Saturday, August 20, 2016

'ಜೀವನದಲ್ಲಿ ಏನಾಗಬೇಕೆಂದಿದ್ದಿ?"

ಹತ್ತನೆಯ ತರಗತಿ ಪಾಸಾದ ಮಗಳನ್ನು ಹತ್ತಿರ ಕರೆದು 'ಜೀವನದಲ್ಲಿ ಏನಾಗಬೇಕೆಂದಿದ್ದಿ?" ಎಂದು ಪ್ರೀತಿಯಿಂದ ಕೇಳಿ. ಅವಳೇನಾಗಬಯಸುತ್ತಾಳೋ ಅದು ಸಾಧ್ಯವಾಗುವಂತೆ ನೋಡಿಕೊಳ್ಳಿ. ಬಂಧುಮಿತ್ರರು, ನೆರೆಹೊರೆಯವರು,ಸಮಾಜ ಯಾರ ಮಾತಿಗೂ ಕಿವಿಗೊಡಬೇಡಿ, ನಿಮ್ಮ ಮಗಳ ಎದೆಯ ದನಿಗೆ ಕಿವಿಗೊಡಿ. ಇದನ್ನೇ ಬೆಳ್ಳಿತಾರೆ ಸಿಂಧುವಿನ ತಂದೆತಾಯಿ ಮಾಡಿದ್ದು. ಸಿಂಧುವಿನ ಮೇಲೆ ಅಭಿನಂದನೆಯ ಮಳೆಗರೆಯುತ್ತಿರುವ ತಂದೆತಾಯಿಗಳೆಲ್ಲ ಇಷ್ಟು ಮಾಡಿದರೆ ಸಾವಿರಾರು ಸಿಂಧುಗಳನ್ನು ಭವಿಷ್ಯದಲ್ಲಿ ನಾವು ಕಾಣಬಹುದು. ಜೈ ಸಿಂಧು.

No comments:

Post a Comment