Monday, October 26, 2015

ದಿನೇಶ್ ಅಮಿನ್ ಮಟ್ಟು ಸರ್ ಹೇಳಿದ್ದನ್ನು ಗ್ರಹಿಸುತ್ತಾ.....

ಹೊನ್ನಾವರ: ಆರ್‌‌‌ಎಸ್ಎಸ್‌, ನಾರಾಯಣ ಗುರು ಹಾಗೂ ವಿವೇಕಾನಂದರು ಹೇಳಿದ ಧರ್ಮ ಅನುಸರಿಸಿದರೆ ತಾವು ಆರ್‌‌ಎಸ್ಎಸ್ ಸೇರಲು ಸಿದ್ಧ. ಒಂದು ವೇಳೆ ನನ್ನ ಷರತ್ತನ್ನು ಕಲ್ಲಡ್ಕ ಪ್ರಭಾಕರ್ ಭಟ್‌ ಒಪ್ಪಿದರೆ, ಪೇಜಾವರ ಮಠಕ್ಕೆ ನನ್ನನ್ನು ಉತ್ತರಾಧಿಕಾರಿಯನ್ನಾಗಿ ಮಾಡಬೇಕು ಎಂದು ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್‌‌‌ಮಟ್ಟು ಹೇಳಿದರು.

