Showing posts with label ಸ್ವಾಮಿ ವಿವೇಕಾನಂದ. Show all posts
Showing posts with label ಸ್ವಾಮಿ ವಿವೇಕಾನಂದ. Show all posts
Friday, February 6, 2015
ವರ್ತೂರು : ಸ್ವಾಮಿ ವಿವೇಕಾನಂದರ ದಿನಾಚರಣೆ ಹಾಗೂ ಜನಜಾಗೃತಿ
Monday, January 26, 2015
ಹಿಂದೆ ಬರೆದಿದ್ದ ಸ್ವಾಮಿ ವಿವೇಕಾನಂದರ ಅಂಕಣ ಕುರಿತು..
ಎರಡು ವರ್ಷಗಳ ಹಿಂದೆ ಪ್ರಜಾವಾಣಿಯಲ್ಲಿ ಸ್ವಾಮಿ ವಿವೇಕಾನಂದರ ಮನುಷ್ಯ ಮುಖದ ಬಗ್ಗೆ ಬರೆದ ಅಂಕಣದ ಸತ್ಯಾಸತ್ಯತೆಯನ್ನು ಕೆಲವರು ಪ್ರಶ್ನಿಸುತ್ತಾ ಬಂದಿದ್ದಾರೆ. ನನ್ನ ಅಂಕಣದಲ್ಲಿಯೇ ಅವರ ಪ್ರಶ್ನೆಗೆ ಉತ್ತರ ಇದೆ. ಆದರೆ ಈ ರೀತಿ ಪ್ರಶ್ನಿಸುವವರಲ್ಲಿ ಬಹಳಷ್ಟು ಮಂದಿ ಆ ಅಂಕಣವನ್ನು ಓದಿಲ್ಲ. ಓದಿಯೂ ವಿರೋಧಿಸಿದವರಿಗೆ ಇದ್ದ ದುರುದ್ದೇಶ ಸ್ಪಷ್ಟವಾಗಿತ್ತು. ಎಷ್ಟೋ ಅಮಾಯಕ ಯುವಕರಿಗೆ ಕೆಲವು ಕಿಡಿಗೇಡಿಗಳು ಅಂಕಣದ ಆಯ್ದಭಾಗಗಳನ್ನಷ್ಟೇ ಕಳುಹಿಸಿ ಪ್ರಚೋದಿಸಿದ್ದಾರೆ. ನನ್ನ ಅಂಕಣವನ್ನು ಅರ್ಥಮಾಡಿಕೊಳ್ಳಲಾಗದ ಮೂಢಮತಿಗಳಿಗೆ ಇನ್ನಷ್ಟು ವಿವರಣೆಯ ಅಗತ್ಯ ಇರಬಹುದೆಂದು ಇನ್ನೊಂದು ಲೇಖನ ಪ್ರಜಾವಾಣಿಯಲ್ಲಿಯೇ ಬರೆದಿದ್ದೆ. (ಇದನ್ನೇ ಸೂಲಿಬೆಲೆಯಂತಹ ಪ್ರಚೋದನಕಾರಿಗಳು ಕ್ಷಮೆಯಾಚನೆ ಎಂದು ಸುಳ್ಳು ಬೊಗಳುತ್ತಿದ್ದಾರೆ) ಅದರ ನಂತರ ವಿರೋಧಿಸುವವರ ಬತ್ತಳಿಕೆ ಖಾಲಿಯಾಗಿ ಮೌನವಾಗಿದ್ದರು. ಈಗ ಮತ್ತೆ ಅಂಕಣ ಚರ್ಚೆಗೀಡಾಗಿದೆ. ಈ ಹಿನ್ನೆಲೆಯಲ್ಲಿ ಅಂಕಣಕ್ಕೆ ಆಧಾರವಾಗಿದ್ದ ಪುಸ್ತಕ ಮತ್ತು ಲೇಖಕನ ಬಗ್ಗೆ ಎಲ್ಲರೂ ಇನ್ನಷ್ಟು ತಿಳಿದುಕೊಳ್ಳುವ ಅಗತ್ಯ ಇದೆ ಎಂದು ನನಗನಿಸಿ ಒಂದಿಷ್ಟು ಮಾಹಿತಿಯನ್ನು ಕೊಡುತ್ತಿದ್ದೇನೆ.
ಖ್ಯಾತ ಬಂಗಾಳಿ ಲೇಖಕ ಮಣಿ ಸಂಕರ್ ಮುಖರ್ಜಿ ಅವರು 2003ರಲ್ಲಿ ‘ಅಚೆನಾ ಅಜೆನಾ ವಿವೇಕಾನಂದ’ (ಅಪರಿಚಿತ, ಅಪ್ರಕಟಿತ ವಿವೇಕಾನಂದ) ಎಂಬ ಪುಸ್ತಕವನ್ನು ಬಂಗಾಳಿಯಲ್ಲಿ ಬರೆದಿದ್ದರು. ಇದರ ಲಕ್ಷಾಂತರ ಪ್ರತಿಗಳು ಮಾರಾಟವಾಗಿದ್ದವು. ಮಣಿಸಂಕರ್ ಮುಖರ್ಜಿ ಬಂಗಾಳಿಯ ಖ್ಯಾತ ಕಾದಂಬರಿಕಾರ. ಅವರ ಎರಡು ಕಾದಂಬರಿಗಳಾದ ‘ಸೀಮಾಬದ್ಧ’ ಮತ್ತು ‘ಜನ ಅರಣ್ಯ’ ಎಂಬ ಎರಡು ಕಾದಂಬರಿಗಳನ್ನು ಸತ್ಯಜಿತ್ ರೇ ಚಲನಚಿತ್ರ ಮಾಡಿದ್ದರು. ತನ್ನ ಹನ್ನೊಂದನೆ ವಯಸ್ಸಿನಲ್ಲಿಯೇ ವಿವೇಕಾನಂದರ ಪ್ರಭಾವಕ್ಕೊಳಗಾಗಿದ್ದೆ ಎಂದು ಹೇಳಿಕೊಂಡಿರುವ ಮುಖರ್ಜಿ ವರ್ಷಗಳ ಕಾಲ ಕಷ್ಟಪಟ್ಟು ನಡೆಸಿದ ಸಂಶೋಧನೆಯ ಫಲ ಈ ಪುಸ್ತಕ.
ಇದು ಮುಖ್ಯವಾಗಿ ವಿವೇಕಾನಂದರ ಖಾಸಗಿ ಬದುಕಿಗೆ ಸಂಬಂಧಿಸಿದ್ದು. ಒಬ್ಬ ಮನುಷ್ಯನಾಗಿ ವಿವೇಕಾನಂದರು ಹೇಗಿದ್ದರು? ಸನ್ಯಾಸಿಯಾಗುವ ಮೊದಲು ಮತ್ತು ನಂತರ ಅವರ ಜೀವನದಲ್ಲಿ ತಾಯಿಯ ಪಾತ್ರ ಏನಿತ್ತು? ಕುಟುಂಬದ ಹಿರಿಯ ಮಗನ ಜವಾಬ್ದಾರಿ ಮತ್ತು ಸನ್ಯಾಸಿಯ ಕರ್ತವ್ಯಗಳ ನಡುವಿನ ಅವರ ತಾಕಲಾಟಗಳೇನಿತ್ತು? ಪಶ್ಚಿಮದ ರಾಷ್ಟ್ರಗಳಿಗೆ ಹೋಗಿ ವೇದಾಂತ ಮತ್ತು ಬಿರಿಯಾನಿಯನ್ನು ಪ್ರಚಾರ ಮಾಡಲು ಅವರಿಗೆ ಪ್ರೇರಣೆ ಏನಿತ್ತು? ಕುಟುಂಬದ ಆಸ್ತಿಗೆ ಸಂಬಂಧಿಸಿದಂತೆ ದೀರ್ಘಕಾಲ ನಡೆದ ಕಾನೂನಿನ ಸಮರ ಅವರ ಆರೋಗ್ಯದ ಮೇಲೆ ಪರಿಣಾಮ ಬೀರಿ ಅಕಾಲ ಸಾವಿಗೆ ಕಾರಣವಾಯಿತೇ? ಅವರಿಗೆ ಯಾವುದೆಲ್ಲ ಕಾಯಿಲೆಗಳಿದ್ದವು? ಅದಕ್ಕೆ ಅವರು ಯಾವ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದರು? ಅವರು ಪದವಿ ಶಿಕ್ಷಣದಲ್ಲಿ ಬೇರೆಬೇರೆ ವಿಷಯಗಳಿಗೆ ಪಡೆದ ಅಂಕಗಳೆಷ್ಟು? ಅವರ ಸೋದರರ ಜತೆಗಿನ ಸಂಬಂಧ ಹೇಗಿತ್ತು? ಅವರ ಇಷ್ಟದ ಪಲ್ಯ, ಹಣ್ಣು ಯಾವುದಾಗಿತ್ತು? ಅವರ ಎಷ್ಟು ಎತ್ತರ ಇದ್ದರು? ಅವರಿಗೆ ಎರಡನೆ ಹೃದಯಾಘಾತ ಎಲ್ಲಿ ಆಗಿತ್ತು?- ಮುಖ್ಯವಾಗಿ ಈ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಮಣಿಸಂಕರ್ ಮುಖರ್ಜಿ ಈ ಪುಸ್ತಕ ಬರೆದಿದ್ದರು,
ತನ್ನ ಬರವಣಿಗೆಗಾಗಿ ಓದಿದ ಪುಸ್ತಕಗಳು ಮತ್ತು ಸಂದರ್ಶಿಸಿದ ವ್ಯಕ್ತಿಗಳ ಪಟ್ಟಿಯನ್ನೂ ಅವರು ನೀಡಿದ್ದಾರೆ.
1. ಬಂಗಾಳಿ ಮತ್ತು ಇಂಗ್ಲೀಷ್ ನಲ್ಲಿರುವ ವಿವೇಕಾನಂದರ ಸಂಪೂರ್ಣ ಕೃತಿ ಸಂಪುಟ, (ಡಾ.ಬೇನಿ ಶಂಕರ್ ಶರ್ಮಾ ಮತ್ತು ಮೇರಿ ಲೂಯಿಸ್ ಬರ್ಕ್ ಅವರ ಸಂಶೋಧನೆಯ ಫಲವಾಗಿ ಬಂಗಾಳಿಗಿಂತಲೂ ಇಂಗ್ಲಿಷ್ ನಲ್ಲಿ ಹೆಚ್ಚು ವಿಸ್ತೃತವಾದ ಮಾಹಿತಿ ಇದೆ. ಮೇರಿ ಬರ್ಕ್ ಅವರು ‘ವಿವೇಕಾನಂದ ಇನ್ ದಿವೆಸ್ಟ್: ನ್ಯೂ ಡಿಸ್ಕವರೀಸ್ ಎನ್ನುವ ಆರು ಸಂಪುಟಗಳ ಪುಸ್ತಕ ಮಾಹಿತಿಗಳ ಗಣಿ ಎಂದು ಮುಖರ್ಜಿ ಹೇಳಿದ್ದಾರೆ).
2. ಸ್ವಾಮಿ ವಿವೇಕಾನಂದರ ಸೋದರ ಮಹೇಂದ್ರನಾಥ್ ದತ್ತಾ ಬರೆದಿರುವ ಸುಮಾರು 90 ಪುಸ್ತಕಗಳು ಮತ್ತು ಇನ್ನೊಬ್ಬ ಸೋದರ ಡಾ.ಭೂಪೇಂದ್ರನಾಥ ದತ್ತಾ ಬರೆದ ಪುಸ್ತಕಗಳು.
3. ಸ್ವಾಮಿ ಶಾರದಾನಂದ ಬರೆದ ಶ್ರೀ ರಾಮಕೃಷ್ಣ ಲೀಲಾಪ್ರಸಂಗ
4. ಸೋದರಿ ನಿವೇದಿತಾ ಬರೆದ ಲೇಖನಗಳು
5. ಸ್ವಾಮಿ ಗಂಭೀರಾನಂದ ಬರೆದಿರುವ ಯುಗನಾಯಕ ವಿವೇಕಾನಂದ ಪುಸ್ತಕ
6. ಪ್ರಮಥನಾಥ ಬಸು ಬರೆದಿರುವ ದಿ ಲೈಫ್ ಆಫ್ ಸ್ವಾಮಿ ವಿವೇಕಾನಂದ ಪುಸ್ತಕ
7. ಬ್ರಹ್ಮಚಾರಿ ಅಕ್ಷಯ ಚೈತನ್ಯ ಬರೆದಿರುವ ಲೇಖನಗಳು
8. ಶೈಲೇಂದ್ರನಾಥ್ ಧರ್ ಬರೆದಿರುವ ‘ಎ ಕಾಂಪ್ರೆನ್ಸಿವ್ ಬಯಾಗ್ರಫಿ ಆಫ್ ವಿವೇಕಾನಂದ’
9. ಚಿತ್ರಗುಪ್ತ ಬರೆದಿರುವ ಕಾನೂನಿಗೆ ಸಂಬಂಧಿಸಿದ ಲೇಖನಗಳು
10. ಬ್ರಹ್ಮಬೋದಿನಿ ಮತ್ತು ಪ್ರಬುದ್ಧ ಭಾರತದ ಹಳೆಯ ಸಂಚಿಕೆಗಳು
11. ಉದ್ಭದನ್ ಮತ್ತು ಶ್ರೀ ಶಾರದಾ ಮಠ ಪ್ರಕಟಿಸುತ್ತಿರುವ ನಿಬೋದಾತ ಪತ್ರಿಕೆ
-ಈ ಪುಸ್ತಕಗಳನ್ನಲ್ಲದೆ ವಿವೇಕಾನಂದರ ಬಗ್ಗೆ ಪ್ರಕಟವಾಗಿರುವ 200 ಪುಸ್ತಕಗಳನ್ನು ತಾನು ಓದಿದ್ದೇನೆ. ಇದರ ಜತೆಗೆ ರಾಮಕೃಷ್ಣ ಮಿಷನ್ ನ ಸ್ವಾಮಿ ರಮಾನಂದ, ವಿಶಾಖಾನಂದ ಮತ್ತು ಶರ್ಬಾಗಾನಂದ, ರಾಮಕೃಷ್ಣ ಸಾಂಸ್ಕೃತಿಕ ಕೇಂದ್ರದ ಗೋಪ ಬಸು ಹೀಗೆ ವಿವೇಕಾನಂದರ ಬಗ್ಗೆ ತಿಳಿದಿರುವ, ಸಂಶೋಧನೆ ಮಾಡಿರುವ ನೂರಾರು ವ್ಯಕ್ತಿಗಳ ಜತೆ ಚರ್ಚಿಸಿದ್ದೇನೆ. ವಿವೇಕಾನಂದರ ಕಲಿತಿರುವ ಶಾಲೆಗಳ ದಾಖಲೆಗಳನ್ನು ಪರಿಶೀಲಿಸಿದ್ದೇನೆ, ಅವರಿಗೆ ಚಿಕಿತ್ಸೆ ನೀಡಿರುವ ಆಸ್ಪತ್ರೆಗಳಿಗೆ ಹೋಗಿ ಮಾಹಿತಿ ಪಡೆದಿದ್ದೇನೆ ಎಂದು ಮಣಿಸಂಕರ್ ಮುಖರ್ಜಿ ತಿಳಿಸಿದ್ದಾರೆ.
ಒಬ್ಬ ಲೇಖಕ ಸುಮಾರು 250 ಪುಟಗಳ ಪುಸ್ತಕ ಬರೆಯಲು ಇಷ್ಟೊಂದು ತಯಾರಿ ನಡೆಸಿರುವ ಪ್ರಸಂಗಗಳು ಇರಬಹುದಾದರೂ ಅದು ಅಪರೂಪ. 2003ರಲ್ಲಿ ಪ್ರಕಟವಾಗಿದ್ದ ಈ ಬಂಗಾಳಿ ಪುಸ್ತಕದ ಜನಪ್ರಿಯತೆಯನ್ನು ಗಮನಿಸಿದ ಪೆಂಗ್ವಿನ್ ಪ್ರಕಾಶನದವರು ಇದರ ಇಂಗ್ಲಿಷ್ ಅನುವಾದವನ್ನು 2011ರಲ್ಲಿ ಪ್ರಕಟಿಸಿದರು. ಅದರ ಹೆಸರು ‘ The Monk as Man- The unknown life of Swami Vivekananda’
ಮಣಿಸಂಕರ್ ಮುಖರ್ಜಿ ಅವರ ಬಂಗಾಳಿ ಪುಸ್ತಕ ಪಶ್ಚಿಮ ಬಂಗಾಳದಲ್ಲಿ ವಿವಾದವನ್ನೇನಾದರೂ ಹುಟ್ಟು ಹಾಕಿತ್ತೇ ಎಂದು ಅಂಕಣವನ್ನು ಬರೆಯುವ ಮುನ್ನ ದೆಹಲಿಯಲ್ಲಿದ್ದಾಗ ನನಗೆ ಪರಿಚಿತರಾಗಿದ್ದ ಕೆಲವು ಬಂಗಾಳಿ ಪತ್ರಕರ್ತರನ್ನು ಕೇಳಿದ್ದೆ. ಅಂತಹದ್ದೇನೂ ನಡೆದಿಲ್ಲ ಎಂದು ಅವರು ತಿಳಿಸಿದ್ದರು. ನನ್ನ ಅಂಕಣ ವಿವಾದ ಸೃಷ್ಟಿಸಿದಾಗ ಮತ್ತೆ ದೆಹಲಿಯಲ್ಲಿ ನನಗೆ ಸಹದ್ಯೋಗಿಯಾಗಿದ್ದ ಪತ್ರಕರ್ತೆಯೊಬ್ಬರನ್ನು ಕೇಳಿದ್ದೆ. ಆಕೆ ಹೇಳಿದ್ದ ಒಂದು ಪ್ರಸಂಗ ಸ್ವಾರಸ್ಯಕರವಾಗಿದೆ. ವಿವೇಕಾನಂದರು ತನ್ನ ಕೊನೆಯ ದಿನಗಳಲ್ಲಿ ಸಹಚರರನ್ನು ಕರೆದು ‘ನಾನು ಸತ್ತ ನಂತರ ನೀವು ನನ್ನ ಪೋಟೊ ಇಟ್ಟು ಊದುಕಡ್ಡಿ ಹಚ್ಚಿ ದೇವರುಮಾಡುತ್ತಿರೆಂದು ನನಗೆ ಗೊತ್ತು. ಅಂಹತದ್ದೇನಾದರೂ ಮಾಡಿದರೆ ದೆವ್ವವಾಗಿ ಬಂದು ನಿಮ್ಮ ತಲೆ ಒಡೆದುಹಾಕುತ್ತೇನೆ’’ ಎಂದಿದ್ದರಂತೆ.
ದೆವ್ವಗಳಿರುವುದೇ ನಿಜವಾಗಿದ್ದರೆ ಎಷ್ಟೊಂದು ಚೆನ್ನಾಗಿರುತ್ತಿತ್ತು ಅಲ್ವೇ?
ಖ್ಯಾತ ಬಂಗಾಳಿ ಲೇಖಕ ಮಣಿ ಸಂಕರ್ ಮುಖರ್ಜಿ ಅವರು 2003ರಲ್ಲಿ ‘ಅಚೆನಾ ಅಜೆನಾ ವಿವೇಕಾನಂದ’ (ಅಪರಿಚಿತ, ಅಪ್ರಕಟಿತ ವಿವೇಕಾನಂದ) ಎಂಬ ಪುಸ್ತಕವನ್ನು ಬಂಗಾಳಿಯಲ್ಲಿ ಬರೆದಿದ್ದರು. ಇದರ ಲಕ್ಷಾಂತರ ಪ್ರತಿಗಳು ಮಾರಾಟವಾಗಿದ್ದವು. ಮಣಿಸಂಕರ್ ಮುಖರ್ಜಿ ಬಂಗಾಳಿಯ ಖ್ಯಾತ ಕಾದಂಬರಿಕಾರ. ಅವರ ಎರಡು ಕಾದಂಬರಿಗಳಾದ ‘ಸೀಮಾಬದ್ಧ’ ಮತ್ತು ‘ಜನ ಅರಣ್ಯ’ ಎಂಬ ಎರಡು ಕಾದಂಬರಿಗಳನ್ನು ಸತ್ಯಜಿತ್ ರೇ ಚಲನಚಿತ್ರ ಮಾಡಿದ್ದರು. ತನ್ನ ಹನ್ನೊಂದನೆ ವಯಸ್ಸಿನಲ್ಲಿಯೇ ವಿವೇಕಾನಂದರ ಪ್ರಭಾವಕ್ಕೊಳಗಾಗಿದ್ದೆ ಎಂದು ಹೇಳಿಕೊಂಡಿರುವ ಮುಖರ್ಜಿ ವರ್ಷಗಳ ಕಾಲ ಕಷ್ಟಪಟ್ಟು ನಡೆಸಿದ ಸಂಶೋಧನೆಯ ಫಲ ಈ ಪುಸ್ತಕ.
