Showing posts with label Mandya. Show all posts
Showing posts with label Mandya. Show all posts
Tuesday, September 27, 2016
Monday, September 26, 2016
Tuesday, September 20, 2016
ಕೆಲವರ ಜತೆ ಜಗಳಮಾಡಿದರೂ ನಮಗೆ ಲಾಭ ಇದೆ.
ಕಾವೇರಿ ನೀರು ಹಂಚಿಕೆಯ ಕುರಿತ ದೇವೇಗೌಡರ ಕೆಲವು ನಿಲುವುಗಳ ಬಗ್ಗೆ ನನಗೆ ತಕರಾರಿದೆ. ಆದರೆ ನೀರಾವರಿ ವಿಷಯದಲ್ಲಿ ಅವರ ಜ್ಞಾನ ನನ್ನನ್ನು ಬೆರಗುಗೊಳಿಸಿದೆ. ಕೆಲವರ ಜತೆ ಜಗಳಮಾಡಿದರೂ ನಮಗೆ ಲಾಭ ಇದೆ. ಅಂತಹವರಲ್ಲಿ ಒಬ್ಬರು ಗೌಡರು. ಇದು ನನ್ನ ಅನುಭವ.
ಕೆಲವು ವಿಷಯಗಳನ್ನು ಹೇಳಬೇಕೋ ಬೇಡವೋ ಎನ್ನುವುದು ನನಗೆ ಇನ್ನೂ ಗೊತ್ತಿಲ್ಲ, ಹೇಳಿಯೇ ಬಿಡುತ್ತೇನೆ..15000 ಕ್ಯುಸೆಕ್ಸ್ ನೀರುಹರಿಸಬೇಕೆಂದು ಸುಪ್ರೀಂ ಕೋರ್ಟ್ ಆದೇಶ ನೀಡಿದ ದಿನದಿಂದ ಎಚ್.ಡಿ.ದೇವೇಗೌಡರು ಮುಖ್ಯಮಂತ್ರಿಗಳ ಜತೆ ಸಂಪರ್ಕದಲ್ಲಿದ್ದಾರೆ. ಒಮ್ಮೊಮ್ಮೆ ದಿನಕ್ಕೆರಡು ಬಾರಿ ಮಾತನಾಡಿದ್ದಾರೆ. ಈ ಮಾತುಕತೆ ೧೫ ನಿಮಿಷಕ್ಕಿಂತ ಮೊದಲು ಕೊನೆಗೊಂಡಿದ್ದೇ ಕಡಿಮೆ.
ಕೆಲವು ವಿಷಯಗಳನ್ನು ಹೇಳಬೇಕೋ ಬೇಡವೋ ಎನ್ನುವುದು ನನಗೆ ಇನ್ನೂ ಗೊತ್ತಿಲ್ಲ, ಹೇಳಿಯೇ ಬಿಡುತ್ತೇನೆ..15000 ಕ್ಯುಸೆಕ್ಸ್ ನೀರುಹರಿಸಬೇಕೆಂದು ಸುಪ್ರೀಂ ಕೋರ್ಟ್ ಆದೇಶ ನೀಡಿದ ದಿನದಿಂದ ಎಚ್.ಡಿ.ದೇವೇಗೌಡರು ಮುಖ್ಯಮಂತ್ರಿಗಳ ಜತೆ ಸಂಪರ್ಕದಲ್ಲಿದ್ದಾರೆ. ಒಮ್ಮೊಮ್ಮೆ ದಿನಕ್ಕೆರಡು ಬಾರಿ ಮಾತನಾಡಿದ್ದಾರೆ. ಈ ಮಾತುಕತೆ ೧೫ ನಿಮಿಷಕ್ಕಿಂತ ಮೊದಲು ಕೊನೆಗೊಂಡಿದ್ದೇ ಕಡಿಮೆ.
