Wednesday, June 8, 2016

ಮುಂಗಾರು ಪತ್ರಿಕೆ: ವಿಧಾನಸಭೆಯೇ ಬರಲಿದೆ ಜಿಲ್ಲೆಗೆ..

ಇದು ೩೮ನೇ ಸ್ವಾತಂತ್ರ್ಯೋತ್ಸವದಂದು ಮುಂಗಾರು ಪತ್ರಿಕೆಗೆ ನಾನು ಮಾಡಿದ್ದ ನೀರುಸಾಬರ ಸಂದರ್ಶನ. ಪ್ರವಾದಿಯಂತೆ ಅಂದು ಅವರು ವ್ಯಕ್ತಪಡಿಸಿದ್ದ ಅನೇಕ ಅಭಿಪ್ರಾಯಗಳುಇಂದು ನಿಜವಾಗಿದೆ.
ಮಾತುಕತೆ ಮುಗಿದ ನಂತರ ನನ್ನೂರಿನ ಬಗ್ಗೆ ವಿಚಾರಿಸಿದ್ದರು. ನಾನು ನಮ್ಮೂರಿನ ಕುಡಿಯುವ ನೀರಿನ ಸಮಸ್ಯೆಯನ್ನು ಸ್ವಲ್ಪ ಭಾವುಕವಾಗಿಯೇ ವಿವರಿಸಿದ್ದೆ. ತಕ್ಷಣ ಅವರು PHE ಎಂಜನಿಯರ್ ಅವರನ್ನು ಕರೆಸಿ ನಮ್ಮೂರಿಗೊಂದು ಬೋರ್ ವೆಲ್ ಹಾಕಲು.ಆದೇಶಿಸಿದ್ದರು. ಅದು ನಮ್ಮೂರಿನ ಮೊದಲ ಬೋರ್ ವೆಲ್. ಈಗ ಅದು ಬತ್ತಿಹೋಗಿದೆ, ಆದರೆ ಅವರ ನೆನಪು ಮಾತ್ರ ಎಂದೂ ಬತ್ತಿ ಹೋಗದು.
ಅವರು ನಿಧನರಾದಾಗ 'ಅಲ್ಲಾ ನೀಡಿದ ವಿಚಿತ್ರ ಪವಾಡ' ಎಂಬ ದೀರ್ಘವಾದ Obituary ಬರೆದಿದ್ದೆ. ಹುಡುಕಿದರೆ ಸಿಗಬಹುದು.
ಅಂದ ಹಾಗೆ ಈ ಫೊಟೋದಲ್ಲಿರುವ ಸಂದರ್ಶಕ ನಾನೇ. ಇದಕ್ಕೆ ಸಾಕ್ಷಿ ಕೇಶವ ವಿಟ್ಲ, ಅವನೇ ಫೋಟೋ ತೆಗೆದದ್ದು.

No comments:

Post a Comment