Sunday, June 5, 2016

ಮುಂಗಾರು ಪತ್ರಿಕೆ: (17-08-1986)

ಇದು ನಾನು ಸುಮಾರು ಮೂರುದಶಕಗಳ ಹಿಂದೆ ಮುಂಗಾರು ಪತ್ರಿಕೆಗೆ ಮಾಡಿದ ವರದಿ. ಹಳೆಯ ಕಡತಗಳನ್ನು ಕೆದಕಿದಾಗ ಸಿಕ್ಕ ವರದಿ ಹಳೆಯ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡಿತು.

ಈ ವರದಿ ನೋಡಿ ಕೆಂಡಾಮಂಡಲವಾದ ವಡ್ಡರ್ಸೆಯವರು ನನಗೆ ನೋಟೀಸ್ ನೀಡಿದ್ದು ಮಾತ್ರವಲ್ಲ ಕೆಲವು ದಿನ ಮಾತನಾಡಿರಲಿಲ್ಲ.

ಕಾರಣ ಇಷ್ಟೆ: ಮುಂಗಾರು ಪತ್ರಿಕೆಗೆ ದುಡ್ಡು ಹಾಕಿದವರಲ್ಲಿ ಕೆಲವರು ಅಬಕಾರಿ ಕಂಟ್ರಾಕ್ಟರ್ ಗಳಿದ್ದರು. ಪತ್ರಿಕೆ ನಡೆಸಲಿಕ್ಕಾಗದೆ ಆಗಲೇ ಆರ್ಥಿಕ ಸಂಕಷ್ಟದಲ್ಲಿದ್ದ ವಡ್ಡರ್ಸೆಯವರ ಮೇಲೆ ಆ ಕಂಟ್ರಾಕ್ಟರ್ ಗಳು ಈ ವರದಿ ನೋಡಿ ಕೋಪ ಮಾಡಿಕೊಂಡಿದ್ದರು. ಪತ್ರಿಕೆಯ ನೆರವಿಗೆ ಬರ್ತಿಲ್ಲ ಎನ್ನುವ ಕಾರಣಕ್ಕೆ ಹೀಗೆಲ್ಲ ಬರೆಸಿ ನಮ್ಮ ಮೇಲೆ ಒತ್ತಡ ಹೇರುತ್ತಿದ್ದಾರೆ ಎನ್ನುವುದು ಅವರ ಆರೋಪವಾಗಿತ್ತು. ಇನ್ನೊಂದೆಡೆ 'ನಮ್ಮವ' ನೊಬ್ಬ ನಮ್ಮ ವಿರುದ್ದವೇ ಬರೆದನಲ್ಲಾ ಎಂದು ಆ ಅಬಕಾರಿ ಕಂಟ್ರಾಕ್ಟರ್ ಗಳು ನನ್ನ ವಿರುದ್ಧ ಗರಂ ಆಗಿದ್ದರು. ನಡುವೆ ಸಿಕ್ಕ ನಾನು ಪಟ್ಚ.
ನಿಜಸಂಗತಿ ಏನೆಂದರೆ ಆಗ ನಮಗಿದ್ದ ಸಂಪಾದಕೀಯ ಸ್ವಾತಂತ್ರ್ಯ ದಲ್ಲಿ ಎಷ್ಟೋ ತನಿಖಾ ವರದಿಗಳು ಕೂಡಾ ವಡ್ಡರ್ಸೆಯವರ ಗಮನಕ್ಕೆ ಬರದೆ ಅಚ್ಚಾಗುತ್ತಿತ್ತು. ಇದು ಆ ರೀತಿ ಪ್ರಕಟವಾದ ವರದಿ.
ಆ ಕಾಲದಲ್ಲಿ ನನಗೂ ಕೋಪ ಬಂದಿತ್ತು. ಆದರೆ ಈಗ? ನಾವು ಸ್ವಲ್ಪ ಕಣ್ಣು ತೆರೆದು ಪ್ರಾಯೋಗಿಕವಾಗಿ ಯೋಚಿಸಿ ವಡ್ಡರ್ಸೆಯವರನ್ನು ಅರ್ಥಮಾಡಿಕೊಳ್ಳಬೇಕಿತ್ತು ಎಂದು ಅನಿಸುತ್ತಿದೆ.

ಇದೇ ರೀತಿ ಇಂಧೂದರ,ಎನ್.ಎಸ್. ಶಂಕರ್, ಕೆ.ರಾಮಯ್ಯ,ಪುಟ್ಟಸ್ವಾಮಿ ಮೊದಲಾದ ಪ್ರಾರಂಭಿಕ ಮುಂಗಾರು ಬಂಡಾಯಗಾರರಿಗೂ ಅನಿಸುತ್ತಿರಬಹುದೇ?

No comments:

Post a Comment