ಇದು ಮುಖ್ಯವಾಗಿ ವಿವೇಕಾನಂದರ ಖಾಸಗಿ ಬದುಕಿಗೆ ಸಂಬಂಧಿಸಿದ್ದು. ಒಬ್ಬ ಮನುಷ್ಯನಾಗಿ ವಿವೇಕಾನಂದರು ಹೇಗಿದ್ದರು? ಸನ್ಯಾಸಿಯಾಗುವ ಮೊದಲು ಮತ್ತು ನಂತರ ಅವರ ಜೀವನದಲ್ಲಿ ತಾಯಿಯ ಪಾತ್ರ ಏನಿತ್ತು? ಕುಟುಂಬದ ಹಿರಿಯ ಮಗನ ಜವಾಬ್ದಾರಿ ಮತ್ತು ಸನ್ಯಾಸಿಯ ಕರ್ತವ್ಯಗಳ ನಡುವಿನ ಅವರ ತಾಕಲಾಟಗಳೇನಿತ್ತು? ಪಶ್ಚಿಮದ ರಾಷ್ಟ್ರಗಳಿಗೆ ಹೋಗಿ ವೇದಾಂತ ಮತ್ತು ಬಿರಿಯಾನಿಯನ್ನು ಪ್ರಚಾರ ಮಾಡಲು ಅವರಿಗೆ ಪ್ರೇರಣೆ ಏನಿತ್ತು? ಕುಟುಂಬದ ಆಸ್ತಿಗೆ ಸಂಬಂಧಿಸಿದಂತೆ ದೀರ್ಘಕಾಲ ನಡೆದ ಕಾನೂನಿನ ಸಮರ ಅವರ ಆರೋಗ್ಯದ ಮೇಲೆ ಪರಿಣಾಮ ಬೀರಿ ಅಕಾಲ ಸಾವಿಗೆ ಕಾರಣವಾಯಿತೇ? ಅವರಿಗೆ ಯಾವುದೆಲ್ಲ ಕಾಯಿಲೆಗಳಿದ್ದವು? ಅದಕ್ಕೆ ಅವರು ಯಾವ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದರು? ಅವರು ಪದವಿ ಶಿಕ್ಷಣದಲ್ಲಿ ಬೇರೆಬೇರೆ ವಿಷಯಗಳಿಗೆ ಪಡೆದ ಅಂಕಗಳೆಷ್ಟು? ಅವರ ಸೋದರರ ಜತೆಗಿನ ಸಂಬಂಧ ಹೇಗಿತ್ತು? ಅವರ ಇಷ್ಟದ ಪಲ್ಯ, ಹಣ್ಣು ಯಾವುದಾಗಿತ್ತು? ಅವರ ಎಷ್ಟು ಎತ್ತರ ಇದ್ದರು? ಅವರಿಗೆ ಎರಡನೆ ಹೃದಯಾಘಾತ ಎಲ್ಲಿ ಆಗಿತ್ತು?- ಮುಖ್ಯವಾಗಿ ಈ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಮಣಿಸಂಕರ್ ಮುಖರ್ಜಿ ಈ ಪುಸ್ತಕ ಬರೆದಿದ್ದರು,
ತನ್ನ ಬರವಣಿಗೆಗಾಗಿ ಓದಿದ ಪುಸ್ತಕಗಳು ಮತ್ತು ಸಂದರ್ಶಿಸಿದ ವ್ಯಕ್ತಿಗಳ ಪಟ್ಟಿಯನ್ನೂ ಅವರು ನೀಡಿದ್ದಾರೆ.
1. ಬಂಗಾಳಿ ಮತ್ತು ಇಂಗ್ಲೀಷ್ ನಲ್ಲಿರುವ ವಿವೇಕಾನಂದರ ಸಂಪೂರ್ಣ ಕೃತಿ ಸಂಪುಟ, (ಡಾ.ಬೇನಿ ಶಂಕರ್ ಶರ್ಮಾ ಮತ್ತು ಮೇರಿ ಲೂಯಿಸ್ ಬರ್ಕ್ ಅವರ ಸಂಶೋಧನೆಯ ಫಲವಾಗಿ ಬಂಗಾಳಿಗಿಂತಲೂ ಇಂಗ್ಲಿಷ್ ನಲ್ಲಿ ಹೆಚ್ಚು ವಿಸ್ತೃತವಾದ ಮಾಹಿತಿ ಇದೆ. ಮೇರಿ ಬರ್ಕ್ ಅವರು ‘ವಿವೇಕಾನಂದ ಇನ್ ದಿವೆಸ್ಟ್: ನ್ಯೂ ಡಿಸ್ಕವರೀಸ್ ಎನ್ನುವ ಆರು ಸಂಪುಟಗಳ ಪುಸ್ತಕ ಮಾಹಿತಿಗಳ ಗಣಿ ಎಂದು ಮುಖರ್ಜಿ ಹೇಳಿದ್ದಾರೆ).
2. ಸ್ವಾಮಿ ವಿವೇಕಾನಂದರ ಸೋದರ ಮಹೇಂದ್ರನಾಥ್ ದತ್ತಾ ಬರೆದಿರುವ ಸುಮಾರು 90 ಪುಸ್ತಕಗಳು ಮತ್ತು ಇನ್ನೊಬ್ಬ ಸೋದರ ಡಾ.ಭೂಪೇಂದ್ರನಾಥ ದತ್ತಾ ಬರೆದ ಪುಸ್ತಕಗಳು.
3. ಸ್ವಾಮಿ ಶಾರದಾನಂದ ಬರೆದ ಶ್ರೀ ರಾಮಕೃಷ್ಣ ಲೀಲಾಪ್ರಸಂಗ
4. ಸೋದರಿ ನಿವೇದಿತಾ ಬರೆದ ಲೇಖನಗಳು
5. ಸ್ವಾಮಿ ಗಂಭೀರಾನಂದ ಬರೆದಿರುವ ಯುಗನಾಯಕ ವಿವೇಕಾನಂದ ಪುಸ್ತಕ
6. ಪ್ರಮಥನಾಥ ಬಸು ಬರೆದಿರುವ ದಿ ಲೈಫ್ ಆಫ್ ಸ್ವಾಮಿ ವಿವೇಕಾನಂದ ಪುಸ್ತಕ
7. ಬ್ರಹ್ಮಚಾರಿ ಅಕ್ಷಯ ಚೈತನ್ಯ ಬರೆದಿರುವ ಲೇಖನಗಳು
8. ಶೈಲೇಂದ್ರನಾಥ್ ಧರ್ ಬರೆದಿರುವ ‘ಎ ಕಾಂಪ್ರೆನ್ಸಿವ್ ಬಯಾಗ್ರಫಿ ಆಫ್ ವಿವೇಕಾನಂದ’
9. ಚಿತ್ರಗುಪ್ತ ಬರೆದಿರುವ ಕಾನೂನಿಗೆ ಸಂಬಂಧಿಸಿದ ಲೇಖನಗಳು
10. ಬ್ರಹ್ಮಬೋದಿನಿ ಮತ್ತು ಪ್ರಬುದ್ಧ ಭಾರತದ ಹಳೆಯ ಸಂಚಿಕೆಗಳು
11. ಉದ್ಭದನ್ ಮತ್ತು ಶ್ರೀ ಶಾರದಾ ಮಠ ಪ್ರಕಟಿಸುತ್ತಿರುವ ನಿಬೋದಾತ ಪತ್ರಿಕೆ
-ಈ ಪುಸ್ತಕಗಳನ್ನಲ್ಲದೆ ವಿವೇಕಾನಂದರ ಬಗ್ಗೆ ಪ್ರಕಟವಾಗಿರುವ 200 ಪುಸ್ತಕಗಳನ್ನು ತಾನು ಓದಿದ್ದೇನೆ. ಇದರ ಜತೆಗೆ ರಾಮಕೃಷ್ಣ ಮಿಷನ್ ನ ಸ್ವಾಮಿ ರಮಾನಂದ, ವಿಶಾಖಾನಂದ ಮತ್ತು ಶರ್ಬಾಗಾನಂದ, ರಾಮಕೃಷ್ಣ ಸಾಂಸ್ಕೃತಿಕ ಕೇಂದ್ರದ ಗೋಪ ಬಸು ಹೀಗೆ ವಿವೇಕಾನಂದರ ಬಗ್ಗೆ ತಿಳಿದಿರುವ, ಸಂಶೋಧನೆ ಮಾಡಿರುವ ನೂರಾರು ವ್ಯಕ್ತಿಗಳ ಜತೆ ಚರ್ಚಿಸಿದ್ದೇನೆ. ವಿವೇಕಾನಂದರ ಕಲಿತಿರುವ ಶಾಲೆಗಳ ದಾಖಲೆಗಳನ್ನು ಪರಿಶೀಲಿಸಿದ್ದೇನೆ, ಅವರಿಗೆ ಚಿಕಿತ್ಸೆ ನೀಡಿರುವ ಆಸ್ಪತ್ರೆಗಳಿಗೆ ಹೋಗಿ ಮಾಹಿತಿ ಪಡೆದಿದ್ದೇನೆ ಎಂದು ಮಣಿಸಂಕರ್ ಮುಖರ್ಜಿ ತಿಳಿಸಿದ್ದಾರೆ.
ಒಬ್ಬ ಲೇಖಕ ಸುಮಾರು 250 ಪುಟಗಳ ಪುಸ್ತಕ ಬರೆಯಲು ಇಷ್ಟೊಂದು ತಯಾರಿ ನಡೆಸಿರುವ ಪ್ರಸಂಗಗಳು ಇರಬಹುದಾದರೂ ಅದು ಅಪರೂಪ. 2003ರಲ್ಲಿ ಪ್ರಕಟವಾಗಿದ್ದ ಈ ಬಂಗಾಳಿ ಪುಸ್ತಕದ ಜನಪ್ರಿಯತೆಯನ್ನು ಗಮನಿಸಿದ ಪೆಂಗ್ವಿನ್ ಪ್ರಕಾಶನದವರು ಇದರ ಇಂಗ್ಲಿಷ್ ಅನುವಾದವನ್ನು 2011ರಲ್ಲಿ ಪ್ರಕಟಿಸಿದರು. ಅದರ ಹೆಸರು ‘ The Monk as Man- The unknown life of Swami Vivekananda’
ಮಣಿಸಂಕರ್ ಮುಖರ್ಜಿ ಅವರ ಬಂಗಾಳಿ ಪುಸ್ತಕ ಪಶ್ಚಿಮ ಬಂಗಾಳದಲ್ಲಿ ವಿವಾದವನ್ನೇನಾದರೂ ಹುಟ್ಟು ಹಾಕಿತ್ತೇ ಎಂದು ಅಂಕಣವನ್ನು ಬರೆಯುವ ಮುನ್ನ ದೆಹಲಿಯಲ್ಲಿದ್ದಾಗ ನನಗೆ ಪರಿಚಿತರಾಗಿದ್ದ ಕೆಲವು ಬಂಗಾಳಿ ಪತ್ರಕರ್ತರನ್ನು ಕೇಳಿದ್ದೆ. ಅಂತಹದ್ದೇನೂ ನಡೆದಿಲ್ಲ ಎಂದು ಅವರು ತಿಳಿಸಿದ್ದರು. ನನ್ನ ಅಂಕಣ ವಿವಾದ ಸೃಷ್ಟಿಸಿದಾಗ ಮತ್ತೆ ದೆಹಲಿಯಲ್ಲಿ ನನಗೆ ಸಹದ್ಯೋಗಿಯಾಗಿದ್ದ ಪತ್ರಕರ್ತೆಯೊಬ್ಬರನ್ನು ಕೇಳಿದ್ದೆ. ಆಕೆ ಹೇಳಿದ್ದ ಒಂದು ಪ್ರಸಂಗ ಸ್ವಾರಸ್ಯಕರವಾಗಿದೆ. ವಿವೇಕಾನಂದರು ತನ್ನ ಕೊನೆಯ ದಿನಗಳಲ್ಲಿ ಸಹಚರರನ್ನು ಕರೆದು ‘ನಾನು ಸತ್ತ ನಂತರ ನೀವು ನನ್ನ ಪೋಟೊ ಇಟ್ಟು ಊದುಕಡ್ಡಿ ಹಚ್ಚಿ ದೇವರುಮಾಡುತ್ತಿರೆಂದು ನನಗೆ ಗೊತ್ತು. ಅಂಹತದ್ದೇನಾದರೂ ಮಾಡಿದರೆ ದೆವ್ವವಾಗಿ ಬಂದು ನಿಮ್ಮ ತಲೆ ಒಡೆದುಹಾಕುತ್ತೇನೆ’’ ಎಂದಿದ್ದರಂತೆ.
ದೆವ್ವಗಳಿರುವುದೇ ನಿಜವಾಗಿದ್ದರೆ ಎಷ್ಟೊಂದು ಚೆನ್ನಾಗಿರುತ್ತಿತ್ತು ಅಲ್ವೇ?
Labels:
The Monk as Man,
ರಾಮಕೃಷ್ಣ ಪರಮಹಂಸರು,
ಸ್ವಾಮಿ ವಿವೇಕಾನಂದ
Thursday, January 15, 2015
ವಿದ್ಯಾರ್ಥಿಗಳನ್ನು ಶಿಕ್ಷಿಸ ಹೊರಟ ಶಿಕ್ಷಕನ ಸಂಕಟ ನನ್ನದು...
ಸ್ವಾಮಿ ವಿವೇಕಾನಂದರ ಬಗ್ಗೆ ನಾನು ಬರೆದಿದ್ದ ಹಳೆಯ ಅಂಕಣವನ್ನು ಸ್ನೇಹಿತರೊಬ್ಬರು ಹಂಚಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕೆಲವು ವಿಕೃತ ಮನಸ್ಸಿನವರು ಕೆಟ್ಟ ಭಾಷೆಯಲ್ಲಿ ನನ್ನನ್ನು ನಿಂದಿಸಿದ್ದಾರೆ. ನನ್ನ ಅನೇಕ ಸ್ನೇಹಿತರು ಅವರ ಬಗ್ಗೆ ಸೈಬರ್ ಪೊಲೀಸರಿಗೆ ದೂರು ಕೊಡಬೇಕೆಂದು ಸೂಚಿಸಿದ್ದಾರೆ. ಪ್ರತಿಕ್ರಿಯಿಸಿದ ಇಬ್ಬರಿಗೆ ಎಚ್ಚರಿಕೆ ಕೊಟ್ಟು ಮೆಸೆಜ್ ಹಾಕಿದ್ದೆ. ಮಲ್ಲು ಬಿರಾದಾರ್ ಮತ್ತು ಆಂಜನೇಯ ರೆಡ್ಡಿ ಇಬ್ಬರೂ ತಮ್ಮ ಪೋಸ್ಟ್ ಗಳನ್ನು ಡಿಲೀಟ್ ಮಾಡಿ ವೈಯಕ್ತಿಕವಾಗಿ ಕ್ಷಮೆ ಕೇಳಿದ್ದಾರೆ. ಅವರು ಎಲ್ಲಿ ಬರೆದಿದ್ದಾರೋ ಅಲ್ಲಿಯೇ ಕ್ಷಮೆ ಕೇಳಬೇಕೆಂದು ಹೇಳಿದ್ದಕ್ಕೆ ಒಪ್ಪಿಕೊಂಡಿದ್ದಾರೆ. ಅವರಿಬ್ಬರ ಪ್ರತಿಕ್ರಿಯೆಗಳ ಸ್ಕ್ರೀನ್ ಶಾಟ್ ಗಳು ನನ್ನ ಬಳಿ ಇವೆ. ಸೈಬರ್ ಪೊಲೀಸರಿಗೆ ದೂರು ಕೊಡುವ ಬಗ್ಗೆ ನಾಳೆ ನಿರ್ಧರಿಸುತ್ತೇನೆ. ಇಂತಹ ಕೀಟಳೆಗಳೆಲ್ಲ ನಿಲುಮೆ ಎಂಬ ಗ್ರೂಪ್ ನಲ್ಲಿ ನಡೆಯುತ್ತಿದೆ. ಈ ಬಗ್ಗೆ ಅನೇಕರು ದೂರಿದ್ದಾರೆ. ಅದರ ವಿರುದ್ಧವೂ ದೂರು ನೀಡಬೇಕೆಂದಿದ್ದೇನೆ. ಸ್ನೇಹಿತರ ಜತೆ ಚರ್ಚಿಸಿ ತೀರ್ಮಾನಕ್ಕೆ ಬರುತ್ತೇನೆ. ನಿಲುಮೆ ಗ್ರೂಪ್ ನಲ್ಲಿ ಯಾರ ಬಗ್ಗೆಯಾದರೂ ಈ ರೀತಿಯ ನಿಂದೆ, ಅವಹೇಳನ, ಚಾರಿತ್ರ್ಯ ಹನನ ನಡೆದಿದ್ದರೆ ಅದನ್ನು ದಯವಿಟ್ಟು ನನ್ನ ಗಮನಕ್ಕೆ ತನ್ನಿ.
-----------------------------------------------------------------------------------------------------------------------------
ವಿದ್ಯಾರ್ಥಿಗಳನ್ನು ಶಿಕ್ಷಿಸ ಹೊರಟ ಶಿಕ್ಷಕನ ಸಂಕಟ ನನ್ನದು...
ಫೇಸ್ ಬುಕ್ ನಲ್ಲಿ ನನ್ನ ಬಗ್ಗೆ ಅವಾಚ್ಯ ಶಬ್ದಗಳನ್ನು ಬಳಸಿದ, ಅವಹೇಳನ ಮಾಡಿದವರ ವಿರುದ್ಧ ಕೊನೆಗೂ ಪೊಲೀಸರಿಗೆ ದೂರು ನೀಡಿದ್ದೇನೆ. ವಿವೇಕಾನಂದರ ಬಗ್ಗೆ ನಾನು ಬರೆದ ಅಂಕಣದ ದಿನದಿಂದ ಕೆಲವು ಕಿಡಿಗೇಡಿಗಳು ಈ ರೀತಿಯ ನಿಂದನೆಯ ಮೂಲಕ ಮಾನಸಿಕವಾಗಿ ನನ್ನನ್ನು ಹಿಂಸಿಸುವ ಪ್ರಯತ್ನ ಮಾಡುತ್ತಾ ಬಂದಿರುವುದನ್ನು ಸೊಷಿಯಲ್ ಮಿಡಿಯಾದಲ್ಲಿ ಸಕ್ರಿಯವಾಗಿರುವವರೆಲ್ಲರೂ ಗಮನಿಸಿರಬಹುದು.
ವಿವೇಕಾನಂದ ಅಂಕಣದ ವಿವಾದದ ಸಮಯದಲ್ಲಿ ನನಗೆ ಪ್ರಾಣ ಬೆದರಿಕೆಯೊಡ್ಡುವ, ನಿಂದಿಸುವ ನೂರಾರು ಕರೆಗಳು, ಮೆಸೆಜ್ ಗಳು ಬಂದಿದ್ದರೂ ನಾನು ಪೊಲೀಸರಿಗೆ ದೂರು ನೀಡಿರಲಿಲ್ಲ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಒಂದಷ್ಟು ನಂಬರ್ ಗಳನ್ನು ನೀಡಿ ಅವರಿಗೆ ಬುದ್ದಿ ಹೇಳಿ ಎಂದಷ್ಟೇ ತಿಳಿಸಿದ್ದೆ. ಆಗ ನಾನು ಕೆಲಸ ಮಾಡುತ್ತಿದ್ದ ಪ್ರಜಾವಾಣಿಯ ಸಂಪಾದಕರು ಮತ್ತು ಗೆಳೆಯರು ಪೊಲೀಸರಿಗೆ ದೂರು ಕೊಡಿ ಎಂದು ಹೇಳಿದರೂ ನಾನು ಸುಮ್ಮನಿದ್ದೆ.
