ವಿಶ್ವ ಹಿಂದೂ ಪರಿಷತ್ ನಾಯಕ ಅಶೋಕ್ ಸಿಂಘಲ್ ಅವರ ನಿಧನಕ್ಕೆ ಕಂಬನಿಗರೆಯುತ್ತಿರುವವರನ್ನು ಕಂಡಾಗ 2002ರಲ್ಲಿ ಅಯೋಧ್ಯೆಯ ಕರಸೇವಕ ಪುರದಲ್ಲಿ ಅವರೊಡನೆ ನಾನು ನಡೆಸಿದ್ದ ಮಾತುಕತೆ ನೆನಪಾಯಿತು. (ಆಫ್ ದಿ ರೆಕಾರ್ಡ್ ಎಂದು ಹೇಳಿ ಸಿಂಘಲ್ ಅವರು ಬಿಜೆಪಿ ಮತ್ತು ಅಟಲ ಬಿಹಾರಿ ವಾಜಪೇಯಿ ಅವರ ಬಗ್ಗೆ ಹೇಳಿರುವುದನ್ನು ನಾನು ಬರೆದಿರಲಿಲ್ಲ)
‘ರಾಜೀವ್ ಗಾಂಧಿ, ನರಸಿಂಹ ರಾವ್ ಮಾಡಿದ್ದನ್ನು ವಾಜಪೇಯಿ ಮಾಡಲಿ’

ಇದರ ಉಸ್ತುವಾರಿ ನೋಡುತ್ತಿರುವ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಅಶೋಕ್ ಸಿಂಘಲ್ ತನ್ನ ಕಛೇರಿಯಲ್ಲಿ ನಿರಾಳವಾಗಿ ಕೂತ್ತಿದ್ದಾರೆ. ಅಸ್ವಸ್ಥನಾಗಿದ್ದೇನೆ ಎಂದು ಮೊದಲು ಭೇಟಿ ನಿರಾಕರಿಸಿದ ಅಶೋಕ್ ಸಿಂಘಲ್ ಆನಂತರ ‘ಪ್ರಜಾವಾಣಿ’ ಜತೆ ಮಾತನಾಡಿದರು. ಮಾತನಾಡಿದರು ಅನ್ನುವುದಕ್ಕಿಂತ ಬಿಜೆಪಿಗೆ ಮತ್ತು ಕೇಂದ್ರ ಸರ್ಕಾರಕ್ಕೆ ಆದೇಶ ನೀಡುತ್ತಾ ಹೋದರು. ತಮ್ಮ ನಿಲುವನ್ನು ಸಮರ್ಥಿಸುತ್ತಾ ಹೋದರು ಎನ್ನುವುದೇ ಸರಿ.
‘’ಇಷ್ಟೆಲಾ ತಯಾರಿ ನಡೆಯುತ್ತಿರುವುದು. ಹನ್ನೆರಡು ಲಕ್ಷ ರಾಮಸೇವಕರನ್ನು ಮಾರ್ಚ್ 15ರ ಹೊತ್ತಿಗೆ ಅಯೋಧ್ಯೆಯಲ್ಲಿ ಸೇರಿಸುತ್ತಿರುವುದು ಕೇವಲ ಸತ್ಯಾಗ್ರಹಕ್ಕಾಗಿಯೇ? ಅಂದಾಜು ನಾಲ್ಕೈದು ಸಾವಿರ ಜನ ಸೇರಲು ಸಾಧ್ಯವಿರುವ ಕಾರಸೇವಕಪುರದಲ್ಲಿ ಅಷ್ಟೊಂದು ಸಂಖ್ಯೆಯ ರಾಮಸೇವಕರು ಹೇಗೆ ಉಳಿದುಕೊಳ್ಳಲು ಸಾಧ್ಯ?. ಅವರನ್ನೆಲ್ಲಾ ನಿಯಂತ್ರಿಸಲು ಸಾಧ್ಯವಾಗಬಹುದೇ?’’ ಈ ಪ್ರಶ್ನೆಗಳನ್ನು ಅವರು ನಿರೀಕ್ಷಿಸಿದ್ದರು.
