Saturday, February 21, 2015

ಅಂತರರಾಷ್ಟ್ರೀಯ ಮಾತೃಭಾಷಾ ದಿನ

ಇಂದು ಅಂತರರಾಷ್ಟ್ರೀಯ ಮಾತೃಭಾಷಾ ದಿನ. ಈ ನೆನಪಲ್ಲಿ 32 ವರ್ಷಗಳ ಹಿಂದೆ (18-4-1983) ನನ್ನ ಮಾತೃಭಾಷೆ ತುಳುವಿನಲ್ಲಿ ಬರೆದಿದ್ದ
ಕವನವನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿತು. ಇದು ಕೇವಲ ಕೈಖರ್ಚಿನ ಹಣಕ್ಕಾಗಿ ಮಂಗಳೂರು ಆಕಾಶವಾಣಿಗೆ ಮಾರಿಕೊಂಡ ಕವನಗಳೆಂದಷ್ಟೇ ಹೇಳಿದರೆ, ಇದನ್ನು ನನ್ನಿಂದ ಬರೆಯಿಸಿದ ಜೀವಕ್ಕೆ ದ್ರೋಹ ಎಸಗಿದಂತಾಗುತ್ತದೆ. ಹಠಾತ್ತನೆ ನನ್ನೊಳಗಿನ ಬಾಲ ಕವಿ ನೆನೆಪಾಗಲು ಇನ್ನೂ ಒಂದು ಕಾರಣ ಇದೆ. ನಿನ್ನೆ ರಾಮದುರ್ಗದ ಕಾಲೇಜೊಂದರಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಹೊರ ಬಂದಾಗ ಓಡೋಡಿ ಬಂದ ಹುಡುಗನೊಬ್ಬ ನನಗೆ ಕವಿತೆ ಬರೆಯುವ ಆಸೆ ಏನು ಮಾಡಲಿ? ಎಂದು ಪ್ರಶ್ನಿಸಿದ. ನಾನು ಅವನನ್ನು ಸಮೀಪ ಕರೆದು ‘ಚಂದದ ಹುಡುಗಿಯನ್ನು ಹುಡುಕಿ ಪ್ರೀತಿ ಮಾಡು’ ಎಂದು ಪಿಸುಗುಟ್ಟಿದೆ.
ಪ್ರೀತಿ ಮಾಡುವುದು ಹೇಗೆ? ಎಂದು ಆತ ಮರುಪ್ರಶ್ನಿಸಿದ.’ ಪ್ರೀತಿ ಮಾಡುವುದೆಂದರೆ ಮೈ ಮುಟ್ಟದೆ ಮನಸ್ಸು ಮುಟ್ಟುವ ಜರ್ನಿ’ ಎಂದೆ. ಇವನ್ಯಾವನೋ ಅರಸಿಕ ಎಂದು ಆ ಹುಡುಗ ಅಂದುಕೊಂಡನೋ ಏನೋ?

