ಳಲು ನನಗರಿವಿಲ್ಲದಂತೆ ಇಷ್ಟೊಂದು ದೀರ್ಘವಾಗಿ ಮಾತನಾಡಿರಬಹುದು. ಕ್ಷಮೆ ಇರಲಿ.
ಇಷ್ಟುದ್ದ ಮಾತನಾಡಿದರೂ ಹೇಳಬೇಕಾದ ಕೆಲವು ಮುಖ್ಯ ವಿಚಾರಗಳನ್ನು ಹೇಳಿಲ್ಲ ಮತ್ತು ಹೇಳಿದ ವಿಚಾರಗಳನ್ನು ಕೂಡಾ ಸ್ಪಷ್ಟಪಡಿಸಿಲ್ಲ ಎಂದು ನನಗನಿಸಿದೆ. ಆ ಬಗ್ಗೆ ಮುಂದೆ ಚರ್ಚಿಸುವ. ಆದರೆ ಮುಖ್ಯವಾಗಿ ಜನನುಡಿಯನ್ನು ಯಶಸ್ವಿಗೊಳಿಸಲು ಹಗಲು ರಾತ್ರಿ ಶ್ರಮಿಸಿದ್ದ ಮುನೀರ್ ಮತ್ತು ಅವರ ಸಂಗಾತಿಗಳನ್ನು ನಾನು ನೆನೆಸಿಕೊಳ್ಳಬೇಕಿತ್ತು. ಆ ಲೋಪ ನನ್ನಿಂದಾಗಿದೆ. ಕೊರತೆಗಳ ಪಟ್ಟಿಯನ್ನು ಸಲೀಸಾಗಿ ಮಾಡಿಬಿಡಬಹುದು, ಸಂಘಟನೆಯ ಕಷ್ಟವನ್ನು ಅನುಭವಿಸಿದವರೇ ಬಲ್ಲರು. ಅದೂ ಮಂಗಳೂರಿನಲ್ಲಿ ಇಂತಹದ್ದೊಂದು ಕಾರ್ಯಕ್ರಮವೊಂದನ್ನು ಆಯೋಜಿಸುವುದೆಂದರೆ ಅಪ್ಪಳಿಸಿ ಬರುವ ಕಡಲಿನ ತೆರೆಗಳ ಎದುರು ಈಜುವುದೆಂದೇ ಅರ್ಥ.
ಇಷ್ಟೊಂದು ದಿನಗಳ ದಣಿವರಿಯದ ಕೆಲಸದ ನಂತರವೂ ಮುನೀರ್ ಮತ್ತು ಗೆಳೆಯರ ಮುಖಗಳಲ್ಲಿ ನನಗೆ ಸುಸ್ತು ಕಾಣಿಸಲಿಲ್ಲ. ಭಾನುವಾರ ರಾತ್ರಿ ಎಲ್ಲ ಮುಗಿದು ಊಟಕ್ಕೆ ಹೊರಟಾಗಲೂ ಕಿರಿಯರಾದ ಜೀವನ್ ಕುಮಾರ್ ಕುತ್ಯಾಡಿ ಮತ್ತು ಈರ್ಷಾದ್ ನಾನು ಆಡಿದ ಮಾತುಗಳ ಬಗ್ಗೆ ಸ್ಪಷ್ಟೀಕರಣ ಕೇಳಿ ನನ್ನನ್ನು ಹಿಡಿದು ನಿಲ್ಲಿಸಿದ್ದರು. ನಗು, ತಮಾಷೆ, ತುಂಟಾಟ ಎಲ್ಲವೂ ಮುಂದುವರಿದಿತ್ತು. ಮುನೀರ್ ಸೇರಿದಂತೆ ಎಲ್ಲರೂ ಕನಿಷ್ಠ 3-4 ಕಿಲೋ ತೂಕ ಕಳೆದುಕೊಂಡಿರಬೇಕು. ಆದರೆ ಅವರ ಉತ್ಸಾಹ ಕುಂದಿರಲಿಲ್ಲ. ನಾನಂತೂ ಇವರೆಲ್ಲರ ಜತೆ ಸೇರಿ ಹತ್ತು ವರ್ಷ ಕಿರಿಯವನಾಗಿಬಿಟ್ಟೆ, ಬದುಕಿನ ದಾರಿಯಲ್ಲಿ ಭರವಸೆಯ ಬೆಳಕನ್ನು ಕಂಡೆ. ವೃತ್ತಿ, ವೈಯಕ್ತಿಕ ಬದುಕು ಮತ್ತು ಆರೋಗ್ಯದ ಬಗ್ಗೆ ಕಾಳಜಿ ಇರಲಿ ಎಂದಷ್ಟೇ ಈ ಕಿರಿಯ ಗೆಳೆಯರಿಗೆ ಹೇಳಬಲ್ಲೆ. ಕಷ್ಟವನ್ನು ಹಂಚಿಕೊಳ್ಳಲು ನಿಮ್ಮ ಜತೆಯಲ್ಲಿ ಇರುತ್ತೇನೆ.
