Monday, November 16, 2015

ಜನನುಡಿ-2015

ನಮ್ಮೆಲ್ಲರ ಪ್ರೀತಿಯ ದೇವನೂರು ಮಹದೇವ ಅವರು ಡಿಸೆಂಬರ್ 19-20ರಂದು ಮಂಗಳೂರಿನಲ್ಲಿ ನಡೆಯಲಿರುವ ಜನನುಡಿಯನ್ನು ಉದ್ಘಾಟಿಸಲು ಕೊನೆಗೂ ಒಪ್ಪಿಕೊಂಡಿದ್ದಾರೆ. 
ನಿನ್ನೆ ಮತ್ತೆ ಮಾತನಾಡುತ್ತಾ 'ಮಾನವೀಯ ನೆಲೆಯಲ್ಲಿ ನನ್ನ ಕೈಬಿಡಿ' ಎಂದು ಕೇಳಿಕೊಂಡರು. 'ಮಾನವೀಯ ನೆಲೆಯಲ್ಲಿಯೇ ನಮ್ಮ ಕೈ ಹಿಡಿಯಿರಿ ' ಎಂದು ಬೇಡಿಕೊಂಡೆ, ಒಪ್ಪಿಕೊಂಡರು.
ಮಹಾಮುಜುಗರದ ಈ ',ಮನುಷ್ಯ' ಇನ್ನು ನಮ್ಮ ಕೈಬಿಡಬಾರದೆಂದು ಈ ಸುದ್ದಿ ಯನ್ನು ಜಗಜ್ಜಾಹೀರುಗೊಳಿಸುತ್ತಿದ್ದೇನೆ.
ಅವರನ್ನು ಇನ್ನೊಂದು ಬಗೆಯ ಮುಜುಗರಕ್ಕೆ ಈಡುಮಾಡಬಾರದೆಂದು ಈ ಬಾರಿ ಖಂಡಿತ ಅವರಿಗೆ ಕಾಣೆಮೀನು ತಿನ್ನಿಸುವುದಿಲ್ಲ ಎಂದು ಆಣೆಮಾಡಿದ್ದೇನೆ. ನನ್ನ ಇಷ್ಟದ, ನಮ್ಮಂತಹವರ ಮೈಬಣ್ಣದ ಮತ್ತು ನಮ್ಮಂತಹವರಿಗೆ ಇಷ್ಟವಾಗುವ ಸುವಾಸನೆ ಬೀರುವ ಬೂತಾಯಿ ತಿನ್ನಿಸಬೇಕೆಂದಿದ್ದೇನೆ.

No comments:

Post a Comment