ಆದರೆ ದಿನದಿಂದ ದಿನಕ್ಕೆ ಇದು ಯಾಕೋ ಅತಿರೇಕಕ್ಕೆ ಹೋಗುತ್ತಿದೆಯೇನೋ ಎಂದು ನನಗನಿಸತೊಡಗಿದೆ. ನಿಲುಮೆ ಗುಂಪಿನ ರಾಕೇಶ್ ಶೆಟ್ಟಿ ಜತೆ ಎಷ್ಟೋ ಬಾರಿ ನಾನು ಚರ್ಚೆ ನಡೆಸಿದ್ದಿದೆ. ಅವರೆಂದೂ ವೈಯಕ್ತಿಕವಾಗಿ ನನ್ನನ್ನು ನಿಂದಿಸುವ ಕೆಲಸ ಮಾಡಿಲ್ಲ. ಆದರೆ ಉಳಿದೆಲ್ಲ ನಿಂದಕರಿಗೆ ಗುಂಪಿನ ಬಾಗಿಲು ತೆರೆದಿಟ್ಟು ಬಿಟ್ಟಿದ್ದರು. ಇದನ್ನು ನಾನು ಹೇಗೆ ಅರ್ಥಮಾಡಿಕೊಳ್ಳಲಿ? ಎಡ್ಮಿನ್ ಆಗಿರುವವರು ಇದನ್ನು ನಿಯಂತ್ರಿಸಬೇಕಿತ್ತಲ್ಲವೇ? ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಅವಹೇಳನ ಮಾಡುವ (ಪೋಟೊಗಳ ಮಾರ್ಪಿಂಗ್ ಮಾಡಿ), ಬಿಜೆಪಿ-ಸಂಘ ಪರಿವಾರದ ಬಗ್ಗೆ ಭಿನ್ನಾಭಿಪ್ರಾಯ ಹೊಂದಿರುವ ನನ್ನಂತಹವರನ್ನು ನಿಂದಿಸುವ, ಮಹಿಳೆಯರು, ಹಿರಿಯರು ಎಂಬ ಭೇದ ಇಲ್ಲದೆ ತಮಗಾಗದ ಸಾಹಿತಿಗಳು, ಚಿಂತಕರನ್ನು ಅವಹೇಳನ ಮಾಡುವ ಕೆಲಸವನ್ನು ಈ ಗುಂಪಿನ ಗೆಳೆಯರು ಧಾರಾಳವಾಗಿ ನಡೆಸಿಕೊಂಡು ಬಂದಿದ್ದಾರೆ.
ನಮ್ಮ ಉಳಿದೆಲ್ಲ ಮಾಧ್ಯಮಗಳು (ಪ್ರಿಂಟ್ ಮತ್ತು ಎಲೆಕ್ಟ್ರಾನಿಕ್ ) ತಾವು ಹೂಡಿರುವ ದೊಡ್ಡ ಬಂಡವಾಳದ ಕಾರಣದಿಂದಾಗಿ ಅನಿವಾರ್ಯವಾಗಿ ವ್ಯಾಪಾರಿ ಸಂಸ್ಥೆಗಳಾಗುತ್ತಿರುವ ಇಂದಿನ ದಿನಮಾನದಲ್ಲಿ ಓದುಗನೇ ಪತ್ರಕರ್ತನಾಗಲು ಅವಕಾಶ ಇರುವ ಸೊಷಿಯಲ್ ಮೀಡಿಯಾದ ಬಗ್ಗೆ ನನಗೆ ಅಪಾರವಾದ ನಿರೀಕ್ಷೆ ಮತ್ತು ಭರವಸೆ ಇದೆ. ಆದರೆ ಕೆಲವೇ ಕಿಡಿಗೇಡಿಗಳ ಹಾವಳಿಯಿಂದಾಗಿ ಸೊಷಿಯಲ್ ಮೀಡಿಯಾ ಕೂಡಾ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿದೆಯೇನೋ ಎಂಬ ಆತಂಕ ನನ್ನನ್ನು ಮಾತ್ರವಲ್ಲ ನನ್ನ ಅನೇಕ ಸ್ನೇಹಿತರನ್ನು ಇತ್ತೀಚೆಗೆ ಕಾಡುತ್ತಿರುವುದು ನಿಜ. ಇದನ್ನು ಹೀಗೆ ಬೆಳೆಯಲು ಬಿಟ್ಟರೆ ಅಭಿವ್ಯಕ್ತಿ ಸ್ವಾತಂತ್ರ್ಯದ ಇನ್ನೊಂದು ಮಾಧ್ಯಮವನ್ನೂ ಕಳೆದುಕೊಳ್ಳಲಿರುವ ಮುಂದಿನ ಜನಾಂಗ ನಮ್ಮನ್ನು ಖಂಡಿತ ಕ್ಷಮಿಸುವುದಿಲ್ಲ.
ನಾನು ತಪ್ಪಿಸಿಕೊಂಡು ಬೇರೆ ಯಾರಿಂದಲೋ ಪೊಲೀಸರಿಗೆ ದೂರು ನೀಡುವ ಕೆಲಸ ಮಾಡಿಸಬಹುದಿತ್ತು. ಅಧಿಕಾರಕ್ಕೆ ಸಮೀಪ ಇರುವುದನ್ನು ಬಳಸಿಕೊಂಡು ಪೊಲೀಸರ ಮೇಲೆ ಒತ್ತಡ ಹೇರಿ ನನ್ನ ಹೆಸರು ಬರದಂತೆ ನೋಡಿಕೊಂಡು ಕೆಲಸ ಮಾಡಿಸಿಕೊಳ್ಳಬಹುದಿತ್ತು. ನನಗೆ ಬುದ್ದಿ ತಿಳಿದಂದಿನಿಂದ ಇಂತಹ ಅಡ್ಡ ಕಸುಬಿ ಕೆಲಸವನ್ನು ನಾನು ಮಾಡಿಲ್ಲ. ಯಾರೋ ಅಮಾಯಕರನ್ನು ಛೂ ಬಿಟ್ಟು ಮರೆಯಲ್ಲಿ ನಿಂತು ಚಂದ ನೋಡುವ ಹೇಡಿ ಕೆಲಸವನ್ನು ನಾನೆಂದೂ ಮಾಡಿಲ್ಲ. ಸಾಧ್ಯವಾದಷ್ಟು ನೇರವಾಗಿ,ನಿಷ್ಠುರವಾಗಿ ನಡೆದುಕೊಳ್ಳುತ್ತಾ ಬಂದಿದ್ದೇನೆ. ಆದ್ದರಿಂದ ಸರಿ-ತಪ್ಪುಗಳಿಗೆ ನಾನೇ ತಲೆ ಕೊಡಲು ನಿರ್ಧರಿಸಿ ದೂರು ಕೊಟ್ಟೆ. ಇದು ನನ್ನ ಜೀವನದ ಮೊದಲ ಪೊಲೀಸ್ ದೂರು.
ಇದರಿಂದ ಏನನ್ನೋ ಸಾಧಿಸಿದೆನೆಂಬ ಹೆಮ್ಮೆಯಾಗಲಿ, ಸರಿಯಾಗಿ ಪಾಠ ಕಲಿಸಿದೆ ಎಂಬ ವಿಕೃತ ಸಂತೋಷವಾಗಲಿ ನನಗಾಗಿಲ್ಲ. ನಿಜಕ್ಕೂ ನನಗೆ ಸಂಕಟವಾಗುತ್ತಿದೆ. ನಾನು ಹೆಚ್ಚುಕಡಿಮೆ 30 ವರ್ಷ ಸಕ್ರಿಯ ಪತ್ರಕರ್ತನಾಗಿದ್ದೆ. ಮುಖ್ಯವಾಗಿ ಧಾರವಾಡ ಮತ್ತು ತುಮಕೂರು ಜಿಲ್ಲೆಗಳಲ್ಲಿ ಪ್ರಜಾವಾಣಿ ವರದಿಗಾರನಾಗಿ ಕೆಲಸ ಮಾಡಿದ್ದೆ. ಆಗಲೂ ನಾನು ಸಂಘ ಪರಿವಾರದ ಸಿದ್ಧಾಂತಗಳನ್ನು ಒಪ್ಪುತ್ತಿರಲಿಲ್ಲ. ಧಾರವಾಡದ ನನ್ನ ಮನೆಯಲ್ಲಿ ಎಬಿವಿಪಿ ಹುಡುಗರ ಜತೆ ಸುದೀರ್ಘ ಚರ್ಚಾಕೂಟಗಳೇ ನಡೆಯುತ್ತಿದ್ದವು. ಆ ಗೌರವವನ್ನು ನಾನು ಮಾತ್ರವಲ್ಲ ಆ ಹುಡುಗರೂ ಈಗಲೂ ಉಳಿಸಿಕೊಂಡಿದ್ದಾರೆ. ನಾನೆಂದು ನನ್ನ ವರದಿಗಳಲ್ಲಿ ಅವರ ಬಗ್ಗೆ ಪೂರ್ವಗ್ರಹದಿಂದ ವರ್ತಿಸಿರಲಿಲ್ಲ. ನನ್ನ ವರದಿಗಳಲ್ಲಿ ಪೂರ್ವಗ್ರಹಪೀಡಿತ ನಾಗಿದ್ದೆ ಎಂದು ಆ ಎರಡು ಜಿಲ್ಲೆಗಳ ಸಂಘ ಪರಿವಾರದ ನಾಯಕರು ಈಗಲೂ ದೂರಲಾರರು ಎಂಬ ನಂಬಿಕೆ ನನಗಿದೆ.
ಆರ್ ಎಸ್ ಎಸ್ ಸಿದ್ಧಾಂತವನ್ನು ನಾನು ಒಪ್ಪಿಕೊಳ್ಳದಿದ್ದರೂ ಆ ಸಂಘಟನೆಯ ಹಿರಿಯ ನಾಯಕರ ಬಗ್ಗೆ ನನಗೆ ಗೌರವ ಇದೆ. ಆದರೆ ಇತ್ತೀಚೆಗೆ ಆರ್ ಎಸ್ ಎಸ್ ಎಂದುಹೇಳಿಕೊಳ್ಳುತ್ತಿರುವ ವಿದ್ಯಾರ್ಥಿಗಳು ಮತ್ತು ಯುವಕರ ನಡವಳಿಕೆ ಕಂಡಾಗ ಭವಿಷ್ಯದ ಬಗ್ಗೆ ಭಯವಾಗುತ್ತದೆ. ಇಂತಹ ನಡವಳಿಕೆಯಿಂದಾಗಿ ವಸ್ತುನಿಷ್ಠವಾದ ಮುಕ್ತ ಮನಸ್ಸಿನ ಚರ್ಚೆಗಿದ್ದ ಅವಕಾಶವನ್ನೇ ನಾವು ಕಳೆದುಕೊಳ್ಳುತ್ತಿದ್ದೇವೆ. ಸೈದ್ಧಾಂತಿಕವಾದ ಭಿನ್ನಾಭಿಪ್ರಾಯಗಳಿದ್ದಾಗ ಅದೇ ಮಟ್ಟದಲ್ಲಿ ಜಗಳವಾಡುವ ಪ್ರಯತ್ನ ಮಾಡಬೇಕಲ್ಲವೇ, ಕನಿಷ್ಠ ಭಾಷೆಯ ಬಳಕೆ ಬಗ್ಗೆ ಎಚ್ಚರ ಇರಬೇಕಲ್ಲವೇ? ‘ತಲೆ ಹಿಡುಕ’, ‘ಮುಠ್ಠಾಳ’, ‘ಚಪ್ಪಲಿ ಸವೆದುಹೋಗುವಷ್ಟು ಹೊಡೆಯಬೇಕು’, ‘ಮುಖಕ್ಕೆ ಉಗಿಯಿರಿ’ ‘ಆ್ಯಸಿಡ್ ಹಾಕಿ’ ...ಇವೆಲ್ಲ ಏನು ಭಾಷೆ ಸ್ವಾಮಿ? ಇವೆಲ್ಲ ಆಗೊಮ್ಮೆ ಈಗೊಮ್ಮೆ ಮಿಂಚಿ ಮರೆಯಾಗುವ ಪ್ರತಿಕ್ರಿಯೆಗಳಲ್ಲ. ನಿಲುಮೆ ಗುಂಪಿನ ಗೆಳೆಯರು ಇತ್ತೀಚೆಗೆ ನಿರಂತರವಾಗಿ ಇಂತಹ ಭಾಷೆ ಬಳಕೆ ಮಾಡಿ ತಮಗಾಗದವರ ವಿರುದ್ಧ ದಾಳಿ ನಡೆಸುತ್ತಿದ್ದಾರೆ. ಇದನ್ನು ನಿಯಂತ್ರಿಸಲು ಸಾಧ್ಯ ಇದ್ದ ರಾಕೇಶ್ ಶೆಟ್ಟಿ, ಸಾತ್ವಿಕ್ ಅಂತಹವರು ಇದನ್ನು ಗಮನಿಸಿಯೂ ಸುಮ್ಮನಿದ್ದದ್ದು ಇನ್ನೂ ದೊಡ್ಡ ಅಪರಾಧ. ಅವರ ಜಾಣ ಮೌನದಿಂದ ಪ್ರೇರಣೆ ಪಡೆದು, ಅರೆಬರೆ ಓದಿದ ಬಿಸಿ ರಕ್ತದ ಹುಡುಗರು ಇನ್ನಷ್ಟು ಉತ್ಸಾಹದಿಂದ ಕೆಸರೆರಚಾಟದಲ್ಲಿ ತೊಡಗಿದ್ದಾರೆ.
ಇದನ್ನು ಕೆಲವರಿಗೆ ನೇರವಾಗಿ ಮೆಸೆಜ್ ಹಾಕಿ ನಿಲ್ಲಿಸಿ ಎಂದು ಹೇಳಿದ್ದೆ. ಕೆಲವರು ನಿಲ್ಲಿಸಿದ್ದಾರೆ, ಇನ್ನು ಹಲವಾರು ಮತ್ತೆ ಪ್ರಾರಂಭಿಸಿದ್ದಾರೆ. ಇದರ ಜತೆ ಹೊಸಬರ ಪ್ರವೇಶ ಧಾರಾಳವಾಗಿ ಆಗುತ್ತಿದೆ. ಇಂತಹದ್ದೊಂದು ಅನಾರೋಗ್ಯಕರವಾದ ಬೆಳವಣಿಗೆಯನ್ನು ತಡೆಯಲು ಕಾನೂನಿನ ಮೊರೆ ಹೋಗುವುದು ಬಿಟ್ಟು ಬೇರೆ ದಾರಿಗಳು ನನ್ನ ಮುಂದಿರಲಿಲ್ಲ. ಯಾರ ಬಗ್ಗೆ ದೂರು ಕೊಟ್ಟಿದ್ದೆನೋ ಅವರ ಬಗ್ಗೆ ನನಗೆ ಖಂಡಿತ ದ್ವೇಷ ಇಲ್ಲ, ಪ್ರೀತಿ ಅಲ್ಲದೆ ಇದ್ದರೂ ಅನುಕಂಪ ಇದೆ. ವಿದ್ಯಾರ್ಥಿಗಳನ್ನು ಶಿಕ್ಷಿಸ ಹೊರಟ ಶಿಕ್ಷಕನ ಸಂಕಟ ನನ್ನದು. ಕಾನೂನಿನ ಕ್ರಮಗಳನ್ನು ಎದುರಿಸಲು ಅವರಿಗೆ ನೆರವು ಬೇಕಿದ್ದರೆ ಅದನ್ನು ಒದಗಿಸಲು ನನ್ನ ಮಿತಿಯೊಳಗೆ ನಾನು ಸಿದ್ದನಿದ್ದೇನೆ.
-----------------------------------------------------------------------------------------------------------------------------
ವಿದ್ಯಾರ್ಥಿಗಳನ್ನು ಶಿಕ್ಷಿಸ ಹೊರಟ ಶಿಕ್ಷಕನ ಸಂಕಟ ನನ್ನದು...
ಫೇಸ್ ಬುಕ್ ನಲ್ಲಿ ನನ್ನ ಬಗ್ಗೆ ಅವಾಚ್ಯ ಶಬ್ದಗಳನ್ನು ಬಳಸಿದ, ಅವಹೇಳನ ಮಾಡಿದವರ ವಿರುದ್ಧ ಕೊನೆಗೂ ಪೊಲೀಸರಿಗೆ ದೂರು ನೀಡಿದ್ದೇನೆ. ವಿವೇಕಾನಂದರ ಬಗ್ಗೆ ನಾನು ಬರೆದ ಅಂಕಣದ ದಿನದಿಂದ ಕೆಲವು ಕಿಡಿಗೇಡಿಗಳು ಈ ರೀತಿಯ ನಿಂದನೆಯ ಮೂಲಕ ಮಾನಸಿಕವಾಗಿ ನನ್ನನ್ನು ಹಿಂಸಿಸುವ ಪ್ರಯತ್ನ ಮಾಡುತ್ತಾ ಬಂದಿರುವುದನ್ನು ಸೊಷಿಯಲ್ ಮಿಡಿಯಾದಲ್ಲಿ ಸಕ್ರಿಯವಾಗಿರುವವರೆಲ್ಲರೂ ಗಮನಿಸಿರಬಹುದು.
ವಿವೇಕಾನಂದ ಅಂಕಣದ ವಿವಾದದ ಸಮಯದಲ್ಲಿ ನನಗೆ ಪ್ರಾಣ ಬೆದರಿಕೆಯೊಡ್ಡುವ, ನಿಂದಿಸುವ ನೂರಾರು ಕರೆಗಳು, ಮೆಸೆಜ್ ಗಳು ಬಂದಿದ್ದರೂ ನಾನು ಪೊಲೀಸರಿಗೆ ದೂರು ನೀಡಿರಲಿಲ್ಲ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಒಂದಷ್ಟು ನಂಬರ್ ಗಳನ್ನು ನೀಡಿ ಅವರಿಗೆ ಬುದ್ದಿ ಹೇಳಿ ಎಂದಷ್ಟೇ ತಿಳಿಸಿದ್ದೆ. ಆಗ ನಾನು ಕೆಲಸ ಮಾಡುತ್ತಿದ್ದ ಪ್ರಜಾವಾಣಿಯ ಸಂಪಾದಕರು ಮತ್ತು ಗೆಳೆಯರು ಪೊಲೀಸರಿಗೆ ದೂರು ಕೊಡಿ ಎಂದು ಹೇಳಿದರೂ ನಾನು ಸುಮ್ಮನಿದ್ದೆ.

ನಮ್ಮ ಉಳಿದೆಲ್ಲ ಮಾಧ್ಯಮಗಳು (ಪ್ರಿಂಟ್ ಮತ್ತು ಎಲೆಕ್ಟ್ರಾನಿಕ್ ) ತಾವು ಹೂಡಿರುವ ದೊಡ್ಡ ಬಂಡವಾಳದ ಕಾರಣದಿಂದಾಗಿ ಅನಿವಾರ್ಯವಾಗಿ ವ್ಯಾಪಾರಿ ಸಂಸ್ಥೆಗಳಾಗುತ್ತಿರುವ ಇಂದಿನ ದಿನಮಾನದಲ್ಲಿ ಓದುಗನೇ ಪತ್ರಕರ್ತನಾಗಲು ಅವಕಾಶ ಇರುವ ಸೊಷಿಯಲ್ ಮೀಡಿಯಾದ ಬಗ್ಗೆ ನನಗೆ ಅಪಾರವಾದ ನಿರೀಕ್ಷೆ ಮತ್ತು ಭರವಸೆ ಇದೆ. ಆದರೆ ಕೆಲವೇ ಕಿಡಿಗೇಡಿಗಳ ಹಾವಳಿಯಿಂದಾಗಿ ಸೊಷಿಯಲ್ ಮೀಡಿಯಾ ಕೂಡಾ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿದೆಯೇನೋ ಎಂಬ ಆತಂಕ ನನ್ನನ್ನು ಮಾತ್ರವಲ್ಲ ನನ್ನ ಅನೇಕ ಸ್ನೇಹಿತರನ್ನು ಇತ್ತೀಚೆಗೆ ಕಾಡುತ್ತಿರುವುದು ನಿಜ. ಇದನ್ನು ಹೀಗೆ ಬೆಳೆಯಲು ಬಿಟ್ಟರೆ ಅಭಿವ್ಯಕ್ತಿ ಸ್ವಾತಂತ್ರ್ಯದ ಇನ್ನೊಂದು ಮಾಧ್ಯಮವನ್ನೂ ಕಳೆದುಕೊಳ್ಳಲಿರುವ ಮುಂದಿನ ಜನಾಂಗ ನಮ್ಮನ್ನು ಖಂಡಿತ ಕ್ಷಮಿಸುವುದಿಲ್ಲ.