ಈಗ ಓದಿ ನನ್ನ ತುಳು ಕಬಿತೆ.....
ತುದೆ
ನಾಲೂರ ಸೀಮೆಗ್ ಬರ್ಸ ಬತ್ತ್ ದ್ ಬೊಲ್ಲ ಗುದ್ದುಂಡಲಾ
ಎನ್ನುಡಲ್ ದ ಪಡೀಲ್ ಭೂಮಿಗ್ ಬೂರುನ
ಸುಡ್ಪಿ ಸೂರ್ಯನ ಕೊದಿಪು ದೊಂಬುದ ತೂ
ಅಂಚಾನಗ, ಮದೆಟೊಂಜಿ ತುದೆಯಾದ್ ಈ ತೋಜಿಯಾ
ತರೆತುಂಬಾ ಕೊಡಿಯೊಂದಿತ್ತಿನ ಕರಕರಿತ ಕುರೆ ಮುಂಗುಲೆನ್
ಕಿನ್ಕ್ ದೆತ್ತ್ ದ್ ಪೊತ್ತಾದ್ ಪುಗೆತೊಟ್ಟುಗೆ ಪಾರ್ ಬೈದೆ ಪುಗೆಯಾದ್.
ಕಾಡ್ ಗುಡ್ಡೆ, ಕತ್ತಲೆದ ತಾದಿ ಪಿರ...ಪಿರ...
ಯಾನ್ ದುಂಬು... ದುಂಬು.. ನಿನ್ನಡೆಗ್
ಕರಿಕಂಬದ ನೆತ್ತಿಬೊಟುದ್ ಜತ್ತ್ ಮಿತರ್ನಗ
ಜೀವದುಲಯಿ ಪುಡಾಂಡ್ ಬೊಳ್ಳಿ ಬೊಲ್ಪುದ ತೋಟೆ
ಉಂತು ಗೆಂತ್ ಪನ್ಪೆ ಯಾನೇತ್ ದೂರ ನಿನ್ನಡ್ದ್
ಕನ್ನಡದಲ್ಲಿ ಈ ಕವಿತೆಯ ಕಚ್ಛಾ ಅನುವಾದ ಹೀಗೆ ಮಾಡಬಹುದು:
ನದಿ
ನಾಲ್ಕೂರ ಸೀಮೆಗ್ ಮಳೆ ಹೊಯ್ದು ನೆರೆ ಉಕ್ಕಿ ಬಂದರೂ
ನನ್ನೊಡಲ ಮರುಭೂಮಿಯಲ್ಲಿ ಸುಡುವ
ಸೂರ್ಯನ ಬೆಂಕಿ.
ಹೀಗಿದ್ದಾಗ...
ಮರೆಯಲ್ಲೊಂದು ನದಿಯಾಗಿ ನೀ ಕಂಡೆ
ತಲೆತುಂಬಾ ಮೊಳೆಯುತ್ತಿದ್ದ ಕಿರಿಕಿರಿಯ ಮೊಳಕೆಗಳನ್ನು
ಚಿವುಟಿ ತೆಗೆದು ಸುಟ್ಟು, ಹೊಗೆಯೊಟ್ಟಿಗೆ ಓಡಿ ಬಂದೆ ನಿನ್ನೆಡೆಗೆ
ಕಾಡುಗುಡ್ಡ, ಕತ್ತಲ ಹಾದಿ ಹಿಂದೆ..ಹಿಂದೆ...
ನಾನು ಮುಂದೆ...ಮುಂದೆ ನಿನ್ನೆಡೆಗೆ
ಕರಿಕಂಬದ ನೆತ್ತಿ ತಟ್ಟಿ ಹತ್ತಿ ಇಳಿದಾಗ
ಜೀವದೊಳಗೆ ಬೆಳ್ಳಿಬೆಳಕಿನ ಸ್ಪೋಟ
ಅಲ್ಲಿಯೇ ನಿಲ್ಲು, ಎಣಿಸಿ ಹೇಳುತ್ತೇನೆ
ಈಗ ನಾನೆಷ್ಟು ದೂರ ನಿನ್ನಿಂದ.

Sunday, February 15, 2015

ಗದಗ : ವಿಜಯ ಸಾಕ್ಷಿ ಪತ್ರಿಕೆ ಬಿಡುಗಡೆ

ವಿಜಯ ಸಾಕ್ಷಿ ಜಿಲ್ಲಾಮಟ್ಟದ ದಿನಪತ್ರಿಕೆ ಬಿಡುಗಡೆ



ಗದಗ ಜಿಲ್ಲಾ ಪತ್ರಕರ್ತರು

ಗದುಗಿನ ಡಂಬಳದ ತೋಂಟಾದಾರ್ಯ ಮಠಕ್ಕೆ ಭೇಟಿ

ಶ್ರೀಗಳೊಂದಿಗೆ ಚರ್ಚೆ





'ಅಂತಃಕರಣ' ಬರೆದ 5 ಪುಸ್ತಕಗಳ ಬಿಡುಗಡೆ

ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ 5ನೇ ತರಗತಿಯ ಬಾಲಕ 'ಅಂತಃಕರಣ' ಬರೆದ 5 ಪುಸ್ತಕಗಳ ಬಿಡುಗಡೆ.