‘’ಅದು ಸರ್ಕಾರಕ್ಕೆ ಬಿಟ್ಟ ವಿಚಾರ ಮಂದಿರ ನಿರ್ಮಾಣ ಕಾರ್ಯದಲ್ಲಿ ಪಾಲ್ಗೊಳ್ಳಲು ಬರುವ ರಾಮಸೇವಕರನ್ನು ನಾವು ಹೇಗೆ ತಡೆಯಲು ಸಾಧ್ಯ?. ಈಗಲೂ ಕಾಲ ಮಿಂಚಿಲ್ಲ. ಸರ್ಕಾರ ವಶಕ್ಕೆ ತೆಗೆದುಕೊಂಡಿರುವ ನಿವೇಶವನ್ನು ಕೊಡಲಿ; ಎಲ್ಲವೂ ಶಾಂತಿಯುತವಾಗಿ ಪರಿಹಾರವಾಗುತ್ತದೆ’- ಇದು ಅಶೋಕ್ ಸಿಂಘಲ್ ಪರಿಹಾರ ಸೂತ್ರ.
ಅವರ ಪ್ರಕಾರ ಈ ಬಾರಿಯ ನಾಲ್ಕು ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಿನ್ನಡೆ ಕಂಡರೆ ಅದಕ್ಕೆ ಈ ಪಕ್ಷ ರಾಮಜನ್ಮಭೂಮಿ ಚಳವಳಿಯನ್ನು ನಿರ್ಲಕ್ಷಿಸಿದ್ದೇ ಕಾರಣವಂತೆ. ‘’ಪಕ್ಷದಲ್ಲಿರುವ ಬಹುತೇಕ ನಾಯಕರು ಚಳವಳಿಯನ್ನು ಬೆಂಬಲಿಸುತ್ತಾರೆ. ಆದರೆ ನಿರ್ಣಾಯಕ ಸ್ಥಾನದಲ್ಲಿರುವ ಒಬ್ಬಿಬ್ಬರು ನಾಯಕರು ಸಹಕಾರ ನೀಡುತ್ತಿಲ್ಲ’’ ಎನ್ನುವ ಸಿಂಘಲ್ ಆ ಒಬ್ಬಿಬ್ಬರು ವ್ಯಕ್ತಿಗಳ ಹೆಸರು ಹೇಳುವುದಿಲ್ಲ ಅವರಲ್ಲೊಬ್ಬರು ವಾಜಪೇಯಿಯವರಿರಬಹುದೇ?. ಹಾಗೆ ಕೇಳಿದರೆ, ‘’ ವಾಜಪೇಯಿಯವರು ಮಂದಿರ ನಿರ್ಮಾಣವನ್ನು ಯಾವಾಗ ವಿರೋಧಿಸಿದ್ದಾರೆ?. ಎಂದು ಥಟ್ಟನೇ ಪ್ರಶ್ನಿಸುತ್ತಾರೆ.