ನಾನು ತಪ್ಪಿಸಿಕೊಂಡು ಬೇರೆ ಯಾರಿಂದಲೋ ಪೊಲೀಸರಿಗೆ ದೂರು ನೀಡುವ ಕೆಲಸ ಮಾಡಿಸಬಹುದಿತ್ತು. ಅಧಿಕಾರಕ್ಕೆ ಸಮೀಪ ಇರುವುದನ್ನು ಬಳಸಿಕೊಂಡು ಪೊಲೀಸರ ಮೇಲೆ ಒತ್ತಡ ಹೇರಿ ನನ್ನ ಹೆಸರು ಬರದಂತೆ ನೋಡಿಕೊಂಡು ಕೆಲಸ ಮಾಡಿಸಿಕೊಳ್ಳಬಹುದಿತ್ತು. ನನಗೆ ಬುದ್ದಿ ತಿಳಿದಂದಿನಿಂದ ಇಂತಹ ಅಡ್ಡ ಕಸುಬಿ ಕೆಲಸವನ್ನು ನಾನು ಮಾಡಿಲ್ಲ. ಯಾರೋ ಅಮಾಯಕರನ್ನು ಛೂ ಬಿಟ್ಟು ಮರೆಯಲ್ಲಿ ನಿಂತು ಚಂದ ನೋಡುವ ಹೇಡಿ ಕೆಲಸವನ್ನು ನಾನೆಂದೂ ಮಾಡಿಲ್ಲ. ಸಾಧ್ಯವಾದಷ್ಟು ನೇರವಾಗಿ,ನಿಷ್ಠುರವಾಗಿ ನಡೆದುಕೊಳ್ಳುತ್ತಾ ಬಂದಿದ್ದೇನೆ. ಆದ್ದರಿಂದ ಸರಿ-ತಪ್ಪುಗಳಿಗೆ ನಾನೇ ತಲೆ ಕೊಡಲು ನಿರ್ಧರಿಸಿ ದೂರು ಕೊಟ್ಟೆ. ಇದು ನನ್ನ ಜೀವನದ ಮೊದಲ ಪೊಲೀಸ್ ದೂರು.
ಇದರಿಂದ ಏನನ್ನೋ ಸಾಧಿಸಿದೆನೆಂಬ ಹೆಮ್ಮೆಯಾಗಲಿ, ಸರಿಯಾಗಿ ಪಾಠ ಕಲಿಸಿದೆ ಎಂಬ ವಿಕೃತ ಸಂತೋಷವಾಗಲಿ ನನಗಾಗಿಲ್ಲ. ನಿಜಕ್ಕೂ ನನಗೆ ಸಂಕಟವಾಗುತ್ತಿದೆ. ನಾನು ಹೆಚ್ಚುಕಡಿಮೆ 30 ವರ್ಷ ಸಕ್ರಿಯ ಪತ್ರಕರ್ತನಾಗಿದ್ದೆ. ಮುಖ್ಯವಾಗಿ ಧಾರವಾಡ ಮತ್ತು ತುಮಕೂರು ಜಿಲ್ಲೆಗಳಲ್ಲಿ ಪ್ರಜಾವಾಣಿ ವರದಿಗಾರನಾಗಿ ಕೆಲಸ ಮಾಡಿದ್ದೆ. ಆಗಲೂ ನಾನು ಸಂಘ ಪರಿವಾರದ ಸಿದ್ಧಾಂತಗಳನ್ನು ಒಪ್ಪುತ್ತಿರಲಿಲ್ಲ. ಧಾರವಾಡದ ನನ್ನ ಮನೆಯಲ್ಲಿ ಎಬಿವಿಪಿ ಹುಡುಗರ ಜತೆ ಸುದೀರ್ಘ ಚರ್ಚಾಕೂಟಗಳೇ ನಡೆಯುತ್ತಿದ್ದವು. ಆ ಗೌರವವನ್ನು ನಾನು ಮಾತ್ರವಲ್ಲ ಆ ಹುಡುಗರೂ ಈಗಲೂ ಉಳಿಸಿಕೊಂಡಿದ್ದಾರೆ. ನಾನೆಂದು ನನ್ನ ವರದಿಗಳಲ್ಲಿ ಅವರ ಬಗ್ಗೆ ಪೂರ್ವಗ್ರಹದಿಂದ ವರ್ತಿಸಿರಲಿಲ್ಲ. ನನ್ನ ವರದಿಗಳಲ್ಲಿ ಪೂರ್ವಗ್ರಹಪೀಡಿತ ನಾಗಿದ್ದೆ ಎಂದು ಆ ಎರಡು ಜಿಲ್ಲೆಗಳ ಸಂಘ ಪರಿವಾರದ ನಾಯಕರು ಈಗಲೂ ದೂರಲಾರರು ಎಂಬ ನಂಬಿಕೆ ನನಗಿದೆ.
ಆರ್ ಎಸ್ ಎಸ್ ಸಿದ್ಧಾಂತವನ್ನು ನಾನು ಒಪ್ಪಿಕೊಳ್ಳದಿದ್ದರೂ ಆ ಸಂಘಟನೆಯ ಹಿರಿಯ ನಾಯಕರ ಬಗ್ಗೆ ನನಗೆ ಗೌರವ ಇದೆ. ಆದರೆ ಇತ್ತೀಚೆಗೆ ಆರ್ ಎಸ್ ಎಸ್ ಎಂದುಹೇಳಿಕೊಳ್ಳುತ್ತಿರುವ ವಿದ್ಯಾರ್ಥಿಗಳು ಮತ್ತು ಯುವಕರ ನಡವಳಿಕೆ ಕಂಡಾಗ ಭವಿಷ್ಯದ ಬಗ್ಗೆ ಭಯವಾಗುತ್ತದೆ. ಇಂತಹ ನಡವಳಿಕೆಯಿಂದಾಗಿ ವಸ್ತುನಿಷ್ಠವಾದ ಮುಕ್ತ ಮನಸ್ಸಿನ ಚರ್ಚೆಗಿದ್ದ ಅವಕಾಶವನ್ನೇ ನಾವು ಕಳೆದುಕೊಳ್ಳುತ್ತಿದ್ದೇವೆ. ಸೈದ್ಧಾಂತಿಕವಾದ ಭಿನ್ನಾಭಿಪ್ರಾಯಗಳಿದ್ದಾಗ ಅದೇ ಮಟ್ಟದಲ್ಲಿ ಜಗಳವಾಡುವ ಪ್ರಯತ್ನ ಮಾಡಬೇಕಲ್ಲವೇ, ಕನಿಷ್ಠ ಭಾಷೆಯ ಬಳಕೆ ಬಗ್ಗೆ ಎಚ್ಚರ ಇರಬೇಕಲ್ಲವೇ? ‘ತಲೆ ಹಿಡುಕ’, ‘ಮುಠ್ಠಾಳ’, ‘ಚಪ್ಪಲಿ ಸವೆದುಹೋಗುವಷ್ಟು ಹೊಡೆಯಬೇಕು’, ‘ಮುಖಕ್ಕೆ ಉಗಿಯಿರಿ’ ‘ಆ್ಯಸಿಡ್ ಹಾಕಿ’ ...ಇವೆಲ್ಲ ಏನು ಭಾಷೆ ಸ್ವಾಮಿ? ಇವೆಲ್ಲ ಆಗೊಮ್ಮೆ ಈಗೊಮ್ಮೆ ಮಿಂಚಿ ಮರೆಯಾಗುವ ಪ್ರತಿಕ್ರಿಯೆಗಳಲ್ಲ. ನಿಲುಮೆ ಗುಂಪಿನ ಗೆಳೆಯರು ಇತ್ತೀಚೆಗೆ ನಿರಂತರವಾಗಿ ಇಂತಹ ಭಾಷೆ ಬಳಕೆ ಮಾಡಿ ತಮಗಾಗದವರ ವಿರುದ್ಧ ದಾಳಿ ನಡೆಸುತ್ತಿದ್ದಾರೆ. ಇದನ್ನು ನಿಯಂತ್ರಿಸಲು ಸಾಧ್ಯ ಇದ್ದ ರಾಕೇಶ್ ಶೆಟ್ಟಿ, ಸಾತ್ವಿಕ್ ಅಂತಹವರು ಇದನ್ನು ಗಮನಿಸಿಯೂ ಸುಮ್ಮನಿದ್ದದ್ದು ಇನ್ನೂ ದೊಡ್ಡ ಅಪರಾಧ. ಅವರ ಜಾಣ ಮೌನದಿಂದ ಪ್ರೇರಣೆ ಪಡೆದು, ಅರೆಬರೆ ಓದಿದ ಬಿಸಿ ರಕ್ತದ ಹುಡುಗರು ಇನ್ನಷ್ಟು ಉತ್ಸಾಹದಿಂದ ಕೆಸರೆರಚಾಟದಲ್ಲಿ ತೊಡಗಿದ್ದಾರೆ.
ಇದನ್ನು ಕೆಲವರಿಗೆ ನೇರವಾಗಿ ಮೆಸೆಜ್ ಹಾಕಿ ನಿಲ್ಲಿಸಿ ಎಂದು ಹೇಳಿದ್ದೆ. ಕೆಲವರು ನಿಲ್ಲಿಸಿದ್ದಾರೆ, ಇನ್ನು ಹಲವಾರು ಮತ್ತೆ ಪ್ರಾರಂಭಿಸಿದ್ದಾರೆ. ಇದರ ಜತೆ ಹೊಸಬರ ಪ್ರವೇಶ ಧಾರಾಳವಾಗಿ ಆಗುತ್ತಿದೆ. ಇಂತಹದ್ದೊಂದು ಅನಾರೋಗ್ಯಕರವಾದ ಬೆಳವಣಿಗೆಯನ್ನು ತಡೆಯಲು ಕಾನೂನಿನ ಮೊರೆ ಹೋಗುವುದು ಬಿಟ್ಟು ಬೇರೆ ದಾರಿಗಳು ನನ್ನ ಮುಂದಿರಲಿಲ್ಲ. ಯಾರ ಬಗ್ಗೆ ದೂರು ಕೊಟ್ಟಿದ್ದೆನೋ ಅವರ ಬಗ್ಗೆ ನನಗೆ ಖಂಡಿತ ದ್ವೇಷ ಇಲ್ಲ, ಪ್ರೀತಿ ಅಲ್ಲದೆ ಇದ್ದರೂ ಅನುಕಂಪ ಇದೆ. ವಿದ್ಯಾರ್ಥಿಗಳನ್ನು ಶಿಕ್ಷಿಸ ಹೊರಟ ಶಿಕ್ಷಕನ ಸಂಕಟ ನನ್ನದು. ಕಾನೂನಿನ ಕ್ರಮಗಳನ್ನು ಎದುರಿಸಲು ಅವರಿಗೆ ನೆರವು ಬೇಕಿದ್ದರೆ ಅದನ್ನು ಒದಗಿಸಲು ನನ್ನ ಮಿತಿಯೊಳಗೆ ನಾನು ಸಿದ್ದನಿದ್ದೇನೆ.
Thursday, January 19, 2012
ಸ್ವಾಮಿ ವಿವೇಕಾನಂದ ಎಂಬ ಮನುಷ್ಯ ಹೀಗಿದ್ದರು.... January 16, 2012
ಸ್ವಾಮಿ ವಿವೇಕಾನಂದರು ಒಬ್ಬ `ದಡ್ಡ` ವಿದ್ಯಾರ್ಥಿಯಾಗಿದ್ದರು. `ವಿದ್ಯಾರ್ಥಿಗಳಿಗೆ ಬೋಧಿಸಲು ಬರುವುದಿಲ್ಲ` ಎಂಬ ಕಾರಣಕ್ಕೆ ಶಿಕ್ಷಕನ ಉದ್ಯೋಗ ಕಳೆದುಕೊಂಡಿದ್ದರು.
ಹುಟ್ಟಿನಿಂದಲೇ ರೋಗಿಷ್ಠರಾಗಿದ್ದ ಅವರು ಸಾಯುವ ಹೊತ್ತಿಗೆ ಒಂದೆರಡಲ್ಲ, ಮೂವತ್ತೊಂದು ಬಗೆಯ ರೋಗಗಳಿಂದ ಬಳಲಿ ಹೋಗಿದ್ದರು. ಎಲ್ಲ ಬಂಗಾಳಿಗಳಂತೆ ಅವರೊಬ್ಬ ಮಹಾ ತಿಂಡಿಪೋತರಾಗಿದ್ದರು.
ಜೀವನದ ಕೊನೆಯ ದಿನದವರೆಗೂ ಅವರು ಮಾಂಸಾಹಾರಿ ಆಗಿದ್ದರು. ಜತೆಗೆ ದೇಶ-ವಿದೇಶದ ಮಾಂಸಾಹಾರಿ ಅಡುಗೆಯನ್ನು ಮಾಡುವ ಪಾಕಪ್ರಾವೀಣ್ಯತೆ ಹೊಂದಿದ್ದರು. ವ್ಯಸನಿಯಂತೆ ಸಿಗರೇಟ್-ಹುಕ್ಕಾ ಸೇದುವ ಧೂಮಪಾನಿಯಾಗಿದ್ದರು. ಹಿಂದೂ, ಮುಸ್ಲಿಮ್, ಕ್ರಿಶ್ಚಿಯನ್ ಎಲ್ಲರ ಮನೆಯಲ್ಲಿ ಭೇದ ಇಲ್ಲದೆ ಊಟ ಮಾಡುತ್ತಿದ್ದರು.
ಸನ್ಯಾಸಿಯಾಗಿದ್ದುಕೊಂಡೇ ಅವರು ಅಮೆರಿಕದ ಪ್ರಖ್ಯಾತ ಹೋಟೆಲ್ಗಳಲ್ಲಿ ರಾತ್ರಿಯಿಂದ ಬೆಳಗಿನ ಜಾವದವರೆಗೆ ನಡೆಯುವ ಔತಣಕೂಟಗಳಲ್ಲಿ ಭಾಗವಹಿಸುತ್ತಿದ್ದರು....ಹೀಗೆ ಹೇಳುತ್ತಾ ಹೋದರೆ ಸ್ವಾಮಿ ವಿವೇಕಾನಂದರನ್ನು `ಹಿಂದೂ ಧರ್ಮದ ವೀರ ಸನ್ಯಾಸಿ` ಎಂದು ಕೊಂಡಾಡುತ್ತಾ ಅವರ 150ನೇ ಜಯಂತಿ ಆಚರಣೆಯ ಸಂಭ್ರಮದಲ್ಲಿ ಮುಳುಗಿರುವವರಿಗೆ ಆಘಾತವಾದೀತು! ಆದರೆ ಇದು ಸತ್ಯ.
ಒಬ್ಬ ಶೂದ್ರನಾಗಿ ಹಿಂದೂ ಧರ್ಮದ ಪರಂಪರೆಗೆ ವಿರುದ್ಧವಾಗಿ ಸನ್ಯಾಸಿ ದೀಕ್ಷೆ ಪಡೆದ ವಿವೇಕಾನಂದರು, ಅದೇ ಪರಂಪರೆಯನ್ನು ಧಿಕ್ಕರಿಸಿ ಸಮುದ್ರ ಲಂಘನ ಮಾಡಿದ್ದರು.
ಸನಾತನಿಗಳು ದ್ವೇಷಿಸುತ್ತಿದ್ದ `ಮ್ಲೇಚ್ಛರ` ಮನೆಗಳಲ್ಲಿಯೇ ಉಳಿದು ಉಂಡು ದಿನ ಕಳೆದಿದ್ದರು. ಇದಕ್ಕಾಗಿಯೇ ಚಿಕಾಗೋ ಧರ್ಮ ಸಮ್ಮೇಳನಕ್ಕೆ ಹೋಗಿ ಹಿಂದಿರುಗಿದ ಅವರನ್ನು ಸ್ವಾಗತಿಸಲು ರಚಿಸಿದ ಸಮಿತಿಗೆ ಅಧ್ಯಕ್ಷರಾಗಲು ಹೈಕೋರ್ಟ್ ನ್ಯಾಯಮೂರ್ತಿ ಗುರುದಾಸ್ ಮುಖರ್ಜಿ ನಿರಾಕರಿಸಿದ್ದರು.
ಸನ್ಯಾಸಿಯಾದ ನಂತರವೂ ಬಹಳಷ್ಟು ಮೇಲ್ಜಾತಿ ಗಣ್ಯರು ಅವರನ್ನು `ಸೋದರ`ನೆಂದು ಕರೆಯುತ್ತಿದ್ದರೇ ಹೊರತು `ಸ್ವಾಮಿ` ಎನ್ನುತ್ತಿರಲಿಲ್ಲ. ಹಿಂದೂ ಧರ್ಮದ ಜಾತೀಯತೆ, ಅಸ್ಪೃಶ್ಯತೆ, ಅಂಧ ಸಂಪ್ರದಾಯಗಳು, ದೇವಾಲಯಗಳಲ್ಲಿ ನಡೆಯುತ್ತಿರುವ ಡಾಂಭಿಕತನ, ಮತಾಂತರದ ಬಗ್ಗೆ ಅವರು ಬರೆದುದನ್ನು ಓದಿದರೆ ಅವರೊಬ್ಬ ಹಿಂದು ವಿರೋಧಿ ಎಂದು ಹಿಂದುತ್ವದ ಉಗ್ರ ಪ್ರತಿಪಾದಕರು ಸುಲಭದಲ್ಲಿ ಆರೋಪಿಸಬಹುದು.
`ತಲೆ ಮೇಲು, ಕಾಲು ಕೀಳು` ಎಂದೆಲ್ಲ ಮನುಷ್ಯನ ಅಂಗಾಂಗಳಲ್ಲಿಯೇ ತಾರತಮ್ಯ ಕಾಣುತ್ತಿದ್ದ ಹಿಂದುಗಳ ನಡವಳಿಕೆಯಿಂದ ರೋಸಿಹೋಗಿದ್ದ ಅವರು, ಮನುಷ್ಯನಿಗೆ `ಮುಸ್ಲಿಂ ದೇಹ ಮತ್ತು ವೇದಾಂತದ ಮೆದುಳು` ಇರಬೇಕೆಂದು ಹೇಳುತ್ತಿದ್ದರು.
ಹುಟ್ಟಿನಿಂದಲೇ ರೋಗಿಷ್ಠರಾಗಿದ್ದ ಅವರು ಸಾಯುವ ಹೊತ್ತಿಗೆ ಒಂದೆರಡಲ್ಲ, ಮೂವತ್ತೊಂದು ಬಗೆಯ ರೋಗಗಳಿಂದ ಬಳಲಿ ಹೋಗಿದ್ದರು. ಎಲ್ಲ ಬಂಗಾಳಿಗಳಂತೆ ಅವರೊಬ್ಬ ಮಹಾ ತಿಂಡಿಪೋತರಾಗಿದ್ದರು.