‘ ನಿಮ್ಮ ಭಾಷಣದ 50 ನಿಮಿಷದ ರೆಕಾರ್ಡಿಂಗ್ ನನ್ನಲ್ಲಿದೆ’ ಎಂದು ಸ್ನೇಹಿತರಾದ ಐವನ್ ಡಿಸಿಲ್ವ ಅವರು ಹೇಳಿದಾಗಲೇ ಮಂಗಳೂರಿನಲ್ಲಿ ನಡೆದ ಜನನುಡಿಯ ಗೋಷ್ಠಿಯಲ್ಲಿ ನಾನು ಜಾಸ್ತಿ ಮಾತನಾಡಿದ್ದೇನೆ ಎಂದು ಗೊತ್ತಾಗಿದ್ದು. ನೀಲಾ ಅವರ ಪ್ರಾಸ್ತವಿಕ ಭಾಷಣ ಮತ್ತು ಕವಿಗೋಷ್ಠಿಯೊಂದನ್ನು ಹೊರತುಪಡಿ ಎರಡು ದಿನಗಳಲ್ಲಿ ಬಹುತೇಕ ಎಲ್ಲರ ಭಾಷಣಗಳನ್ನು ಕೇಳಿದ್ದ ನಾನು, ಸೇಡು ತೀರಿಸಿಕೊಳ್ಳಲು ನನಗರಿವಿಲ್ಲದಂತೆ ಇಷ್ಟೊಂದು ದೀರ್ಘವಾಗಿ ಮಾತನಾಡಿರಬಹುದು. ಕ್ಷಮೆ ಇರಲಿ.
ಇಷ್ಟುದ್ದ ಮಾತನಾಡಿದರೂ ಹೇಳಬೇಕಾದ ಕೆಲವು ಮುಖ್ಯ ವಿಚಾರಗಳನ್ನು ಹೇಳಿಲ್ಲ ಮತ್ತು ಹೇಳಿದ ವಿಚಾರಗಳನ್ನು ಕೂಡಾ ಸ್ಪಷ್ಟಪಡಿಸಿಲ್ಲ ಎಂದು ನನಗನಿಸಿದೆ. ಆ ಬಗ್ಗೆ ಮುಂದೆ ಚರ್ಚಿಸುವ. ಆದರೆ ಮುಖ್ಯವಾಗಿ ಜನನುಡಿಯನ್ನು ಯಶಸ್ವಿಗೊಳಿಸಲು ಹಗಲು ರಾತ್ರಿ ಶ್ರಮಿಸಿದ್ದ ಮುನೀರ್ ಮತ್ತು ಅವರ ಸಂಗಾತಿಗಳನ್ನು ನಾನು ನೆನೆಸಿಕೊಳ್ಳಬೇಕಿತ್ತು. ಆ ಲೋಪ ನನ್ನಿಂದಾಗಿದೆ. ಕೊರತೆಗಳ ಪಟ್ಟಿಯನ್ನು ಸಲೀಸಾಗಿ ಮಾಡಿಬಿಡಬಹುದು, ಸಂಘಟನೆಯ ಕಷ್ಟವನ್ನು ಅನುಭವಿಸಿದವರೇ ಬಲ್ಲರು. ಅದೂ ಮಂಗಳೂರಿನಲ್ಲಿ ಇಂತಹದ್ದೊಂದು ಕಾರ್ಯಕ್ರಮವೊಂದನ್ನು ಆಯೋಜಿಸುವುದೆಂದರೆ ಅಪ್ಪಳಿಸಿ ಬರುವ ಕಡಲಿನ ತೆರೆಗಳ ಎದುರು ಈಜುವುದೆಂದೇ ಅರ್ಥ.
ಇಷ್ಟೊಂದು ದಿನಗಳ ದಣಿವರಿಯದ ಕೆಲಸದ ನಂತರವೂ ಮುನೀರ್ ಮತ್ತು ಗೆಳೆಯರ ಮುಖಗಳಲ್ಲಿ ನನಗೆ ಸುಸ್ತು ಕಾಣಿಸಲಿಲ್ಲ. ಭಾನುವಾರ ರಾತ್ರಿ ಎಲ್ಲ ಮುಗಿದು ಊಟಕ್ಕೆ ಹೊರಟಾಗಲೂ ಕಿರಿಯರಾದ ಜೀವನ್ ಕುಮಾರ್ ಕುತ್ಯಾಡಿ ಮತ್ತು ಈರ್ಷಾದ್ ನಾನು ಆಡಿದ ಮಾತುಗಳ ಬಗ್ಗೆ ಸ್ಪಷ್ಟೀಕರಣ ಕೇಳಿ ನನ್ನನ್ನು ಹಿಡಿದು ನಿಲ್ಲಿಸಿದ್ದರು. ನಗು, ತಮಾಷೆ, ತುಂಟಾಟ ಎಲ್ಲವೂ ಮುಂದುವರಿದಿತ್ತು. ಮುನೀರ್ ಸೇರಿದಂತೆ ಎಲ್ಲರೂ ಕನಿಷ್ಠ 3-4 ಕಿಲೋ ತೂಕ ಕಳೆದುಕೊಂಡಿರಬೇಕು. ಆದರೆ ಅವರ ಉತ್ಸಾಹ ಕುಂದಿರಲಿಲ್ಲ. ನಾನಂತೂ ಇವರೆಲ್ಲರ ಜತೆ ಸೇರಿ ಹತ್ತು ವರ್ಷ ಕಿರಿಯವನಾಗಿಬಿಟ್ಟೆ, ಬದುಕಿನ ದಾರಿಯಲ್ಲಿ ಭರವಸೆಯ ಬೆಳಕನ್ನು ಕಂಡೆ. ವೃತ್ತಿ, ವೈಯಕ್ತಿಕ ಬದುಕು ಮತ್ತು ಆರೋಗ್ಯದ ಬಗ್ಗೆ ಕಾಳಜಿ ಇರಲಿ ಎಂದಷ್ಟೇ ಈ ಕಿರಿಯ ಗೆಳೆಯರಿಗೆ ಹೇಳಬಲ್ಲೆ. ಕಷ್ಟವನ್ನು ಹಂಚಿಕೊಳ್ಳಲು ನಿಮ್ಮ ಜತೆಯಲ್ಲಿ ಇರುತ್ತೇನೆ.
Tuesday, November 18, 2014
Subscribe to:
Posts (Atom)