“ಆಟಲ್ ಬಿಹಾರಿ ವಾಜಪೇಯಿಯವರು ಈಗ ಕುಳಿತಿರುವ ಸ್ಥಾನ ರಾಮಮಂದಿರ ಚಳವಳಿಯ ಕೊಡುಗೆ. ಆ ಋಣ ತೀರಿಸುವ ಜವಾಬ್ದಾರಿ ಅವರ ಮೇಲಿದೆ. ರಾಜೀವ್ಗಾಂಧಿ ಕಾಲದಲ್ಲಿ ಶಿಲಾನ್ಯಾಸ ನಡೆಯಿತು; ನರಸಿಂಹ ರಾವ್ ಕಾಲದಲ್ಲಿ ವಿವಾದಾತ್ಮಕ ಕಟ್ಟಡ (ಬಾಬ್ರಿಮಸೀದಿ) ಧ್ವಂಸ ಮಾಡಲಾಯಿತು. ಈಗ ವಾಜಪೇಯಿಯವರ ಸರದಿ. ಅವರ ಕಾಲದಲ್ಲಿ ಮಂದಿರ ನಿರ್ಮಾಣವಾಗಬೇಕು. ಇದು ಸಮಸ್ತ ಹಿಂದೂಗಳ ಅಭಿಲಾಷೆ’’ – ಈ ಮಾತುಗಳನ್ನು ಹೇಳುವಾಗ ವಾಜಪೇಯಿಯವರ ಬಗ್ಗೆ ಇರುವ ಅಸಮಾಧಾನವನ್ನು ಅವರ ಮುಖದಲ್ಲಿ ಕಾಣುವುಕ್ಕೆ ಕಷ್ಟವಾಗಲಿಲ್ಲ.ಈ ವಿವಾದಕ್ಕೆ ಅಂತಿಮ ಪರಿಹಾರ ಏನು?. ‘’ಮುಸ್ಲಿಮರು ರಾಮಜನ್ಮಭೂಮಿ ಮೇಲೆ ಅನವಶ್ಯಕವಾಗಿ ತಮ್ಮ ಹಕ್ಕು ಚಲಾಯಿಸಲು ಹೋಗದೆ ಅದನ್ನು ಬಿಟ್ಟುಬಿಡುವುದೇ ಅಂತಿಮ ಪರಿಹಾರ. ಅವರು ಆ ನಿವೇಶನ ನೀಡಿದರೆ ನಾವು ಅವರಿಗೆ ಪ್ರೀತಿ-ವಿಶ್ವಾಸ-ರಕ್ಷಣೆ ನೀಡುತ್ತೇವೆ. ಮುಸ್ಲಿಮ್ ದೊರೆಗಳು 30 ಸಾವಿರ ದೇವಸ್ಥಾನಗಳನ್ನು ನಾಶ ಮಾಡಿದ್ದಾರೆ; ಅದರ ಬದಲಿಗೆ ನಾವು ಲಕ್ಷಾಂತರ ದೇವಸ್ಥಾನಗಳನ್ನು ಕಟ್ಟಿದ್ದೇವೆ. ಆದರೆ ರಾಮ ಹುಟ್ಟಿದ ಸ್ಥಳವನ್ನು ಹೇಗೆ ಬಿಡಲು ಸಾಧ್ಯ?’’ ಎನ್ನುವುದು ಅವರ ಪ್ರಶ್ನೆ.ಆ ನಂತರ ಕಾಶಿ. ಮಥುರಾದ ವಿವಾದವನ್ನು ಎತ್ತುವುದಿಲ್ಲವೆ?.
‘’ಅದನ್ನು ಹೇಗೆ ಬಿಟ್ಟುಬಿಡಲು ಸಾಧ್ಯ?. ಅಯೋಧ್ಯೆ. ಕಾಶಿ ಮಥುರಾ ಮೂರು ಕಡೆಗಳಿಂದಲೂ ಅವರು ಹೊರಹೋಗಬೇಕು. ಆಗ ಮಾತ್ರ ಎರಡು ಜನಾಂಗದ ನಡುವೆ ಸೌಹಾರ್ದಯುತ ಸಂಬಂಧ ಸಾಧ್ಯ. ನಾಸ್ತಿಕರನ್ನು (ಅಂದರೆ ಕಮ್ಯುನಿಸ್ಟರು ಮತ್ತು ಸೋಷಲಿಷ್ಟರಂತೆ) ನಂಬಿ ಅವರು ಎಷ್ಟು ದಿನ ಹಾರಾಡಲು ಸಾಧ್ಯ” ಎಂದು ಸಿಂಘಲ್ ಸಿಡಿಯುತ್ತಾರೆ.