ಜೀವನದ ಕೊನೆಯ ದಿನದವರೆಗೂ ಅವರು ಮಾಂಸಾಹಾರಿ ಆಗಿದ್ದರು. ಜತೆಗೆ ದೇಶ-ವಿದೇಶದ ಮಾಂಸಾಹಾರಿ ಅಡುಗೆಯನ್ನು ಮಾಡುವ ಪಾಕಪ್ರಾವೀಣ್ಯತೆ ಹೊಂದಿದ್ದರು. ವ್ಯಸನಿಯಂತೆ ಸಿಗರೇಟ್-ಹುಕ್ಕಾ ಸೇದುವ ಧೂಮಪಾನಿಯಾಗಿದ್ದರು. ಹಿಂದೂ, ಮುಸ್ಲಿಮ್, ಕ್ರಿಶ್ಚಿಯನ್ ಎಲ್ಲರ ಮನೆಯಲ್ಲಿ ಭೇದ ಇಲ್ಲದೆ ಊಟ ಮಾಡುತ್ತಿದ್ದರು.
ಸನ್ಯಾಸಿಯಾಗಿದ್ದುಕೊಂಡೇ ಅವರು ಅಮೆರಿಕದ ಪ್ರಖ್ಯಾತ ಹೋಟೆಲ್ಗಳಲ್ಲಿ ರಾತ್ರಿಯಿಂದ ಬೆಳಗಿನ ಜಾವದವರೆಗೆ ನಡೆಯುವ ಔತಣಕೂಟಗಳಲ್ಲಿ ಭಾಗವಹಿಸುತ್ತಿದ್ದರು....ಹೀಗೆ ಹೇಳುತ್ತಾ ಹೋದರೆ ಸ್ವಾಮಿ ವಿವೇಕಾನಂದರನ್ನು `ಹಿಂದೂ ಧರ್ಮದ ವೀರ ಸನ್ಯಾಸಿ` ಎಂದು ಕೊಂಡಾಡುತ್ತಾ ಅವರ 150ನೇ ಜಯಂತಿ ಆಚರಣೆಯ ಸಂಭ್ರಮದಲ್ಲಿ ಮುಳುಗಿರುವವರಿಗೆ ಆಘಾತವಾದೀತು! ಆದರೆ ಇದು ಸತ್ಯ.
ಒಬ್ಬ ಶೂದ್ರನಾಗಿ ಹಿಂದೂ ಧರ್ಮದ ಪರಂಪರೆಗೆ ವಿರುದ್ಧವಾಗಿ ಸನ್ಯಾಸಿ ದೀಕ್ಷೆ ಪಡೆದ ವಿವೇಕಾನಂದರು, ಅದೇ ಪರಂಪರೆಯನ್ನು ಧಿಕ್ಕರಿಸಿ ಸಮುದ್ರ ಲಂಘನ ಮಾಡಿದ್ದರು.
ಸನಾತನಿಗಳು ದ್ವೇಷಿಸುತ್ತಿದ್ದ `ಮ್ಲೇಚ್ಛರ` ಮನೆಗಳಲ್ಲಿಯೇ ಉಳಿದು ಉಂಡು ದಿನ ಕಳೆದಿದ್ದರು. ಇದಕ್ಕಾಗಿಯೇ ಚಿಕಾಗೋ ಧರ್ಮ ಸಮ್ಮೇಳನಕ್ಕೆ ಹೋಗಿ ಹಿಂದಿರುಗಿದ ಅವರನ್ನು ಸ್ವಾಗತಿಸಲು ರಚಿಸಿದ ಸಮಿತಿಗೆ ಅಧ್ಯಕ್ಷರಾಗಲು ಹೈಕೋರ್ಟ್ ನ್ಯಾಯಮೂರ್ತಿ ಗುರುದಾಸ್ ಮುಖರ್ಜಿ ನಿರಾಕರಿಸಿದ್ದರು.
ಸನ್ಯಾಸಿಯಾದ ನಂತರವೂ ಬಹಳಷ್ಟು ಮೇಲ್ಜಾತಿ ಗಣ್ಯರು ಅವರನ್ನು `ಸೋದರ`ನೆಂದು ಕರೆಯುತ್ತಿದ್ದರೇ ಹೊರತು `ಸ್ವಾಮಿ` ಎನ್ನುತ್ತಿರಲಿಲ್ಲ. ಹಿಂದೂ ಧರ್ಮದ ಜಾತೀಯತೆ, ಅಸ್ಪೃಶ್ಯತೆ, ಅಂಧ ಸಂಪ್ರದಾಯಗಳು, ದೇವಾಲಯಗಳಲ್ಲಿ ನಡೆಯುತ್ತಿರುವ ಡಾಂಭಿಕತನ, ಮತಾಂತರದ ಬಗ್ಗೆ ಅವರು ಬರೆದುದನ್ನು ಓದಿದರೆ ಅವರೊಬ್ಬ ಹಿಂದು ವಿರೋಧಿ ಎಂದು ಹಿಂದುತ್ವದ ಉಗ್ರ ಪ್ರತಿಪಾದಕರು ಸುಲಭದಲ್ಲಿ ಆರೋಪಿಸಬಹುದು.
`ತಲೆ ಮೇಲು, ಕಾಲು ಕೀಳು` ಎಂದೆಲ್ಲ ಮನುಷ್ಯನ ಅಂಗಾಂಗಳಲ್ಲಿಯೇ ತಾರತಮ್ಯ ಕಾಣುತ್ತಿದ್ದ ಹಿಂದುಗಳ ನಡವಳಿಕೆಯಿಂದ ರೋಸಿಹೋಗಿದ್ದ ಅವರು, ಮನುಷ್ಯನಿಗೆ `ಮುಸ್ಲಿಂ ದೇಹ ಮತ್ತು ವೇದಾಂತದ ಮೆದುಳು` ಇರಬೇಕೆಂದು ಹೇಳುತ್ತಿದ್ದರು.
ಮುಸ್ಲಿಂ ಮನೆಯಲ್ಲಿ ಊಟಮಾಡಿದ್ದಕ್ಕಾಗಿ ಆಕ್ಷೇಪ ವ್ಯಕ್ತಪಡಿಸಿದ್ದ ಅವರ ಅಭಿಮಾನಿ ಖೇತ್ರಿಯ ಮಹಾರಾಜನಿಗೆ ವಿವೇಕಾನಂದರು `ನಾನು ಭಂಗಿಗಳ ಜತೆ ಕೂತು ಕೂಡಾ ಊಟಮಾಡಬಲ್ಲೆ. ನಿಮ್ಮಂತಹವರ ಬಗ್ಗೆ ನಾನು ಹೆದರಲಾರೆ. ನಿಮಗೆ ದೇವರು ಇಲ್ಲವೇ ಧರ್ಮದ ಬಗ್ಗೆ ಗೊತ್ತಿಲ್ಲ` ಎಂದು ತಿರುಗೇಟು ನೀಡಿದ್ದರು.
`ಜೀಸಸ್ ಬದುಕಿದ್ದ ದಿನಗಳಲ್ಲಿ ನಾನೇನಾದರೂ ಪ್ಯಾಲೆಸ್ತೀನ್ನಲ್ಲಿದ್ದಿದ್ದರೆ ಕಣ್ಣಿರಿನಿಂದಲ್ಲ, ನನ್ನ ಹೃದಯದಿಂದ ರಕ್ತಬಸಿದು ಆತನ ಪಾದ ತೊಳೆಯುತ್ತಿದ್ದೆ..` ಎಂದು ಭಾವುಕರಾಗಿ ಅವರು ಬರೆದುಕೊಂಡಿದ್ದಾರೆ.
ಹಿಂದೂಗಳು ಮುಸ್ಲಿಂ ದೊರೆಗಳ ಪ್ರಭಾವ ಮತ್ತು ಬಲವಂತದಿಂದಾಗಿ ಮತಾಂತರಗೊಂಡರು ಎನ್ನುವುದನ್ನು ಅವರು ಒಪ್ಪುತ್ತಿರಲಿಲ್ಲ.
ಹಿಂದೂಗಳು ಮುಸ್ಲಿಂ ದೊರೆಗಳ ಪ್ರಭಾವ ಮತ್ತು ಬಲವಂತದಿಂದಾಗಿ ಮತಾಂತರಗೊಂಡರು ಎನ್ನುವುದನ್ನು ಅವರು ಒಪ್ಪುತ್ತಿರಲಿಲ್ಲ.
ಹಿಂದೂ ಧರ್ಮದ ಒಳಗಿನ ಜಾತೀಯತೆ, ಅಸ್ಪೃಶ್ಯತೆ, ಶೋಷಣೆ ಇದಕ್ಕೆ ಕಾರಣ. ಮೂಲಭೂತವಾದ ಮಾನವಹಕ್ಕುಗಳು ಮತ್ತು ವ್ಯಕ್ತಿ ಘನತೆಯನ್ನು ಗೌರವಿಸದೆ ಇರುವ ಧರ್ಮ ಅಲ್ಲವೇ ಅಲ್ಲ, ಅದು `ಪ್ರೇತ ನೃತ್ಯ`, ಅದು ನಡೆಯುವ ಸ್ಥಳ ನರಕ` ಎಂದು ಹೇಳಿದ್ದರು.
`ಧರ್ಮ-ಧರ್ಮಗಳ ನಡುವೆ ಸಹನೆಯಷ್ಟೇ ಇದ್ದರಷ್ಟೇ ಸಲ್ಲದು, ಅವುಗಳನ್ನು ಸತ್ಯ ಎಂದು ಒಪ್ಪಿಕೊಳ್ಳಬೇಕು, ಗುರು ರಾಮಕೃಷ್ಣ ಪರಮಹಂಸರಿಂದ ನಾನು ಇದನ್ನೇ ಕಲಿತದ್ದು` ಎಂದು ಅವರು ಬರೆದಿದ್ದಾರೆ.
ವಿವೇಕಾನಂದರ ಬಗ್ಗೆ ನಮ್ಮಲ್ಲಿ ಇನ್ನಷ್ಟು ಗೌರವ-ಅಭಿಮಾನ ಹುಟ್ಟಿಸುವ ಈ `ಮನುಷ್ಯ ಮುಖ`ವನ್ನು ಅವರ 150ನೇ ಜಯಂತಿ ಆಚರಣೆಯಲ್ಲಿ ಬಿಂಬಿಸಲಾಗುತ್ತಿರುವ `ಉತ್ಸವಮೂರ್ತಿ`ಯಲ್ಲಿ ಕಾಣಲು ಹೋದರೆ ನಿರಾಶೆಯಾಗುತ್ತದೆ.
ವಿವೇಕಾನಂದರ ಬಗ್ಗೆ ನಮ್ಮಲ್ಲಿ ಇನ್ನಷ್ಟು ಗೌರವ-ಅಭಿಮಾನ ಹುಟ್ಟಿಸುವ ಈ `ಮನುಷ್ಯ ಮುಖ`ವನ್ನು ಅವರ 150ನೇ ಜಯಂತಿ ಆಚರಣೆಯಲ್ಲಿ ಬಿಂಬಿಸಲಾಗುತ್ತಿರುವ `ಉತ್ಸವಮೂರ್ತಿ`ಯಲ್ಲಿ ಕಾಣಲು ಹೋದರೆ ನಿರಾಶೆಯಾಗುತ್ತದೆ.
ಕೇವಲ 39 ವರ್ಷ, ಐದು ತಿಂಗಳು ಮತ್ತು 24 ದಿನ ಬದುಕಿದ್ದ ಮತ್ತು 24ರ ಹರಯದಲ್ಲಿಯೇ ಸನ್ಯಾಸ ಸ್ವೀಕರಿಸಿದ್ದ ವಿವೇಕಾನಂದರನ್ನು ಅವರ ಸಾವಿನ 110 ವರ್ಷಗಳ ನಂತರವೂ ನಮಗೆ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗಿಲ್ಲವೇನೋ ಎಂದು ಅನಿಸತೊಡಗುತ್ತದೆ.
ಇತ್ತೀಚಿನ ವರ್ಷಗಳಲ್ಲಿ ವಿವೇಕಾನಂದರನ್ನು ಹಿಂದೂ ಧರ್ಮದ `ಬ್ರಾಂಡ್ ಅಂಬಾಸಿಡರ್` ಆಗಿ ಬಿಂಬಿಸುವ ಭರದಲ್ಲಿ ಅವರ ಮೇಲೆ ಇಲ್ಲಸಲ್ಲದ ಗುಣ-ವಿಶೇಷ, ಶಕ್ತಿ -ಸಾಮರ್ಥ್ಯಗಳನ್ನು ಆರೋಪಿಸಿ ದೇವರ ಪಟ್ಟಕ್ಕೆ ಏರಿಸಲಾಗುತ್ತಿದೆ.
ಇದೇನು ಹೊಸದಲ್ಲ. ಧಾರ್ಮಿಕ ಸುಧಾರಣೆಯ ಮೂಲಕವೇ ಸಮಾಜವನ್ನು ಸುಧಾರಿಸಲು ಹೊರಟವರನ್ನೆಲ್ಲ ನಾವು `ದೇವರು` ಮಾಡಿ ನಮ್ಮ ಕೈಗೆ ಎಟುಕದಷ್ಟು ದೂರದಲ್ಲಿರಿಸಿದ್ದೇವೆ.
ಇದೇನು ಹೊಸದಲ್ಲ. ಧಾರ್ಮಿಕ ಸುಧಾರಣೆಯ ಮೂಲಕವೇ ಸಮಾಜವನ್ನು ಸುಧಾರಿಸಲು ಹೊರಟವರನ್ನೆಲ್ಲ ನಾವು `ದೇವರು` ಮಾಡಿ ನಮ್ಮ ಕೈಗೆ ಎಟುಕದಷ್ಟು ದೂರದಲ್ಲಿರಿಸಿದ್ದೇವೆ.
ದೇವರ ಅವತಾರವಾಗದೆ ಕೇವಲ ಮನುಷ್ಯನಾಗಿ ಹುಟ್ಟಿ ಅಷ್ಟೊಂದು ಎತ್ತರಕ್ಕೆ ಬೆಳೆಯಲು ಸಾಧ್ಯ ಇಲ್ಲ ಎಂಬ ನಂಬಿಕೆಯನ್ನು ನಮ್ಮ ಅನೇಕ ಧಾರ್ಮಿಕ ನಾಯಕರು ಮತ್ತು ಧಾರ್ಮಿಕ ನಾಯಕರ ಸೋಗಿನ ರಾಜಕಾರಣಿಗಳು ಬಿತ್ತುತ್ತಾ, ಬೆಳೆಸುತ್ತಾ ಸಾಗಿದ್ದಾರೆ.
ಬುದ್ಧ-ಬಸವನಿಂದ ಹಿಡಿದು ವಿವೇಕಾನಂದ-ನಾರಾಯಣ ಗುರುಗಳವರೆಗೆ ಎಲ್ಲರನ್ನೂ ಅವರವರ ಭಕ್ತ ಸಮೂಹ ದೇವರುಗಳಾಗಿ ಮಾಡಿ ಪೂಜೆ-ಭಜನೆಗಳಲ್ಲಿ ಮುಳುಗಿಸಿ ಬಿಟ್ಟಿದ್ದಾರೆ. ಈ ಆರಾಧನೆಯ ಭರದಲ್ಲಿ ಆ ಮಹನೀಯರ ನಿಜವಾದ ಬದುಕು ಮತ್ತು ಚಿಂತನೆಯ ವಿವರಗಳೆಲ್ಲ ಇತಿಹಾಸದ ಪುಟಗಳಲ್ಲಿ ಎಲ್ಲೋ ಹೂತುಹೋಗಿರುತ್ತವೆ.
ಪ್ರಖ್ಯಾತ ಬಂಗಾಳಿ ಸಾಹಿತಿ ಮಣಿ ಸಂಕರ್ ಮುಖರ್ಜಿ ಅವರ `ದಿ ಮಾಂಕ್ ಆ್ಯಸ್ ಮ್ಯಾನ್` ಎನ್ನುವ ಪುಸ್ತಕವನ್ನು ಕಳೆದ ವರ್ಷ ಪೆಂಗ್ವಿನ್ ಪ್ರಕಾಶನ ಪ್ರಕಟಿಸಿದೆ. ಇದು ಎಂಟು ವರ್ಷಗಳ ಹಿಂದೆ ಪ್ರಕಟವಾದ ಸಂಶೋಧನೆ ಆಧಾರಿತ ಬಂಗಾಳಿ ಭಾಷೆಯ ಪುಸ್ತಕದ ಇಂಗ್ಲಿಷ್ ಅನುವಾದ (ಸಂಕರ್ ಅವರ `ಸೀಮಾಬದ್ದ` ಮತ್ತು `ಜನ ಅರಣ್ಯ` ಕಾದಂಬರಿಗಳನ್ನು ಸತ್ಯಜಿತ್ ರೇ ಚಲನಚಿತ್ರ ಮಾಡಿದ್ದರು).
ಪ್ರಖ್ಯಾತ ಬಂಗಾಳಿ ಸಾಹಿತಿ ಮಣಿ ಸಂಕರ್ ಮುಖರ್ಜಿ ಅವರ `ದಿ ಮಾಂಕ್ ಆ್ಯಸ್ ಮ್ಯಾನ್` ಎನ್ನುವ ಪುಸ್ತಕವನ್ನು ಕಳೆದ ವರ್ಷ ಪೆಂಗ್ವಿನ್ ಪ್ರಕಾಶನ ಪ್ರಕಟಿಸಿದೆ. ಇದು ಎಂಟು ವರ್ಷಗಳ ಹಿಂದೆ ಪ್ರಕಟವಾದ ಸಂಶೋಧನೆ ಆಧಾರಿತ ಬಂಗಾಳಿ ಭಾಷೆಯ ಪುಸ್ತಕದ ಇಂಗ್ಲಿಷ್ ಅನುವಾದ (ಸಂಕರ್ ಅವರ `ಸೀಮಾಬದ್ದ` ಮತ್ತು `ಜನ ಅರಣ್ಯ` ಕಾದಂಬರಿಗಳನ್ನು ಸತ್ಯಜಿತ್ ರೇ ಚಲನಚಿತ್ರ ಮಾಡಿದ್ದರು).
ವಿವೇಕಾನಂದರ ತತ್ವ-ಸಿದ್ಧಾಂತಗಳ ಜತೆ ಅವರ ಖಾಸಗಿ ಬದುಕಿನ ಅಪರಿಚಿತ ಮುಖವನ್ನು ಸಂಕರ್ ಅವರ ಪುಸ್ತಕ, ತಮ್ಮಂದಿರಾದ ಮಹೇಂದ್ರನಾಥ ದತ್ತಾ ಮತ್ತು ಡಾ. ಭೂಪೇಂದ್ರನಾಥ ದತ್ತಾ ಅವರು ಅಣ್ಣನ ಬಗ್ಗೆ ಬರೆದ ಪುಸ್ತಕಗಳು ಹಾಗೂ ಸೋದರಿ ನಿವೇದಿತಾ ಅವರ ಲೇಖನಗಳು ತೆರೆದಿಡುತ್ತದೆ.
ಮುಂದೊಂದು ದಿನ ವಿದೇಶಿ ನೆಲದಲ್ಲಿ ನಿಂತು ತನ್ನಲ್ಲಿರುವ ಜ್ಞಾನ ಮತ್ತು ಇಂಗ್ಲಿಷ್ ಭಾಷಾ ಪಾಂಡಿತ್ಯದಿಂದ ಅಲ್ಲಿನ ಇಂಗ್ಲಿಷ್ ಭಾಷಿಕರ ಮಂತ್ರಮುಗ್ಧಗೊಳಿಸಿದ್ದ ವಿವೇಕಾನಂದರು ಇಂಟರ್ಮಿಡಿಯೇಟ್ ಮತ್ತು ಬಿಎ ಪದವಿಯ ಇಂಗ್ಲಿಷ್ ಪರೀಕ್ಷೆಗಳಲ್ಲಿ ಗಳಿಸಿದ್ದ ಅಂಕ ಕ್ರಮವಾಗಿ ಶೇಕಡಾ 46 ಮತ್ತು ಶೇಕಡಾ 56. ಬಿಎ ಪರೀಕ್ಷೆಯ ಒಟ್ಟು 500 ಅಂಕಗಳಲ್ಲಿ ಗಳಿಸಿದ್ದು ಕೇವಲ 261. (ಸಂಸ್ಕೃತದಲ್ಲಿ 43 ಮತ್ತು ತತ್ವಶಾಸ್ತ್ರದಲ್ಲಿ 45).