Monday, September 12, 2016
ಕಾವೇರಿ ವಿವಾದ: ಜಲತಜ್ಞರು, ಕಾನೂನು ತಜ್ಞರು & ಹೋರಾಟಗಾರರು
ರಾಜ್ಯದ ಜಲವಿವಾದಗಳಿಗೆ ಸಂಬಂಧಿಸಿದಂತೆ ನಮ್ಮ ವಕೀಲರು ಸಮರ್ಥವಾಗಿ ವಾದಿಸಿಲ್ಲ, ಅವಶ್ಯಕ ದಾಖಲೆಗಳನ್ನು ನ್ಯಾಯಮಂಡಳಿ, ನ್ಯಾಯಾಲಯದ ಮುಂದಿಡದೆ ವಿಫಲರಾದರು.. ಇತ್ಯಾದಿ ಆರೋಪಗಳು ಕಳೆದ ಕೆಲವು ದಿನಗಳಿಂದ ಕೇಳಿಬರುತ್ತಿವೆ. ಪತ್ರಕರ್ತನಾಗಿ ರಾಜ್ಯಕ್ಕೆ ಸಂಬಂಧಿಸಿದಂತೆ ಯಾವುದಾದರೂ ಒಂದು ವಿಷಯದ ಬಗ್ಗೆ ನಾನು ಅತೀ ಹೆಚ್ಚು ಬರೆದಿದ್ದರೆ ಅದು ಕಾವೇರಿ ಜಲವಿವಾದದ ಬಗ್ಗೆ. ನಾನು ಬರೆದಿರುವುದು ಕಾಡಿಗೆ ಹೋಗಿ ತಪಸ್ಸುಮಾಡಿ ಗಳಿಸಿದ ಜ್ಞಾನದಿಂದಲ್ಲ. ಇವೆಲ್ಲವೂ ರಾಜ್ಯದ ವಕೀಲರ ಮತ್ತು ನೀರಾವರಿ ತಜ್ಞರ ಜತೆಗಿನ ಮಾತುಕತೆ, ಕಾವೇರಿ ನ್ಯಾಯಮಂಡಳಿ ಕಲಾಪದ ವರದಿ ಮತ್ತು ಸರ್ಕಾರಿ ಇಲಾಖೆಗಳಿಂದ ಪಡೆದ ದಾಖಲೆಗಳ ಮೂಲಕ ನಾನು ತಿಳಿದುಕೊಂಡದ್ದು. ಈ ಎಲ್ಲ ವಿಷಯಗಳನ್ನು ರಾಜ್ಯ ಸರ್ಕಾರದ ಪರವಾಗಿ ನಮ್ಮ ವಕೀಲರು ನ್ಯಾಯಾಲಯ ಮತ್ತು ನ್ಯಾಯಮಂಡಳಿಯ ಮುಂದೆ ಮಾಡಿರುವ ವಾದಗಳಲ್ಲಿಯೂ ನಾನು ಕಿವಿಯಾರೆ ಕೇಳಿದ್ದೇನೆ. ನನಗೆ ತಿಳಿದಂತೆ ಈಗ ವರ್ತಮಾನದ ಸ್ಥಿತಿಯ ಕಡೆ ನ್ಯಾಯಾಲಯದ ಗಮನಸೆಳೆಯುವುದು ಬಿಟ್ಟರೆ ಹೊಸದಾಗಿ ಹೇಳುವುದೇನೂ ಉಳಿದಿಲ್ಲ.
ಉದಾಹರಣೆಗೆ ಕಾವೇರಿ ನ್ಯಾಯಮಂಡಳಿ ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಯೋಜನೆಗಳಿಗಾಗಿ ನಿಗದಿಪಡಿಸಿರುವ ಅತ್ಯಂತ ಕಡಿಮೆ ಪ್ರಮಾಣವಾಗಿರುವ 1.75 ಟಿಎಂಸಿ ನೀರು, ತಮಿಳುನಾಡಿಗೆ ಡಿಸೆಂಬರ್ ವರೆಗೂ ಲಭ್ಯ ಇರುವ ಈಶಾನ್ಯಮಾರುತದ ಮಳೆಯ ಪ್ರಸ್ತಾವ, ತಮಿಳುನಾಡಿನಲ್ಲಿ ಲಭ್ಯ ಇರುವ ಅಂತರ್ಜಲವನ್ನು ನ್ಯಾಯಮಂಡಳಿ ಪರಿಗಣಿಸದೆ ಇರುವುದು, ನಾವು ಬೆಳೆಯುವ ಒಂದು ಬೆಳೆ, ಅವರು ಬೆಳೆಯುವ ಮೂರು ಬೆಳೆ, ಪರಿಸರ ರಕ್ಷಣೆಗಾಗಿ ತಮಿಳುನಾಡಿಗೆ ನ್ಯಾಯಮಂಡಳಿ ನೀಡಿರುವ 10 ಟಿಎಂಸಿ ವಿಶೇಷ ಕೊಡುಗೆ ಇತ್ಯಾದಿ ಅಂಶಗಳೆಲ್ಲವನ್ನು ಅಂತಿಮ ಐತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಸಲ್ಲಿಸಿರುವ Special leave petition ನಲ್ಲಿ ರಾಜ್ಯದ ವಕೀಲರು ಹೇಳಿದ್ದಾರೆ.