ಕರಸೇವಕಪುರದಲ್ಲಿ ನಡೆಯುತ್ತಿರುವ ಚಟುವಟಿಕೆಗಳನ್ನು ಗಮನಿಸಿದರೆ ಮಾರ್ಚ್ 15ರಂದು ಮತ್ತೊಮ್ಮೆ ಅಯೋಧ್ಯೆ ದೇಶದ ಗಮನಸೆಳೆಯುವ ಸಾಧ್ಯತೆ ಸ್ಪಷ್ಟವಾಗಿ ಕಾಣುತ್ತದೆ. ಮಾರ್ಚ್ 15ರ ಹೊತ್ತಿಗೆ 12 ಲಕ್ಷ ರಾಮಸೇವಕರು ಇಲ್ಲಿ ಬರಲಿದ್ದಾರೆ ಎಂದು ವಿಎಚ್ಪಿ ನಾಯಕರು ಹೇಳುತ್ತಿದ್ದಾರೆ. ಅವರು ಅರ್ಧದಲ್ಲಿ ನಿಂತಿರುವ ಕಾರ್ಯ ಪೂರ್ಣಗೊಳಿಸಲು ಹೊರಡಬಹುದೇ?. ವಿಎಚ್ಪಿ ಉದ್ದೇಶ ಅದೇ ಇರಬಹುದೆಂದು ತೋರುತ್ತದೆ.
‘’ಅದನ್ನು ಹೇಗೆ ಬಿಟ್ಟುಬಿಡಲು ಸಾಧ್ಯ?. ಅಯೋಧ್ಯೆ. ಕಾಶಿ ಮಥುರಾ ಮೂರು ಕಡೆಗಳಿಂದಲೂ ಅವರು ಹೊರಹೋಗಬೇಕು. ಆಗ ಮಾತ್ರ ಎರಡು ಜನಾಂಗದ ನಡುವೆ ಸೌಹಾರ್ದಯುತ ಸಂಬಂಧ ಸಾಧ್ಯ. ನಾಸ್ತಿಕರನ್ನು (ಅಂದರೆ ಕಮ್ಯುನಿಸ್ಟರು ಮತ್ತು ಸೋಷಲಿಷ್ಟರಂತೆ) ನಂಬಿ ಅವರು ಎಷ್ಟು ದಿನ ಹಾರಾಡಲು ಸಾಧ್ಯ” ಎಂದು ಸಿಂಘಲ್ ಸಿಡಿಯುತ್ತಾರೆ.
ಕರಸೇವಕಪುರದಲ್ಲಿ ನಡೆಯುತ್ತಿರುವ ಚಟುವಟಿಕೆಗಳನ್ನು ಗಮನಿಸಿದರೆ ಮಾರ್ಚ್ 15ರಂದು ಮತ್ತೊಮ್ಮೆ ಅಯೋಧ್ಯೆ ದೇಶದ ಗಮನಸೆಳೆಯುವ ಸಾಧ್ಯತೆ ಸ್ಪಷ್ಟವಾಗಿ ಕಾಣುತ್ತದೆ. ಮಾರ್ಚ್ 15ರ ಹೊತ್ತಿಗೆ 12 ಲಕ್ಷ ರಾಮಸೇವಕರು ಇಲ್ಲಿ ಬರಲಿದ್ದಾರೆ ಎಂದು ವಿಎಚ್ಪಿ ನಾಯಕರು ಹೇಳುತ್ತಿದ್ದಾರೆ. ಅವರು ಅರ್ಧದಲ್ಲಿ ನಿಂತಿರುವ ಕಾರ್ಯ ಪೂರ್ಣಗೊಳಿಸಲು ಹೊರಡಬಹುದೇ?. ವಿಎಚ್ಪಿ ಉದ್ದೇಶ ಅದೇ ಇರಬಹುದೆಂದು ತೋರುತ್ತದೆ.
No comments:
Post a Comment