ತಂದೆಯ ಸಾವಿನ ನಂತರ ಅನಿವಾರ್ಯವಾಗಿ ಉದ್ಯೋಗ ಮಾಡಬೇಕಾಗಿ ಬಂದ ವಿವೇಕಾನಂದರು ಮೊದಲು ಕೆಲಸಕ್ಕೆ ಸೇರಿದ್ದು ಈಶ್ವರಚಂದ್ರ ವಿದ್ಯಾಸಾಗರ ಅವರು ನಡೆಸುತ್ತಿದ್ದ ಶಿಕ್ಷಣ ಸಂಸ್ಥೆಯಲ್ಲಿ. ಅಲ್ಲಿ ಇವರನ್ನು ಮಕ್ಕಳಿಗೆ ಪಾಠ ಹೇಳಲು ಬರುವುದಿಲ್ಲ ಎನ್ನುವ ಕಾರಣ ನೀಡಿ ಸ್ವತಃ ಈಶ್ವರಚಂದ್ರರೇ ಕೆಲಸದಿಂದ ವಜಾಗೊಳಿಸಿದ್ದರು.
ಭುವನೇಶ್ವರಿ ದೇವಿ ಎಂಬ ತಾಯಿ ಇಲ್ಲದೆ ಹೋಗಿದ್ದರೆ ಜಗತ್ತಿಗೆ ವಿವೇಕಾನಂದರು ಸಿಗುತ್ತಿರಲಿಲ್ಲವೇನೋ? ಕೋಲ್ಕತ್ತಾದ ಸಾವಿರಾರು ನರೇಂದ್ರನಾಥರಲ್ಲಿ ಒಬ್ಬರಾಗಿ ಅವರು ಹುಟ್ಟಿ ಸಾಯುತ್ತಿದ್ದರು.
ಭುವನೇಶ್ವರಿ ದೇವಿ ಎಂಬ ತಾಯಿ ಇಲ್ಲದೆ ಹೋಗಿದ್ದರೆ ಜಗತ್ತಿಗೆ ವಿವೇಕಾನಂದರು ಸಿಗುತ್ತಿರಲಿಲ್ಲವೇನೋ? ಕೋಲ್ಕತ್ತಾದ ಸಾವಿರಾರು ನರೇಂದ್ರನಾಥರಲ್ಲಿ ಒಬ್ಬರಾಗಿ ಅವರು ಹುಟ್ಟಿ ಸಾಯುತ್ತಿದ್ದರು.
ವಿವೇಕಾನಂದರು ಮೂಲತಃ ಶ್ರಿಮಂತ ಕುಟುಂಬಕ್ಕೆ ಸೇರಿದವರಾಗಿದ್ದರೂ ತಂದೆಯ ಅಕಾಲಮೃತ್ಯುವಿನ ನಂತರ ಆಸ್ತಿಯನ್ನೆಲ್ಲ ದಾಯಾದಿಗಳು ಕಬಳಿಸಿದ ಕಾರಣ ಇಡೀ ಕುಟುಂಬ ಬೀದಿ ಪಾಲಾಗುತ್ತದೆ. ಹನ್ನೊಂದು ಮಕ್ಕಳಲ್ಲಿ ಇವರೇ ದೊಡ್ಡ ಗಂಡುಮಗನಾದ ಕಾರಣ ಸಂಸಾರ ನಿರ್ವಹಣೆ ನರೇಂದ್ರನಾಥನ ಪುಟ್ಟ ಹೆಗಲಮೇಲೆ ಬೀಳುತ್ತದೆ.
ನಿರುದ್ಯೋಗಿಯಾಗಿ ಹರಕಲು ಅಂಗಿ-ಪೈಜಾಮ ಹಾಕಿ ಬೀದಿ ಸುತ್ತುತ್ತಿದ್ದ ಅವರು ಎಷ್ಟೋ ಬಾರಿ ಉಪವಾಸ ಇರುತ್ತಿದ್ದರಂತೆ. ಕುಟುಂಬದ ಆಸ್ತಿಗಾಗಿ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಹೋರಾಟ ಸತತ ಹದಿನೇಳು ವರ್ಷ ನಡೆದು ವಿವೇಕಾನಂದರ ಸಾವಿನ ಹಿಂದಿನ ತಿಂಗಳಷ್ಟೇ ಇತ್ಯರ್ಥವಾಗಿತ್ತು.
ಕುಟುಂಬದ ಕಷ್ಟಗಳನ್ನು ತಾಯಿಯ ಹೆಗಲ ಮೇಲೆ ಹಾಕಿ ವಿವೇಕಾನಂದರು ಸಂಸಾರ ತೊರೆದು ಸನ್ಯಾಸಿಯಾಗುತ್ತಾರೆ. ಕಷ್ಟ ಕಾಲದಲ್ಲಿ ಕೈಬಿಟ್ಟು ಹೋದ ಎಂದು ಮಗನನ್ನು ತಾಯಿ ಭುವನೇಶ್ವರಿದೇವಿ ದ್ವೇಷಿಸಲಿಲ್ಲ, `ನನ್ನ ಮಗ 24ನೇ ವರ್ಷಕ್ಕೆ ಸನ್ಯಾಸಿಯಾದ` ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾ ಇದ್ದರು.
ನಿರುದ್ಯೋಗಿಯಾಗಿ ಹರಕಲು ಅಂಗಿ-ಪೈಜಾಮ ಹಾಕಿ ಬೀದಿ ಸುತ್ತುತ್ತಿದ್ದ ಅವರು ಎಷ್ಟೋ ಬಾರಿ ಉಪವಾಸ ಇರುತ್ತಿದ್ದರಂತೆ. ಕುಟುಂಬದ ಆಸ್ತಿಗಾಗಿ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಹೋರಾಟ ಸತತ ಹದಿನೇಳು ವರ್ಷ ನಡೆದು ವಿವೇಕಾನಂದರ ಸಾವಿನ ಹಿಂದಿನ ತಿಂಗಳಷ್ಟೇ ಇತ್ಯರ್ಥವಾಗಿತ್ತು.
ಕುಟುಂಬದ ಕಷ್ಟಗಳನ್ನು ತಾಯಿಯ ಹೆಗಲ ಮೇಲೆ ಹಾಕಿ ವಿವೇಕಾನಂದರು ಸಂಸಾರ ತೊರೆದು ಸನ್ಯಾಸಿಯಾಗುತ್ತಾರೆ. ಕಷ್ಟ ಕಾಲದಲ್ಲಿ ಕೈಬಿಟ್ಟು ಹೋದ ಎಂದು ಮಗನನ್ನು ತಾಯಿ ಭುವನೇಶ್ವರಿದೇವಿ ದ್ವೇಷಿಸಲಿಲ್ಲ, `ನನ್ನ ಮಗ 24ನೇ ವರ್ಷಕ್ಕೆ ಸನ್ಯಾಸಿಯಾದ` ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾ ಇದ್ದರು.
ಮಗ ಸತ್ತನಂತರ ಎಂಟು ವರ್ಷ ಬದುಕಿದ್ದ ತಾಯಿ ಖೇತ್ರಿ ಮಹಾರಾಜ ಕೊಡುತ್ತಿದ್ದ ಮಾಸಿಕ ನೂರು ರೂಪಾಯಿಯಲ್ಲಿ ಕಡು ಕಷ್ಟದಲ್ಲಿಯೇ ಜೀವನ ಸಾಗಿಸಿದ್ದರು.
ಈಗ ವಿವೇಕಾನಂದರನ್ನು ತಲೆಮೇಲಿಟ್ಟು ಮೆರೆದಾಡಲಾಗುತ್ತಿದ್ದರೂ ಬದುಕಿದ್ದಾಗ ಭಾರತೀಯರು ಅವರಿಗೆ ಹೆಚ್ಚು ನೆರವಾಗಿರಲಿಲ್ಲ. `ಪ್ರತಿ ಬಾರಿ ವಿದೇಶಿಯರಲ್ಲಿಯೇ ಭಿಕ್ಷೆ ಕೇಳಲೇನು` ಎಂದು ಅವರೊಮ್ಮೆ ಬೇಸರದಿಂದ ಪ್ರಶ್ನಿಸಿದ್ದರು.
`ವಿಶಾಲವಾದ ಎದೆ, ಬಲಿಷ್ಠವಾದ ತೋಳುಗಳು, ಕಾಂತಿಯುತ ಕಣ್ಣುಗಳು...` ಎಂದೆಲ್ಲ ವಿವೇಕಾನಂದರನ್ನು ಹಿಂದೂ ಧರ್ಮದ `ಹೀ ಮ್ಯಾನ್` ಎಂಬಂತೆ ಬಣ್ಣಿಸುವವರಿಗೆ ಅವರು ಹುಟ್ಟುರೋಗಿಯಾಗಿದ್ದರೆಂದು ಗೊತ್ತಿದೆಯೋ ಇಲ್ಲವೋ? ತೀವ್ರ ತಲೆನೋವಿನಿಂದ ಹಿಡಿದು ಹೃದಯದ ಕಾಯಿಲೆವರೆಗೆ ಅವರಿಗೆ 31 ಬಗೆಯ ರೋಗಗಳಿದ್ದವು.
`ವಿಶಾಲವಾದ ಎದೆ, ಬಲಿಷ್ಠವಾದ ತೋಳುಗಳು, ಕಾಂತಿಯುತ ಕಣ್ಣುಗಳು...` ಎಂದೆಲ್ಲ ವಿವೇಕಾನಂದರನ್ನು ಹಿಂದೂ ಧರ್ಮದ `ಹೀ ಮ್ಯಾನ್` ಎಂಬಂತೆ ಬಣ್ಣಿಸುವವರಿಗೆ ಅವರು ಹುಟ್ಟುರೋಗಿಯಾಗಿದ್ದರೆಂದು ಗೊತ್ತಿದೆಯೋ ಇಲ್ಲವೋ? ತೀವ್ರ ತಲೆನೋವಿನಿಂದ ಹಿಡಿದು ಹೃದಯದ ಕಾಯಿಲೆವರೆಗೆ ಅವರಿಗೆ 31 ಬಗೆಯ ರೋಗಗಳಿದ್ದವು.
ಮೂತ್ರಕೋಶ, ಲಿವರ್, ಗಂಟಲು ಸಂಬಂಧಿ ರೋಗಗಳಲ್ಲದೆ ರಕ್ತದೊತ್ತಡ, ಮಧುಮೇಹ, ಆಸ್ತಮಾ, ಅಜೀರ್ಣ, ಮಲಬದ್ಧತೆ, ಭೇದಿ, ನರದೌರ್ಬಲ್ಯ, ಮಂಡಿನೋವು, ಕಾಲುಬಾವು ಎಲ್ಲವೂ ಅವರನ್ನು ಕಾಡುತ್ತಿತ್ತು. ಪ್ರಾರಂಭದಿಂದಲೇ ನಿದ್ರಾಹೀನತೆಯಿಂದ ಬಳಲುತ್ತಿದ್ದ ಅವರು ಕೊನೆಯ ದಿನಗಳಲ್ಲಿ, ದಿನದಲ್ಲಿ ಒಂದೆರಡು ಗಂಟೆಗಳ ಕಾಲವೂ ನಿದ್ದೆ ಮಾಡಲಾಗುತ್ತಿರಲಿಲ್ಲ.
ಯಾರಾದರೂ ಮುಟ್ಟಿದರೆ ಮೈಯೆಲ್ಲ ನೋಯುತ್ತಿತ್ತು. `ನನ್ನ ಕೂದಲು-ಗಡ್ಡಗಳೆಲ್ಲ ವಯಸ್ಸಿಗೆ ಮೊದಲೇ ಬೆಳ್ಳಗಾಗಿ ಹೋಗಿದೆ, ಮುಖದ ಚರ್ಮ ಸುಕ್ಕುಗಟ್ಟಿ ನೆರಿಗೆಗಳು ಮೂಡಿವೆ` ಎಂದು ತನ್ನ 34ನೇ ವಯಸ್ಸಿನಲ್ಲಿ ಶಿಷ್ಯೆ ಮೇರಿ ಹೇಲ್ಗೆ ಬರೆದ ಪತ್ರದಲ್ಲಿ ಅವರು ಹೇಳಿಕೊಂಡಿದ್ದಾರೆ.
ಅನಾರೋಗ್ಯದಿಂದ ಬೇಸತ್ತು ಹೋಗಿದ್ದ ಅವರು, ಒಂದು ದಿನ `ದಯಾಮರಣದ ಮೂಲಕವಾದರೂ ನನಗೆ ಸಾವು ನೀಡಿ, ರೇಸ್ನಲ್ಲಿ ಓಡಲಾಗದ ಕುಂಟು ಕುದುರೆಯಂತಾಗಿದ್ದೇನೆ ನಾನು. ಈ ನೋವು-ಸಂಕಟ ಸಹಿಸಲಾರೆ` ಎಂದು ಹತಾಶೆಯಿಂದ ಹೇಳಿದ್ದನ್ನು ಸೋದರಿ ನಿವೇದಿತಾ ದಾಖಲಿಸಿದ್ದಾರೆ..
ಈ ಎಲ್ಲ ರೋಗಗಳ ನಡುವೆಯೂ ಅವರ ನಾಲಗೆಯ ಚಪಲ ಮಾತ್ರ ಕಡಿಮೆಯಾಗಿರಲಿಲ್ಲ. ಎಲ್ಲ ಬಂಗಾಳಿಗಳಂತೆ ಅವರೊಬ್ಬ ತಿಂಡಿಪೋತರಾಗಿದ್ದರು. `ನಾನು ಠಾಕೂರ್ (ಪರಮಹಂಸ) ಅವರಿಗೆ ಬಿಸಿನೀರಿನಲ್ಲಿ ಮಸಾಲೆಯ ಜತೆ ಮಾಂಸದ ತುಂಡುಗಳನ್ನು ಹಾಕಿ ಬೇಯಿಸಿ ಪಲ್ಯ ಮಾಡಿಕೊಡುತ್ತಿದ್ದೆ. ಆದರೆ ನರೇನ್ (ವಿವೇಕಾನಂದ) ಮಾತ್ರ ಮಾಂಸದ ಅಡುಗೆಯನ್ನು ಬಗೆಬಗೆಯಲ್ಲಿ ಮಾಡುತ್ತಿದ್ದ` ಎಂದು ಶಾರದಾದೇವಿ ಬರೆದಿದ್ದಾರೆ.
ದೇಶ-ವಿದೇಶಗಳ ಮಾಂಸಾಹಾರಿ ಅಡುಗೆಯನ್ನು ಮಾಡುವ ಅವರ ಪಾಕಪ್ರಾವೀಣ್ಯತೆ ಬಗ್ಗೆ ಸೋದರಿ ನಿವೇದಿತಾ ವಿವರವಾಗಿ ದಾಖಲಿಸಿದ್ದಾರೆ. ಅವರ ಸಾವಿನ ದಿನವೇ ಮಳೆಗಾಲದ ಮೊದಲ ಅತಿಥಿಗಳಾಗಿ `ಹಿಲ್ಸಾ` ಮೀನುಗಳು ಹೂಗ್ಲಿ ನದಿ ಪ್ರವೇಶಿಸಿದ್ದವು. ಅದನ್ನು ತಂದು ಪಲ್ಯಮಾಡಿ ಮಧ್ಯಾಹ್ಮ ಊಟ ಮಾಡಿ ವಿರಮಿಸಿದ್ದ ಅವರು ರಾತ್ರಿ ಕೊನೆಯುಸಿರೆಳೆದಿದ್ದರು.
ಅಕಾಡೆಮಿಕ್ ಮಾನದಂಡಗಳ ಪ್ರಕಾರ ದಡ್ಡರಾಗಿರುವ, ಹತ್ತಾರು ಬಗೆಯ ಕಾಯಿಲೆಗಳಿಂದ ನರಳುತ್ತಿರುವ, ಕುಟುಂಬದ ಕಷ್ಟಗಳಿಂದ ಜರ್ಝರಿತರಾಗಿರುವ, ತಿಂಡಿಪೋತರಾಗಿರುವ ಸಾಮಾನ್ಯ ವ್ಯಕ್ತಿಗಳು ಕೂಡಾ `ವಿವೇಕಾನಂದ`ನಾಗಿ ಬೆಳೆಯಲು ಸಾಧ್ಯ ಎಂಬುದನ್ನು ನರೇಂದ್ರನಾಥ ತನ್ನ ಸಾಧನೆ ಮೂಲಕ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ.
ಅಕಾಡೆಮಿಕ್ ಮಾನದಂಡಗಳ ಪ್ರಕಾರ ದಡ್ಡರಾಗಿರುವ, ಹತ್ತಾರು ಬಗೆಯ ಕಾಯಿಲೆಗಳಿಂದ ನರಳುತ್ತಿರುವ, ಕುಟುಂಬದ ಕಷ್ಟಗಳಿಂದ ಜರ್ಝರಿತರಾಗಿರುವ, ತಿಂಡಿಪೋತರಾಗಿರುವ ಸಾಮಾನ್ಯ ವ್ಯಕ್ತಿಗಳು ಕೂಡಾ `ವಿವೇಕಾನಂದ`ನಾಗಿ ಬೆಳೆಯಲು ಸಾಧ್ಯ ಎಂಬುದನ್ನು ನರೇಂದ್ರನಾಥ ತನ್ನ ಸಾಧನೆ ಮೂಲಕ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ.
ಇಷ್ಟೆಲ್ಲ ಕಷ್ಟ-ಕಾಯಿಲೆಗಳ ನಡುವೆಯೂ ಹಿಂದೂ ಧರ್ಮವೂ ಸೇರಿದಂತೆ ಜಗತ್ತಿನ ಎಲ್ಲ ಧರ್ಮಗಳ ಗ್ರಂಥಗಳು ಮತ್ತು ತತ್ವಜ್ಞಾನವನ್ನು ಅವರು ಅಧ್ಯಯನ ಮಾಡಿದ್ದರು. ದೇಶ-ವಿದೇಶಗಳಿಗೆ ಭೇಟಿ ನೀಡಿ ಭಾಷಣ ಮಾಡುತ್ತಿದ್ದರು, ನಿರಂತರವಾಗಿ ಪುಸ್ತಕ ಮತ್ತು ಪತ್ರಗಳನ್ನು ಬರೆಯುತ್ತಿದ್ದರು.
ಸಾವಿರಾರು ಶಿಷ್ಯರನ್ನು, ಕೋಟ್ಯಂತರ ಅನುಯಾಯಿಗಳನ್ನು ಹೊಂದಿದ್ದರು. ತಮ್ಮ ಗುರುವಿನ ಹೆಸರಲ್ಲಿ ಜಗತ್ತಿನಾದ್ಯಂತ ರಾಮಕೃಷ್ಣ ಮಿಷನ್ ಹೆಸರಿನ ಸಂಘಟನೆಯನ್ನು ಕಟ್ಟಿ ಬೆಳೆಸಿದ್ದರು.
ಇವೆಲ್ಲವನ್ನು ಅವರು ಮಾಡಿದ್ದು ಕೇವಲ ಹದಿನೈದು ವರ್ಷಗಳ ಅವಧಿಯಲ್ಲಿ. ಯಃಕಶ್ಚಿತ್ ಮನುಷ್ಯನೊಬ್ಬ ಇಂತಹ ಸಾಧನೆ ಮಾಡಲು ಸಾಧ್ಯವೇ? ಖಂಡಿತ ಸಾಧ್ಯ, ಅದಕ್ಕಾಗಿ ಆತ `ವಿವೇಕಾನಂದ` ಆಗಿರಬೇಕು
19/01/2011
`ವಿವೇಕಾನಂದರ ಬಗ್ಗೆ...' ಗ್ರಹಿಕೆಗೆ ಪೂರಕವಾಗಿ...
ಕಳೆದ ಸೋಮವಾರದ (ಜ.16) ಸ್ವಾಮಿ ವಿವೇಕಾನಂದರ ಕುರಿತ ನನ್ನ ಅಂಕಣಕ್ಕೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಬಹಳ ಮಂದಿ ಅದನ್ನು ಮೆಚ್ಚಿಕೊಂಡಿದ್ದಾರೆ, ಕೆಲವರು ಅದನ್ನು ವಿರೋಧಿಸಿದ್ದಾರೆ. ವಿರೋಧಿಸುವವರು ಅಂಕಣದಲ್ಲಿ ವ್ಯಕ್ತಪಡಿಸಿದ ವಿಚಾರಗಳನ್ನು ಮತ್ತು ಅದರ ಒಟ್ಟು ಆಶಯವನ್ನು ಸರಿಯಾಗಿ ಗ್ರಹಿಸಲು ಸಾಧ್ಯವಾಗಿಲ್ಲವೇನೋ ಎಂಬ ಅನುಮಾನ ನನಗೆ.