ಹೀಗಿದ್ದರೂ ಈ ರೀತಿಯ ಅಪಪ್ರಚಾರ ಯಾಕೆ ಆಗುತ್ತಿದೆಯೆಂದರೆ ಜಲವಿವಾದ ಪ್ರಾರಂಭವಾದ ಕೂಡಲೇ ಬೀದಿಗಿಳಿದವರೆಲ್ಲರೂ ದಿಢೀರ್ ‘ನೀರಾವರಿ ತಜ್ಞರು’ ಮತ್ತು ‘ಕಾನೂನು ತಜ್ಞರು’ ಆಗಿಬಿಡುತ್ತಾರೆ. ನಮ್ಮ ರೈತರ ಬಗ್ಗೆ, ನೆಲ-ಜಲದ ಬಗ್ಗೆ ನಮ್ಮ ನಟ-ನಟಿಯರ,ಕನ್ನಡ ಚಳುವಳಿಗಾರರ ಪ್ರೀತಿ,ಅಭಿಮಾನ, ಕಳಕಳಿ, ಕಾಳಜಿ ಎಲ್ಲವೂ ಅಭಿನಂದಾರ್ಹ. ಆದರೆ ಅವರಲ್ಲಿ ಹೆಚ್ಚಿನ ಮಂದಿ ಭಾಷಣಶೂರರಾಗಲು ಹೋಗಿ ಬಹಿರಂಗವಾಗಿ ತಮ್ಮ ಅಜ್ಞಾನ ಪ್ರದರ್ಶಿಸುತ್ತಾರೆ. ಕೊನೆಗೆ ಹೇಳಲು ಏನೂ ವಿಷಯ ಇಲ್ಲದೆ ಇದ್ದಾಗ ಮಾತು ವೈಯಕ್ತಿಕ ಮಟ್ಟಕ್ಕೆ ಇಳಿದು ‘ಗಂಡಸ್ತನ’ ‘ಸೀರೆ-ಬಳೆ’ ಕಡೆ ಹೊರಳುತ್ತವೆ. ಇವರಲ್ಲಿಯೇ ಕೆಲವರು ಟಿವಿಚಾನೆಲ್ ಗಳಲ್ಲಿ ಹೋಗಿ ಕೂತು ಚರ್ಚೆ ನಡೆಸುತ್ತಾರೆ.
ಇತ್ತೀಚೆಗೆ ನಾನು ಅಪರೂಪಕ್ಕೆ ಒಂದು ಟಿವಿಚಾನೆಲ್ ನಲ್ಲಿ ಕಾವೇರಿ ವಿಷಯದ ಚರ್ಚೆಗೆ ಹೋಗಿದ್ದೆ. ಅಲ್ಲಿ ಕನ್ನಡದ
ಯುವನಿರ್ದೇಶಕರೊಬ್ಬರಿದ್ದರು. ‘ಚರ್ಚೆಯುದ್ದಕ್ಕೂ ಅವರು ‘ಕಾವೇರಿ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ, ಏನಾಗುತ್ತದೆ ಎಂದು ಗೊತ್ತಿಲ್ಲ...’ ಇತ್ಯಾದಿ ಆರೋಪಮಾಡುತ್ತಿದ್ದರು. ಮೊದಲನೆಯದಾಗಿ ಏನೂ ಗೊತ್ತಿಲ್ಲದೆ ಇದ್ದರೆ ಇಂತಹ ಚರ್ಚೆಯಲ್ಲಿ ಪಾಲ್ಗೊಳ್ಳಬಾರದು. ಎರಡನೆಯದಾಗಿ ಚರ್ಚೆಯಲ್ಲಿ ಪಾಲ್ಗೊಳ್ಳುವುದೇ ಆಗಿದ್ದರೆ ವಿಷಯ ಸಂಗ್ರಹ ಮಾಡಿಕೊಂಡು ಬರಬೇಕು. ಇಂದು ಬಹಳಷ್ಟು ಮಾಹಿತಿ ಇಂಟರ್ ನೆಟ್ ಮೂಲಕ ನಮ್ಮ ಬೆರಳತುದಿಗಳಲ್ಲಿವೆ. ಒಬ್ಬ ಸಾಮಾನ್ಯ ರೈತರಿಗೆ ನಾವು ಇದನ್ನು ಹೇಳಲಾಗದು, ಆದರೆ ಚಳುವಳಿಯ ನಾಯಕರು, ಚರ್ಚೆಯಲ್ಲಿ ಬಂದು ಪಾಲ್ಗೊಳ್ಳುವ ಮತ್ತು ಬೀದಿಭಾಷಣ ಮಾಡುವ ನಟ-ನಟಿಯರಾದರೂ ಸರಿಯಾದ ಮಾಹಿತಿ ತಿಳಿದುಕೊಂಡಿರಬೇಕಲ್ಲವೇ? ಅಂದಹಾಗೆ ಈ ಯುವನಿರ್ದೇಶಕರ ಎರಡು ಚಿತ್ರಗಳನ್ನು ನೋಡಿದ್ದೆ. ಅದು ನಾಯಕ-ನಾಯಕಿ ಮರಸುತ್ತುವ, ಲಾಂಗ್-ಮಚ್ಚುಗಳ ಕತೆಯಲ್ಲ. ನೈಜ ಘಟನೆಗಳ ಬಗ್ಗೆ ಶ್ರಮವಹಿಸಿ ಸಂಶೋಧನೆ ಮಾಡಿ ವಿಷಯ ಸಂಗ್ರಹಿಸಿ ಮಾಡಿರುವ ಚಲನಚಿತ್ರಗಳು. ಇಂತಹವರೂ ಕಾವೇರಿ ಬಗ್ಗೆ ನಮಗೇನೂ ಗೊತ್ತಿಲ್ಲ, ಎಲ್ಲಿದೆ ಮಾಹಿತಿ ಎಂದು ಗೋಳಾಡಿದರೆ?
Labels:
BJP,
Cauvery,
cm siddaramaiah,
Congress,
D Umapati,
Dinesh Amin Mattu,
Mandya,
Mysore,
Prajavani,
Supreme Court,
VIjaya Karnataka
Subscribe to:
Posts (Atom)