ನಗರದಲ್ಲಿ ಮಂಥನ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯಿಂದ 'ಕಲಬುರ್ಗಿ ವಿಚಾರ ಮಾರ್ಗ ಮುಂದೇನು' ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ರಾಮಕೃಷ್ಣರನ್ನು ಟೀಕಿಸುವ ಬದಲು, ರಾಮಮನೋಹರ ಲೋಹಿಯಾ, ಅಂಬೇಡ್ಕರ್, ನಾರಾಯಣ ಗುರು, ಪೆರಿಯಾರ ವಿಚಾರ ಹರಡುವ ಮೂಲಕ ವಿಚಾರವಾದ ಬೆಳೆಸಬೇಕಿದೆ. ಕುವೆಂಪು, ಕನಕದಾಸರ, ಬಸವಣ್ಣರನ್ನು ಓದಿಕೊಂಡವರು ಕೋಮುವಾದಿಯಾಗಲು ಸಾಧ್ಯವಿಲ್ಲ. ಹಾಗಾಗಿ ಈ ಐಕಾನ್‌‌‌ಗಳನ್ನು ಮುಂದಿಟ್ಟುಕೊಂಡು ಕೋಮುವಾದ ಎದುರಿಸಬೇಕು ಎಂದರು.
1991ರಲ್ಲಿ ಹೊಸ ಆರ್ಥಿಕ ನೀತಿ ಮತ್ತು ಬಾಬರಿ ಮಸೀದಿ ಬೀಳಿಸುವ ಮೂಲಕ ಕೋಮುವಾದವು ದೇಶವನ್ನು ಪ್ರವೇಶಿಸಿದವು. ಈ ಎರಡರ ಅಪಾಯವನ್ನು ಈಗ ಎದುರಿಸಬೇಕಿದೆ. ಅಚ್ಚೇ ದಿನದ ಪರಿಣಾಮ ವಿಚಾರವಾದಿಗಳ ಕೊಲೆಗಳು ಪತ್ರಿಕೆಗಳ ಮುಖಪುಟ ಆವರಿಸಿಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
***
* ಒಂದು ಅಡಿ ಟಿಪ್ಪಣಿ:
ಬಹಳಷ್ಟು ಗೆಳೆಯರು ಅಮ್ಮೀನ್ ಮಟ್ಟು ಸರ್ ಏನು ಹೇಳಿದ್ರು ಅಂತ ಓದಿದಂತಿಲ್ಲ. ಅವರ ಮಾತಿನ ವ್ಯಂಗ್ಯಾರ್ಥವನ್ನು ಗ್ರಹಿಸಿಲ್ಲ. ಻ಅವರ ಮಾತಿನ ಹಿಂದೆ ಇರುವ ಕೋಪವನ್ನು ಸಹ ಅರ್ಥಮಾಡಿಕೊಂಡಂತಿಲ್ಲ. ಪೆರಿಯಾರ, ಬಸವಣ್ಣ, ನಾರಾಯಣ ಗುರು ಅವರು ಹೇಳಿದ್ದನ್ನು ಆರ್.ಎಸ್.ಎಸ್. ಒಪ್ಪಿ ಅನುಸರಿಸಿದರೆ....ಆರ್.ಎಸ್.ಎಸ್. ಸೇರಬಹುದು. ಪೇಜಾವರ ಮಠಕ್ಕೆ ಉತ್ತರಾಧಿಕಾರಿ ಆಗುವುದು ಎಂದರೆ ಸನ್ಯಾಸಿಯಾಗಿ ಪೇಜಾವರರ ಈಗಿನ ತಾರತಮ್ಯ ನೀತಿ ಅನುಸರಿಸುವುದಲ್ಲ. ಸಮಾನತೆ ಮತ್ತು ಮನುಷ್ಯ ಪ್ರೀತಿಯನ್ನು ಅವರು ಒಪ್ಪಿ ಅನುಸರಿಸಿದರೆ ಎಂಬ ಶರತ್ತನ್ನು ಬಲಪಂಥೀಯರು ಹೆಚ್ಚು ಒತ್ತು ಕೊಟ್ಟು ಒಧಿ ಕೊಂಡಿಲ್ಲ. ಅಷ್ಟೆ. ``ಅದಕ್ಕೇ ಬರೀ ಓದು ಸಾಲದು. ವಿವೇಕ ಮುಖ್ಯ ಅಂಥ ''
ಮಾತಿನ ಒಳ ಅರ್ಥ , ಧ್ವನಿ ಗ್ರಹಿಕೆ ಸರಿಯಿದ್ದರೆ ಡಾ.ಕಲಬುರ್ಗಿ ಅವರ ಹತ್ಯೆ ನಡೆಯುತ್ತಿರಲಿಲ್ಲ. ಮಟ್ಟು ಸರ್ ಮಾತಿನ ಅರ್ಥ ...`` ಬಲಪಂಥೀಯರು ಬಡತನ, ಜಾತಿ ವ್ಯವಸ್ಥೆ, ಆರ್ಥಿಕ ಮತ್ತು ಸಾಮಾಜಿಕ ಸಮಾನತೆ ಕುರಿತು ಮಾತನಾಡುತ್ತಿಲ್ಲ''.`` ಧರ್ಮ ರಕ್ಷಣೆಯ ಭ್ರಮೆ ಮತ್ತು ಮುಖವಾಡದಲ್ಲಿ ಬದುಕುತ್ತಿದ್ದಾರೆ'' ಎಂದು. ಅಮ್ಮೀನ್ ಮಟ್ಟು ಸರ್ ಹೇಳಿದಂತೆ ಅವರ ಹೇಳಿಕೆಗೆ ಈಗಾಗಲೇ ಬಲಪಂಥೀಯರು ಫೇಸ್ ಬುಕ್ ನಲ್ಲಿ ವ್ಯಂಗ್ಯ ಆರಂಭಿಸಿದ್ದಾರೆ. ಅವರನ್ನು , ಅವರ ಹೇಳಿಕೆಗಳನ್ನು ಎಫ್ ಬಿ ಮೂಲಕ ಹಿಂಬಾಲಿಸುತ್ತಿದ್ದಾರೆ ಎಂಬುದು ನಿಜವಾಗಿದೆ. ಅವರು ನಿನ್ನೆ ಹೊನ್ನಾರವರದಲ್ಲಿ ಮಾತನಾಡಿದ ಮಾತುಗಳು ಅಪಾರ್ಥೀಕರಣ ಬಲಪಂಥೀಯರಿಂದ ಜೋರಾಗಿ ನಡೆದಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಮತ್ತು ಅದನ್ನು ವಿರೂಪಗೊಳಿಸುವ ಕಾರ್ಯ ಜೋರಾಗಿ ಸಾಗಿದೆ...
- ನಾಗರಾಜ ಹರಪನಹಳ್ಳಿ

No comments:

Post a Comment