ಸಂವಹನ ಸಾಮರ್ಥ್ಯ ಒಬ್ಬ ಪತ್ರಕರ್ತನ ದೊಡ್ಡ ಶಕ್ತಿ. ಇದರ ಮೂಲಕವೇ ಆತ ಓದುಗನ ಜತೆ ಸಂಬಂಧ ಸ್ಥಾಪನೆಗೆ ಪ್ರಯತ್ನ ಮಾಡಬೇಕಾಗುತ್ತದೆ. ಸಂವಹನದ ಸೇತುವೆ ಮುರಿದುಬಿದ್ದರೆ ಪತ್ರಕರ್ತ ಮತ್ತು ಓದುಗರಿಬ್ಬರೂ ಪರಸ್ಪರ ಸಂಧಿಸಲಾಗದೆ ಇದ್ದಲ್ಲಿಯೇ ಉಳಿದುಬಿಡುತ್ತಾರೆ.
ಪೂರ್ವಗ್ರಹ ಇಲ್ಲದ ಮುಕ್ತ ಮನಸ್ಸಿನ ಮೂಲಕ ಮಾತ್ರ ಸಂವಹನದ ಸೇತುವೆಯನ್ನು ಗಟ್ಟಿಗೊಳಿಸಲು ಸಾಧ್ಯ. ಈ ಉದ್ದೇಶದಿಂದ ಕೆಲವು ವಿವರಣೆಗಳನ್ನು ನೀಡಬಯಸುತ್ತೇನೆ. ಇದು ನನ್ನ ಬರವಣಿಗೆಯನ್ನು ಸರಿಯಾದ ರೀತಿಯಲ್ಲಿ ಗ್ರಹಿಸಲು ನೆರವಾಗಬಹುದೆಂಬ ಆಶಯ ನನ್ನದು.
ಯಾವುದೇ ವ್ಯಕ್ತಿಯ ಬಗ್ಗೆ ದುರುದ್ದೇಶ ಇರಬೇಕಾದರೆ ಕನಿಷ್ಠ ಭಿನ್ನಾಭಿಪ್ರಾಯಗಳಾದರೂ ಇರಬೇಕು.ನನ್ನ ಓದಿನ ಮಿತಿಯಲ್ಲಿಯೂ ನನಗೆ ಗಾಂಧೀಜಿ ಮತ್ತು ಅಂಬೇಡ್ಕರ್ ಬಗ್ಗೆ ಭಿನ್ನಾಭಿಪ್ರಾಯಗಳಿವೆ, ಆದರೆ ವಿವೇಕಾನಂದರು ಹೇಳಿರುವ ಯಾವ ವಿಚಾರದ ಬಗ್ಗೆಯೂ ಲವಲೇಶದಷ್ಟೂ ಭಿನ್ನಾಭಿಪ್ರಾಯ ಇಲ್ಲ ಎನ್ನುವುದನ್ನು ಮೊದಲು ಸ್ಪಷ್ಟಪಡಿಸಬಯಸುತ್ತೇನೆ.
ಆದರೆ ವಿವೇಕಾನಂದರನ್ನು ಸರಿಯಾಗಿ ಓದಿದ ಯಾರಿಗೂ ಅವರು ಹಿಂದೂ ಧರ್ಮದ ಸುಧಾರಣೆಗಾಗಿ ಹೇಳಿರುವ ವಿಚಾರಗಳು ಅವರ ಸಾವಿನ 110 ವರ್ಷಗಳ ನಂತರವೂ ಅನುಷ್ಠಾನಕ್ಕೆ ಬಂದಿಲ್ಲ ಎನ್ನುವ ನೋವು ಕಾಡದೆ ಇರದು.
ಬಹುಶಃ ಅವರು ಬಯಸಿದ ರೀತಿಯಲ್ಲಿ ಸುಧಾರಣೆಯಾಗಿದ್ದರೆ ಹಿಂದೂ ಧರ್ಮ ಭಾರತ-ನೇಪಾಳಕ್ಕಷ್ಟೇ ಸೀಮಿತಗೊಳ್ಳದೆ ಜಗತ್ತಿನಾದ್ಯಂತ ಹರಡುತ್ತಿತ್ತು. ಆ ಪ್ರಯತ್ನವನ್ನೇ ಅವರು ಮಾಡಿದ್ದಲ್ಲವೇ?
ಇದರಲ್ಲಿ ಮುಖ್ಯವಾಗಿ ನಾನು ಬಳಸಿದ ಕೆಲವು ಶಬ್ದಗಳ ಬಗ್ಗೆ ಕೆಲವರು ಆಕ್ಷೇಪ ಎತ್ತಿದ್ದಾರೆ. ಉದಾಹರಣೆಗೆ ಅವರನ್ನು `ದಡ್ಡ ವಿದ್ಯಾರ್ಥಿ` ಎಂದು ಕರೆದದ್ದು ಸರಿಯೇ ಎನ್ನುವುದು ಕೆಲವರ ಪ್ರಶ್ನೆ. `ದಡ್ಡ` ಎನ್ನುವ ಶಬ್ದ ಮಾನಹಾನಿಕರ ಅಲ್ಲವೇ ಅಲ್ಲ.
ಆದರೆ ವಿವೇಕಾನಂದರನ್ನು ಆ ಅರ್ಥದಲ್ಲಿಯೂ ದಡ್ಡ ಎಂದು ಹೇಳಿದುದಲ್ಲ. ಅವರಿಗೆ ಕಡಿಮೆ ಅಂಕಗಳು ಬಂದಿರುವುದು ನಮ್ಮ ಶಿಕ್ಷಣದ ವ್ಯವಸ್ಥೆಯಲ್ಲಿನ ದೋಷವನ್ನು ತೋರಿಸುತ್ತದೆಯೇ ಹೊರತು ಅವರ ಅಸಾಮರ್ಥ್ಯವನ್ನಲ್ಲ. ನಿಜವಾದ ಬುದ್ಧಿವಂತರನ್ನು ಗುರುತಿಸಲು ಸಾಧ್ಯವಾಗದ ಅಂದಿನ ವ್ಯವಸ್ಥೆ ಇನ್ನೂ ಬದಲಾಗಿಲ್ಲ.
ಈಗಲೂ ಬಾಯಿಪಾಠ ಮಾಡಿಸಿ ಪರೀಕ್ಷೆಗಳಲ್ಲಿ ಅಂಕ ಗಳಿಸಲಷ್ಟೇ ನೆರವಾಗುವ ಮಟ್ಟದಲ್ಲಿ ಅದು ಉಳಿದುಕೊಂಡುಬಿಟ್ಟಿದೆ ಎನ್ನುವುದನ್ನು ಹೇಳುವುದಷ್ಟೇ ನನ್ನ ಉದ್ದೇಶವಾಗಿತ್ತು.
ಅವರನ್ನು ಶಿಕ್ಷಕ ವೃತ್ತಿಯಿಂದ ವಜಾಗೊಳಿಸಿದ್ದನ್ನು ಹೇಳಿರುವ ಬಗ್ಗೆ ಕೆಲವರ ತಕರಾರುಗಳಿವೆ.
ಆ ಪ್ರಕರಣವನ್ನು ನಾನು ಇನ್ನಷ್ಟು ವಿವರಿಸಬೇಕಾಗಿತ್ತೋ ಏನೋ? ಈಶ್ವರಚಂದ್ರ ವಿದ್ಯಾಸಾಗರ ಅವರು ವಿವೇಕಾನಂದರನ್ನು ಕೆಲಸದಿಂದ ಕಿತ್ತುಹಾಕಲು ಕಾರಣ ಅವರ ಅಳಿಯ. ಆತ ಶಿಕ್ಷಣ ವ್ಯವಸ್ಥೆಯ ಆಡಳಿತ ಸೂತ್ರ ಕೈಗೆತ್ತಿಕೊಂಡ ನಂತರ ವಿವೇಕಾನಂದರ ಪ್ರತಿಭೆಯ ಬಗ್ಗೆ ಅಸೂಯೆಪಟ್ಟು ಚಾಡಿ ಹೇಳಿ ಮಾವನ ತಲೆ ಕೆಡಿಸುತ್ತಾನೆ.
ಈಶ್ವರಚಂದ್ರ ವಿದ್ಯಾಸಾಗರರಂತಹ ವ್ಯಕ್ತಿ ಕೂಡಾ ದೂರನ್ನು ಪರಾಮರ್ಶಿಸಲು ಹೋಗುವುದಿಲ್ಲ. ನಮ್ಮ ಈಗಿನ ಶಿಕ್ಷಣ ಸಂಸ್ಥೆಗಳು ಇದಕ್ಕಿಂತ ಏನಾದರೂ ಭಿನ್ನವಾಗಿವೆಯೇ? ಪ್ರತಿಭಾವಂತ ಶಿಕ್ಷಕನಿಗೆ ಮಾನ್ಯತೆ ಸಿಗುತ್ತಿದೆಯೇ? ಒಂದು ಸಣ್ಣಶಾಲೆಯಲ್ಲಿ ಪಾಠ ಹೇಳಲು `ಅಸಮರ್ಥ`ನಾದ ವ್ಯಕ್ತಿ ಮುಂದೊಂದು ದಿನ ಇಡೀ ಜಗತ್ತಿಗೆ ಪಾಠಹೇಳುತ್ತಾರೆ.
ನರೇಂದ್ರನಾಥರೇನೋ ಕೀಳರಿಮೆಯಿಂದ ಬಳಲದೆ ಇನ್ನಷ್ಟು ಎತ್ತರಕ್ಕೆ ಬೆಳೆದುಬಿಟ್ಟರು. ಆದರೆ ಇದೇ ವ್ಯವಸ್ಥೆಯೊಳಗೆ ಸಿಕ್ಕಿ ಎಷ್ಟೋ ಪ್ರತಿಭೆಗಳು ಕಮರಿಹೋಗಿವೆಯೋ ಏನೋ? ಅಂತಹವರಿಗೆ ವಿವೇಕಾನಂದರ ಸಾಧನೆ ಸ್ಫೂರ್ತಿಯಾಗಬೇಕು.
ಅವರನ್ನು `ತಿಂಡಿಪೋತ` ಎಂದು ಕರೆದದ್ದು ಸರಿಯೇ ಎನ್ನುವುದು ಕೆಲವರ ಪ್ರಶ್ನೆ. ನನಗೆ ಅನೇಕ ಬಂಗಾಳಿ ಮಿತ್ರರಿದ್ದಾರೆ. ಅವರನ್ನು ಹತ್ತಿರದಿಂದ ಕಂಡಿದ್ದೇನೆ. ಬಂಗಾಳಿಗಳು ನಿಜಕ್ಕೂ ತಿಂಡಿಪೋತರು. ಹಾಗೆಂದು ಕರೆದರೆ ಅವರು ಹೆಮ್ಮೆಪಡುತ್ತಾರೆ. ಸ್ವತಃ ರಾಮಕೃಷ್ಣ ಪರಮಹಂಸರು ತಿಂಡಿಯನ್ನು ಬಹಳ ಇಷ್ಟಪಡುತ್ತಿದ್ದರು.
ಬಂಗಾಳಿ ಭಕ್ತರು ಬರಿಗೈಯಲ್ಲಿ ಬಂದರೆ `ಬಂಗಾಳಿಯಾಗಿ ನೀನು ಸಿಹಿತಿಂಡಿ ಇಲ್ಲದೆ ಬಂದಿದ್ದಿಯಲ್ಲಾ` ಎಂದು ಹುಸಿಮುನಿಸು ತೋರಿದ್ದುಂಟು. ನಮ್ಮ ಯುವಕರು ತಿಂದುಂಡು ಆರೋಗ್ಯವಂತರಾಗಿ ಬೆಳೆದರೆ ಮಾತ್ರ ಬಲಿಷ್ಠ ಭಾರತ ನಿರ್ಮಾಣ ಮಾಡಲು ಸಾಧ್ಯ ಎಂದು ವಿವೇಕಾನಂದರು ಹೇಳುತ್ತಿದ್ದರು.
ಅವರನ್ನು `ರೋಗಿ` ಎಂದು ಕರೆದದ್ದು ಸರಿಯೇ ಎಂದು ಕೆಲವರು ದುಃಖದಿಂದ ಪ್ರಶ್ನಿಸಿದ್ದಾರೆ. ರೋಗ ಎನ್ನುವುದು ಅಪರಾಧ ಇಲ್ಲವೇ ಪಾಪ ಅಲ್ಲ. ವಿವೇಕಾನಂದರು ರೋಗಿಯಾಗಿದ್ದು ದುರ್ವ್ಯಸನಗಳಿಂದಲ್ಲ. ಅದು ಸ್ವಲ್ಪಮಟ್ಟಿಗೆ ವಂಶವಾಹಿಯಾಗಿ ಬಂದದ್ದು, ಅವರ ತಂದೆ ಕೂಡಾ 52ನೇ ವಯಸ್ಸಿಗೆ ನಿಧನರಾಗಿದ್ದರು.
ಜತೆಗೆ ಜೀವನದಲ್ಲಿ ಅನುಭವಿಸಿದ ಬಡತನ, ಹಸಿವು ಮೊದಲಾದ ಕಷ್ಟಗಳು ಅವರ ದೈಹಿಕ ಆರೋಗ್ಯವನ್ನು ಕೆಡಿಸಿತ್ತು. ಒಂದು ಸಣ್ಣ ತಲೆನೋವು ಬಂದರೆ ಒದ್ದಾಡುವ, ವೈಫಲ್ಯಗಳಿಗೆ ಅನಾರೋಗ್ಯದ ಸಬೂಬು ನೀಡಿ ತಪ್ಪಿಸಿಕೊಳ್ಳುವ ನಮ್ಮಂತಹವರಿಗೆ ವಿವೇಕಾನಂದರು ತಮ್ಮ ಅನಾರೋಗ್ಯವನ್ನು ಮೀರಿ ಮಾಡಿದ ಸಾಧನೆ ಸ್ಫೂರ್ತಿಯಲ್ಲವೇ? ಅವರು ವಿಶ್ವದ ಆಧ್ಯಾತ್ಮಿಕ ಕ್ಷೇತ್ರವನ್ನು ಗೆದ್ದದ್ದು ದೈಹಿಕ ಬಲದಿಂದ ಅಲ್ಲ, ಆತ್ಮಬಲದಿಂದ. ಇದು ವಿವೇಕಾನಂದರ ಜೀವನದಿಂದ ಕಲಿಯಬೇಕಾದ ಪಾಠ.
ಹೌದು, ಕೆಲವು ಶಬ್ದಗಳನ್ನು ಇನ್ನಷ್ಟು ಮೆದುಗೊಳಿಸಬಹುದಿತ್ತು.. ದಡ್ಡ ಎನ್ನುವ ಬದಲು `ಬುದ್ಧಿವಂತನಲ್ಲದ` `ಹೆಚ್ಚು ಅಂಕ ಗಳಿಸಲಾಗದ` ಎಂದು, `ತಿಂಡಿಪೋತ` ಎನ್ನುವ ಬದಲಿಗೆ `ತಿಂಡಿಯನ್ನು ಇಷ್ಟಪಡುವ` ಎಂದು ಹೇಳಬಹುದಿತ್ತೋ ಏನೋ? ಇಂಗ್ಲಿಷಿನ `ಚೆಯಿನ್ ಸ್ಮೋಕರ್` ಎನ್ನುವುದಕ್ಕೆ ಕನ್ನಡದಲ್ಲಿ ಏನು ಹೇಳುವುದೆಂದು ಗೊತ್ತಾಗದೆ `ವ್ಯಸನಿ` ಎಂದು ಬರೆದೆ.
ಅದನ್ನು ತಪ್ಪಿಸಬಹುದಿತ್ತು. ಕೆಲವು ವಿಷಯಗಳನ್ನು ಇನ್ನಷ್ಟು ವಿಸ್ತರಿಸಿ ಬರೆಯಬಹುದಿತ್ತು. ಉದಾಹರಣೆಗೆ ಅಮೆರಿಕದಲ್ಲಿ ರಾತ್ರಿ ಔತಣಕೂಟಕ್ಕೆ ಹೋಗಿದ್ದರೂ ಅವರು ಅಲ್ಲಿ ಕುಡಿದು-ಕುಣಿದು ಕುಪ್ಪಳಿಸುವ ಮೋಜು ಮಾಡಿಲ್ಲ. ಆ ಔತಣಗಳ ಕರೆಗಳಿಂದ ತಪ್ಪಿಸಲಿಕ್ಕಾಗಿ ಅವರು ವಿದೇಶಕ್ಕೆ ಹೋದ ಬಹಳಷ್ಟು ಸಂದರ್ಭಗಳಲ್ಲಿ ಸಸ್ಯಾಹಾರಿಯಾಗಿ ಬಿಡುತ್ತಿದ್ದರು.
ಈ ಬರವಣಿಗೆಗೆ ಆಧಾರವಾಗಿ ಸಿಕ್ಕಿದ್ದು ಮುಖ್ಯವಾಗಿ ಮಣಿ ಸಂಕರ್ ಮುಖರ್ಜಿ ಅವರ `ದಿ ಮಾಂಕ್ ಆ್ಯಸ್ ಮ್ಯಾನ್` ಪುಸ್ತಕ. ನನ್ನ ಬಂಗಾಳಿ ಮಿತ್ರರು ಕೆಲವು ವರ್ಷಗಳ ಹಿಂದೆಯೇ ಈ ಪುಸ್ತಕದ ಬಗ್ಗೆ ನನಗೆ ಹೇಳಿದ್ದರೂ ಭಾಷಾ ಸಮಸ್ಯೆಯಿಂದಾಗಿ ಓದಲಾಗಿರಲಿಲ್ಲ. ಕಳೆದ ವರ್ಷ ಇಂಗ್ಲಿಷ್ನಲ್ಲಿ ಪ್ರಕಟವಾಗಿದ್ದನ್ನು ಕೇಳಿ ತಂದು ಓದಿದೆ.
ವಿವೇಕಾನಂದರ `ಸಮಗ್ರ ಕೃತಿ ಸಂಗ್ರಹ`, ಮೇರಿ ಲೂಯಿಸ್ ಬರ್ಕ್ ಅವರ `ವಿವೇಕಾನಂದ ಇನ್ ದಿ ವೆಸ್ಟ್: ನ್ಯೂ ಡಿಸ್ಕವರಿ`, ಸ್ವಾಮಿ ವಿವೇಕಾನಂದ ಅವರ ಸೋದರ ಮಹೇಂದ್ರನಾಥ ದತ್ತಾ ಬರೆದಿರುವ ಸುಮಾರು 90 ಪುಸ್ತಕಗಳು, ಇನ್ನೊಬ್ಬ ಸೋದರ ಡಾ. ಭೂಪೇಂದ್ರನಾಥ ದತ್ತಾ ಬರೆದಿರುವ ಪುಸ್ತಕ, ಸೋದರಿ ನಿವೇದಿತಾ ಅವರ ಲೇಖನಗಳು-ಹೀಗೆ ನೂರಾರು ಪುಸ್ತಕಗಳನ್ನು ಓದಿ ಬರೆದ ಪುಸ್ತಕ ಅದು. ಅದನ್ನು ಆಧರಿಸಿಯೇ ಬರೆದೆ.
ಸ್ವಾಮಿ ವಿವೇಕಾನಂದರು ಇಡೀ ವಿಶ್ವದ ಅಭಿಮಾನ-ಗೌರವಕ್ಕೆ ಪಾತ್ರವಾದ ಅಧ್ಯಾತ್ಮ ಚೇತನ. ಅದನ್ನು ಯಾರೂ ಅಲ್ಲಗಳೆಯುವುದು ಸಾಧ್ಯ ಇಲ್ಲ. ಅವರನ್ನು ಇನ್ನಷ್ಟು ಅರಿಯುವ ಪ್ರಯತ್ನದಿಂದ ಅವರ ಬಗೆಗಿನ ಅಭಿಮಾನ-ಗೌರವ ಹೆಚ್ಚಾಗುತ್ತದೆಯೇ ಹೊರತು ಕಡಿಮೆಯಾಗಲಾರದು.
ಸಂವಹನ ಸಾಮರ್ಥ್ಯ ಒಬ್ಬ ಪತ್ರಕರ್ತನ ದೊಡ್ಡ ಶಕ್ತಿ. ಇದರ ಮೂಲಕವೇ ಆತ ಓದುಗನ ಜತೆ ಸಂಬಂಧ ಸ್ಥಾಪನೆಗೆ ಪ್ರಯತ್ನ ಮಾಡಬೇಕಾಗುತ್ತದೆ. ಸಂವಹನದ ಸೇತುವೆ ಮುರಿದುಬಿದ್ದರೆ ಪತ್ರಕರ್ತ ಮತ್ತು ಓದುಗರಿಬ್ಬರೂ ಪರಸ್ಪರ ಸಂಧಿಸಲಾಗದೆ ಇದ್ದಲ್ಲಿಯೇ ಉಳಿದುಬಿಡುತ್ತಾರೆ.
ಪೂರ್ವಗ್ರಹ ಇಲ್ಲದ ಮುಕ್ತ ಮನಸ್ಸಿನ ಮೂಲಕ ಮಾತ್ರ ಸಂವಹನದ ಸೇತುವೆಯನ್ನು ಗಟ್ಟಿಗೊಳಿಸಲು ಸಾಧ್ಯ. ಈ ಉದ್ದೇಶದಿಂದ ಕೆಲವು ವಿವರಣೆಗಳನ್ನು ನೀಡಬಯಸುತ್ತೇನೆ. ಇದು ನನ್ನ ಬರವಣಿಗೆಯನ್ನು ಸರಿಯಾದ ರೀತಿಯಲ್ಲಿ ಗ್ರಹಿಸಲು ನೆರವಾಗಬಹುದೆಂಬ ಆಶಯ ನನ್ನದು.
ಯಾವುದೇ ವ್ಯಕ್ತಿಯ ಬಗ್ಗೆ ದುರುದ್ದೇಶ ಇರಬೇಕಾದರೆ ಕನಿಷ್ಠ ಭಿನ್ನಾಭಿಪ್ರಾಯಗಳಾದರೂ ಇರಬೇಕು.ನನ್ನ ಓದಿನ ಮಿತಿಯಲ್ಲಿಯೂ ನನಗೆ ಗಾಂಧೀಜಿ ಮತ್ತು ಅಂಬೇಡ್ಕರ್ ಬಗ್ಗೆ ಭಿನ್ನಾಭಿಪ್ರಾಯಗಳಿವೆ, ಆದರೆ ವಿವೇಕಾನಂದರು ಹೇಳಿರುವ ಯಾವ ವಿಚಾರದ ಬಗ್ಗೆಯೂ ಲವಲೇಶದಷ್ಟೂ ಭಿನ್ನಾಭಿಪ್ರಾಯ ಇಲ್ಲ ಎನ್ನುವುದನ್ನು ಮೊದಲು ಸ್ಪಷ್ಟಪಡಿಸಬಯಸುತ್ತೇನೆ.
ಆದರೆ ವಿವೇಕಾನಂದರನ್ನು ಸರಿಯಾಗಿ ಓದಿದ ಯಾರಿಗೂ ಅವರು ಹಿಂದೂ ಧರ್ಮದ ಸುಧಾರಣೆಗಾಗಿ ಹೇಳಿರುವ ವಿಚಾರಗಳು ಅವರ ಸಾವಿನ 110 ವರ್ಷಗಳ ನಂತರವೂ ಅನುಷ್ಠಾನಕ್ಕೆ ಬಂದಿಲ್ಲ ಎನ್ನುವ ನೋವು ಕಾಡದೆ ಇರದು.
ಬಹುಶಃ ಅವರು ಬಯಸಿದ ರೀತಿಯಲ್ಲಿ ಸುಧಾರಣೆಯಾಗಿದ್ದರೆ ಹಿಂದೂ ಧರ್ಮ ಭಾರತ-ನೇಪಾಳಕ್ಕಷ್ಟೇ ಸೀಮಿತಗೊಳ್ಳದೆ ಜಗತ್ತಿನಾದ್ಯಂತ ಹರಡುತ್ತಿತ್ತು. ಆ ಪ್ರಯತ್ನವನ್ನೇ ಅವರು ಮಾಡಿದ್ದಲ್ಲವೇ?
ಇದರಲ್ಲಿ ಮುಖ್ಯವಾಗಿ ನಾನು ಬಳಸಿದ ಕೆಲವು ಶಬ್ದಗಳ ಬಗ್ಗೆ ಕೆಲವರು ಆಕ್ಷೇಪ ಎತ್ತಿದ್ದಾರೆ. ಉದಾಹರಣೆಗೆ ಅವರನ್ನು `ದಡ್ಡ ವಿದ್ಯಾರ್ಥಿ` ಎಂದು ಕರೆದದ್ದು ಸರಿಯೇ ಎನ್ನುವುದು ಕೆಲವರ ಪ್ರಶ್ನೆ. `ದಡ್ಡ` ಎನ್ನುವ ಶಬ್ದ ಮಾನಹಾನಿಕರ ಅಲ್ಲವೇ ಅಲ್ಲ.
ಆದರೆ ವಿವೇಕಾನಂದರನ್ನು ಆ ಅರ್ಥದಲ್ಲಿಯೂ ದಡ್ಡ ಎಂದು ಹೇಳಿದುದಲ್ಲ. ಅವರಿಗೆ ಕಡಿಮೆ ಅಂಕಗಳು ಬಂದಿರುವುದು ನಮ್ಮ ಶಿಕ್ಷಣದ ವ್ಯವಸ್ಥೆಯಲ್ಲಿನ ದೋಷವನ್ನು ತೋರಿಸುತ್ತದೆಯೇ ಹೊರತು ಅವರ ಅಸಾಮರ್ಥ್ಯವನ್ನಲ್ಲ. ನಿಜವಾದ ಬುದ್ಧಿವಂತರನ್ನು ಗುರುತಿಸಲು ಸಾಧ್ಯವಾಗದ ಅಂದಿನ ವ್ಯವಸ್ಥೆ ಇನ್ನೂ ಬದಲಾಗಿಲ್ಲ.
ಈಗಲೂ ಬಾಯಿಪಾಠ ಮಾಡಿಸಿ ಪರೀಕ್ಷೆಗಳಲ್ಲಿ ಅಂಕ ಗಳಿಸಲಷ್ಟೇ ನೆರವಾಗುವ ಮಟ್ಟದಲ್ಲಿ ಅದು ಉಳಿದುಕೊಂಡುಬಿಟ್ಟಿದೆ ಎನ್ನುವುದನ್ನು ಹೇಳುವುದಷ್ಟೇ ನನ್ನ ಉದ್ದೇಶವಾಗಿತ್ತು.
ಅವರನ್ನು ಶಿಕ್ಷಕ ವೃತ್ತಿಯಿಂದ ವಜಾಗೊಳಿಸಿದ್ದನ್ನು ಹೇಳಿರುವ ಬಗ್ಗೆ ಕೆಲವರ ತಕರಾರುಗಳಿವೆ.
ಆ ಪ್ರಕರಣವನ್ನು ನಾನು ಇನ್ನಷ್ಟು ವಿವರಿಸಬೇಕಾಗಿತ್ತೋ ಏನೋ? ಈಶ್ವರಚಂದ್ರ ವಿದ್ಯಾಸಾಗರ ಅವರು ವಿವೇಕಾನಂದರನ್ನು ಕೆಲಸದಿಂದ ಕಿತ್ತುಹಾಕಲು ಕಾರಣ ಅವರ ಅಳಿಯ. ಆತ ಶಿಕ್ಷಣ ವ್ಯವಸ್ಥೆಯ ಆಡಳಿತ ಸೂತ್ರ ಕೈಗೆತ್ತಿಕೊಂಡ ನಂತರ ವಿವೇಕಾನಂದರ ಪ್ರತಿಭೆಯ ಬಗ್ಗೆ ಅಸೂಯೆಪಟ್ಟು ಚಾಡಿ ಹೇಳಿ ಮಾವನ ತಲೆ ಕೆಡಿಸುತ್ತಾನೆ.
ಈಶ್ವರಚಂದ್ರ ವಿದ್ಯಾಸಾಗರರಂತಹ ವ್ಯಕ್ತಿ ಕೂಡಾ ದೂರನ್ನು ಪರಾಮರ್ಶಿಸಲು ಹೋಗುವುದಿಲ್ಲ. ನಮ್ಮ ಈಗಿನ ಶಿಕ್ಷಣ ಸಂಸ್ಥೆಗಳು ಇದಕ್ಕಿಂತ ಏನಾದರೂ ಭಿನ್ನವಾಗಿವೆಯೇ? ಪ್ರತಿಭಾವಂತ ಶಿಕ್ಷಕನಿಗೆ ಮಾನ್ಯತೆ ಸಿಗುತ್ತಿದೆಯೇ? ಒಂದು ಸಣ್ಣಶಾಲೆಯಲ್ಲಿ ಪಾಠ ಹೇಳಲು `ಅಸಮರ್ಥ`ನಾದ ವ್ಯಕ್ತಿ ಮುಂದೊಂದು ದಿನ ಇಡೀ ಜಗತ್ತಿಗೆ ಪಾಠಹೇಳುತ್ತಾರೆ.
ನರೇಂದ್ರನಾಥರೇನೋ ಕೀಳರಿಮೆಯಿಂದ ಬಳಲದೆ ಇನ್ನಷ್ಟು ಎತ್ತರಕ್ಕೆ ಬೆಳೆದುಬಿಟ್ಟರು. ಆದರೆ ಇದೇ ವ್ಯವಸ್ಥೆಯೊಳಗೆ ಸಿಕ್ಕಿ ಎಷ್ಟೋ ಪ್ರತಿಭೆಗಳು ಕಮರಿಹೋಗಿವೆಯೋ ಏನೋ? ಅಂತಹವರಿಗೆ ವಿವೇಕಾನಂದರ ಸಾಧನೆ ಸ್ಫೂರ್ತಿಯಾಗಬೇಕು.
ಅವರನ್ನು `ತಿಂಡಿಪೋತ` ಎಂದು ಕರೆದದ್ದು ಸರಿಯೇ ಎನ್ನುವುದು ಕೆಲವರ ಪ್ರಶ್ನೆ. ನನಗೆ ಅನೇಕ ಬಂಗಾಳಿ ಮಿತ್ರರಿದ್ದಾರೆ. ಅವರನ್ನು ಹತ್ತಿರದಿಂದ ಕಂಡಿದ್ದೇನೆ. ಬಂಗಾಳಿಗಳು ನಿಜಕ್ಕೂ ತಿಂಡಿಪೋತರು. ಹಾಗೆಂದು ಕರೆದರೆ ಅವರು ಹೆಮ್ಮೆಪಡುತ್ತಾರೆ. ಸ್ವತಃ ರಾಮಕೃಷ್ಣ ಪರಮಹಂಸರು ತಿಂಡಿಯನ್ನು ಬಹಳ ಇಷ್ಟಪಡುತ್ತಿದ್ದರು.
ಬಂಗಾಳಿ ಭಕ್ತರು ಬರಿಗೈಯಲ್ಲಿ ಬಂದರೆ `ಬಂಗಾಳಿಯಾಗಿ ನೀನು ಸಿಹಿತಿಂಡಿ ಇಲ್ಲದೆ ಬಂದಿದ್ದಿಯಲ್ಲಾ` ಎಂದು ಹುಸಿಮುನಿಸು ತೋರಿದ್ದುಂಟು. ನಮ್ಮ ಯುವಕರು ತಿಂದುಂಡು ಆರೋಗ್ಯವಂತರಾಗಿ ಬೆಳೆದರೆ ಮಾತ್ರ ಬಲಿಷ್ಠ ಭಾರತ ನಿರ್ಮಾಣ ಮಾಡಲು ಸಾಧ್ಯ ಎಂದು ವಿವೇಕಾನಂದರು ಹೇಳುತ್ತಿದ್ದರು.
ಅವರನ್ನು `ರೋಗಿ` ಎಂದು ಕರೆದದ್ದು ಸರಿಯೇ ಎಂದು ಕೆಲವರು ದುಃಖದಿಂದ ಪ್ರಶ್ನಿಸಿದ್ದಾರೆ. ರೋಗ ಎನ್ನುವುದು ಅಪರಾಧ ಇಲ್ಲವೇ ಪಾಪ ಅಲ್ಲ. ವಿವೇಕಾನಂದರು ರೋಗಿಯಾಗಿದ್ದು ದುರ್ವ್ಯಸನಗಳಿಂದಲ್ಲ. ಅದು ಸ್ವಲ್ಪಮಟ್ಟಿಗೆ ವಂಶವಾಹಿಯಾಗಿ ಬಂದದ್ದು, ಅವರ ತಂದೆ ಕೂಡಾ 52ನೇ ವಯಸ್ಸಿಗೆ ನಿಧನರಾಗಿದ್ದರು.
ಜತೆಗೆ ಜೀವನದಲ್ಲಿ ಅನುಭವಿಸಿದ ಬಡತನ, ಹಸಿವು ಮೊದಲಾದ ಕಷ್ಟಗಳು ಅವರ ದೈಹಿಕ ಆರೋಗ್ಯವನ್ನು ಕೆಡಿಸಿತ್ತು. ಒಂದು ಸಣ್ಣ ತಲೆನೋವು ಬಂದರೆ ಒದ್ದಾಡುವ, ವೈಫಲ್ಯಗಳಿಗೆ ಅನಾರೋಗ್ಯದ ಸಬೂಬು ನೀಡಿ ತಪ್ಪಿಸಿಕೊಳ್ಳುವ ನಮ್ಮಂತಹವರಿಗೆ ವಿವೇಕಾನಂದರು ತಮ್ಮ ಅನಾರೋಗ್ಯವನ್ನು ಮೀರಿ ಮಾಡಿದ ಸಾಧನೆ ಸ್ಫೂರ್ತಿಯಲ್ಲವೇ? ಅವರು ವಿಶ್ವದ ಆಧ್ಯಾತ್ಮಿಕ ಕ್ಷೇತ್ರವನ್ನು ಗೆದ್ದದ್ದು ದೈಹಿಕ ಬಲದಿಂದ ಅಲ್ಲ, ಆತ್ಮಬಲದಿಂದ. ಇದು ವಿವೇಕಾನಂದರ ಜೀವನದಿಂದ ಕಲಿಯಬೇಕಾದ ಪಾಠ.
ಹೌದು, ಕೆಲವು ಶಬ್ದಗಳನ್ನು ಇನ್ನಷ್ಟು ಮೆದುಗೊಳಿಸಬಹುದಿತ್ತು.. ದಡ್ಡ ಎನ್ನುವ ಬದಲು `ಬುದ್ಧಿವಂತನಲ್ಲದ` `ಹೆಚ್ಚು ಅಂಕ ಗಳಿಸಲಾಗದ` ಎಂದು, `ತಿಂಡಿಪೋತ` ಎನ್ನುವ ಬದಲಿಗೆ `ತಿಂಡಿಯನ್ನು ಇಷ್ಟಪಡುವ` ಎಂದು ಹೇಳಬಹುದಿತ್ತೋ ಏನೋ? ಇಂಗ್ಲಿಷಿನ `ಚೆಯಿನ್ ಸ್ಮೋಕರ್` ಎನ್ನುವುದಕ್ಕೆ ಕನ್ನಡದಲ್ಲಿ ಏನು ಹೇಳುವುದೆಂದು ಗೊತ್ತಾಗದೆ `ವ್ಯಸನಿ` ಎಂದು ಬರೆದೆ.
ಅದನ್ನು ತಪ್ಪಿಸಬಹುದಿತ್ತು. ಕೆಲವು ವಿಷಯಗಳನ್ನು ಇನ್ನಷ್ಟು ವಿಸ್ತರಿಸಿ ಬರೆಯಬಹುದಿತ್ತು. ಉದಾಹರಣೆಗೆ ಅಮೆರಿಕದಲ್ಲಿ ರಾತ್ರಿ ಔತಣಕೂಟಕ್ಕೆ ಹೋಗಿದ್ದರೂ ಅವರು ಅಲ್ಲಿ ಕುಡಿದು-ಕುಣಿದು ಕುಪ್ಪಳಿಸುವ ಮೋಜು ಮಾಡಿಲ್ಲ. ಆ ಔತಣಗಳ ಕರೆಗಳಿಂದ ತಪ್ಪಿಸಲಿಕ್ಕಾಗಿ ಅವರು ವಿದೇಶಕ್ಕೆ ಹೋದ ಬಹಳಷ್ಟು ಸಂದರ್ಭಗಳಲ್ಲಿ ಸಸ್ಯಾಹಾರಿಯಾಗಿ ಬಿಡುತ್ತಿದ್ದರು.
ಈ ಬರವಣಿಗೆಗೆ ಆಧಾರವಾಗಿ ಸಿಕ್ಕಿದ್ದು ಮುಖ್ಯವಾಗಿ ಮಣಿ ಸಂಕರ್ ಮುಖರ್ಜಿ ಅವರ `ದಿ ಮಾಂಕ್ ಆ್ಯಸ್ ಮ್ಯಾನ್` ಪುಸ್ತಕ. ನನ್ನ ಬಂಗಾಳಿ ಮಿತ್ರರು ಕೆಲವು ವರ್ಷಗಳ ಹಿಂದೆಯೇ ಈ ಪುಸ್ತಕದ ಬಗ್ಗೆ ನನಗೆ ಹೇಳಿದ್ದರೂ ಭಾಷಾ ಸಮಸ್ಯೆಯಿಂದಾಗಿ ಓದಲಾಗಿರಲಿಲ್ಲ. ಕಳೆದ ವರ್ಷ ಇಂಗ್ಲಿಷ್ನಲ್ಲಿ ಪ್ರಕಟವಾಗಿದ್ದನ್ನು ಕೇಳಿ ತಂದು ಓದಿದೆ.
ವಿವೇಕಾನಂದರ `ಸಮಗ್ರ ಕೃತಿ ಸಂಗ್ರಹ`, ಮೇರಿ ಲೂಯಿಸ್ ಬರ್ಕ್ ಅವರ `ವಿವೇಕಾನಂದ ಇನ್ ದಿ ವೆಸ್ಟ್: ನ್ಯೂ ಡಿಸ್ಕವರಿ`, ಸ್ವಾಮಿ ವಿವೇಕಾನಂದ ಅವರ ಸೋದರ ಮಹೇಂದ್ರನಾಥ ದತ್ತಾ ಬರೆದಿರುವ ಸುಮಾರು 90 ಪುಸ್ತಕಗಳು, ಇನ್ನೊಬ್ಬ ಸೋದರ ಡಾ. ಭೂಪೇಂದ್ರನಾಥ ದತ್ತಾ ಬರೆದಿರುವ ಪುಸ್ತಕ, ಸೋದರಿ ನಿವೇದಿತಾ ಅವರ ಲೇಖನಗಳು-ಹೀಗೆ ನೂರಾರು ಪುಸ್ತಕಗಳನ್ನು ಓದಿ ಬರೆದ ಪುಸ್ತಕ ಅದು. ಅದನ್ನು ಆಧರಿಸಿಯೇ ಬರೆದೆ.
ಸ್ವಾಮಿ ವಿವೇಕಾನಂದರು ಇಡೀ ವಿಶ್ವದ ಅಭಿಮಾನ-ಗೌರವಕ್ಕೆ ಪಾತ್ರವಾದ ಅಧ್ಯಾತ್ಮ ಚೇತನ. ಅದನ್ನು ಯಾರೂ ಅಲ್ಲಗಳೆಯುವುದು ಸಾಧ್ಯ ಇಲ್ಲ. ಅವರನ್ನು ಇನ್ನಷ್ಟು ಅರಿಯುವ ಪ್ರಯತ್ನದಿಂದ ಅವರ ಬಗೆಗಿನ ಅಭಿಮಾನ-ಗೌರವ ಹೆಚ್ಚಾಗುತ್ತದೆಯೇ ಹೊರತು ಕಡಿಮೆಯಾಗಲಾರದು.
Subscribe to:
Posts (Atom)